Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೈಗೆಟಕುವ ದರದ 4-ಚಕ್ರದ ಮಿನಿ-ಟ್ರಕ್ ಏಸ್ ಪ್ರೋ ಅನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್




 ಬಳ್ಳಾರಿ, 27 ಜೂನ್ 2025: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಸರಕು ಸಾಗಣೆ ವಿಭಾಗದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು 4 ಚಕ್ರದ ಮಿನಿ ಟ್ರಕ್ ಏಸ್ ಪ್ರೋ ಅನ್ನು ಬಿಡುಗಡೆ ಮಾಡಿದೆ.ಕೇವಲ ₹X.99 ಲಕ್ಷದಿಂದ ಆರಂಭವಾಗುವ ಅತ್ಯಂತ ಕೈಗೆಟಕುವ ಬೆಲೆಯೊಂದಿಗೆ, ಟಾಟಾ ಏಸ್ ಪ್ರೋ ಭಾರತದ ಅತ್ಯಂತ ಕೈಗೆಟಕುವ ನಾಲ್ಕು-ಚಕ್ರದ ಮಿನಿ ಟ್ರಕ್ ಆಗಿದ್ದು, ಅಸಾಧಾರಣ ದಕ್ಷತೆ,  ಬಹುಮುಖತೆ ಮತ್ತು ಉನ್ನತ ಮೌಲ್ಯವನ್ನು ನೀಡುತ್ತದೆ.


ಹೊಸ ತರಂಗದ ಉದ್ಯಮಿಗಳನ್ನು ಸಶಕ್ತಿಕರಣಗೊಳಿಸಲು ವಿನ್ಯಾಸಗೊಳಿಸಲಾದ ಟಾಟಾ ಏಸ್ ಪ್ರೋ, ಪೆಟ್ರೋಲ್, ಬೈ-ಫ್ಯೂಯಲ್ (ಸಿ ಎನ್ ಜಿ + ಪೆಟ್ರೋಲ್), ಮತ್ತು ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಲಭ್ಯವಿದೆ – ಗ್ರಾಹಕರಿಗೆ ತಮ್ಮ ವ್ಯಾಪಾರದ ಅಗತ್ಯಗಳಿಗೆ ಸೂಕ್ತವಾದ ವಾಹನವನ್ನು ಆಯ್ಕೆ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ.


ಏಸ್ ಪ್ರೋನ ಬಿಡುಗಡೆ ಕುರಿತು, ಟಾಟಾ ಮೋಟಾರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಗಿರೀಶ್ ವಾಘ್ ಅವರು, “ಟಾಟಾ ಏಸ್ನ ಬಿಡುಗಡೆಯು ಭಾರತದಲ್ಲಿ ಸರಕು ಸಾಗಣೆ ವಿಭಾಗದಲ್ಲಿ ಕ್ರಾಂತಿಯನ್ನು ತಂದಿತು. ಕಳೆದ ಎರಡು ದಶಕಗಳಲ್ಲಿ, ಇದು 25 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಶಕ್ತಿಕರಣಗೊಳಿಸಿ, ಪ್ರಗತಿ ಮತ್ತು ಸಾಧ್ಯತೆಯ ಸಂಕೇತವಾಯಿತು. -ಹೊಸ ಟಾಟಾ ಏಸ್ ಪ್ರೋನೊಂದಿಗೆ, ನಾವು ಹೊಸ ತಲೆಮಾರಿನ ಕನಸುಗಾರರಿಗಾಗಿ ಈ ಪರಂಪರೆಯನ್ನು ನವೀಕೃತ ಉದ್ದೇಶದೊಂದಿಗೆ ಮುಂದುವರೆಸುತ್ತಿದ್ದೇವೆ. ಸ್ಥಿರತೆ, ಸುರಕ್ಷತೆ ಮತ್ತು ಲಾಭದಾಯಕತೆಗಾಗಿ ವಿನ್ಯಾಸಗೊಳಿಸಲಾದ ಏಸ್ ಪ್ರೋ, ತಮ್ಮ ಭವಿಷ್ಯವನ್ನು ತಾವೇ ತೆಗೆದುಕೊಳ್ಳಲು ಸಿದ್ಧರಿರುವ ಆಕಾಂಕ್ಷಿಗಳ ಆಕಾಂಕ್ಷೆಗಳನ್ನು ಈಡೇರಿಸಲು ಹೆಚ್ಚಿನ ಗಳಿಕೆಯ ಸಾಮರ್ಥ್ಯವನ್ನು ಒದಗಿಸುತ್ತದೆ” ಎಂದು ಹೇಳಿದ್ದಾರೆ.


ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದ ಉಪಾಧ್ಯಕ್ಷ ಮತ್ತು ವ್ಯಾಪಾರ ಮುಖ್ಯಸ್ಥ (SCVPU) ಶ್ರೀ ಪಿನಾಕಿ ಹಲ್ದಾರ್ ಅವರು ಮಾತನಾಡಿ, “ಉದ್ದೇಶಿತ ಟಾಟಾ ಏಸ್ ಪ್ರೋವನ್ನು ಗ್ರಾಹಕರ ಒಳನೋಟಗಳನ್ನು ಪಡೆದು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿವಿಧ ಅಗತ್ಯಾಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಲಕ್ಷಾಂತರ ಕಿಲೋಮೀಟರ್ಗಳನ್ನು ಒಳಗೊಂಡು ಕಠಿಣ ಪರೀಕ್ಷೆಗೆ ಒಳಗಾಗಿದೆ. ಬಹು-ಇಂಧನ ಆಯ್ಕೆಗಳು, ಸುಲಭ ಕೈಗೆಟಕುವಿಕೆಯ ದರ ಮತ್ತು ವರ್ಧಿತ ಚಾಲನಾ ಸಾಮರ್ಥ್ಯದೊಂದಿಗೆ, ಏಸ್ ಪ್ರೋ ವಿವಿಧ ಬಳಕೆಯ ಸಂದರ್ಭಗಳಲ್ಲಿ ಉನ್ನತ ಮೌಲ್ಯವನ್ನು ನೀಡುತ್ತದೆ” ಎಂದು ಹೇಳಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ