Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂಡನಂಬಿಕೆಗಳು ಮಾನವನ ಆತ್ಮಸ್ಥೈರ್ಯವನ್ನು ಕುಂದಿಸುತ್ತವೆ: ಬಿ.ಬಿ.ಕೌಜಲಗಿ

ರನ್ನ ಬೆಳಗಲಿ: ಜು 06: ಮುಧೋಳ ತಾಲೂಕ ರನ್ನ ಬೆಳಗಲಿಯ ಪಟ್ಟಣದ ಸದಾಶಿವ ನಗರದಲ್ಲಿರುವ ಸಿದ್ದಾರೂಢ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಕರು, ಪುನೀತ್ ಪ್ರಶಸ್ತಿ ವಿಜೇತರಾದ ಬಿ.ಬಿ ಕೌಜಲ ಅವರು ಮೂಡನಂಬಿಕೆಗಳು ಮಾನವನ ಆತ್ಮಸ್ಥೈರ್ಯವನ್ನು ಕುಂದಿಸುತ್ತವೆ ಆದ್ದರಿಂದ ಈ ಪವಾಡ ರಹಸ್ಯ ಬಯಲು ಕಾರ್ಯಕ್ರಮವು ಮಹತ್ವವನ್ನು ಪಡೆದಿದೆ. ಬೆಕ್ಕು, ನಾಯಿ, ಖಾಲಿ ನೀರಿನ ಬಿಂದಿಗೆ, ನಾವು ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಎದುರಿಗೆ ಅಥವಾ ಅಡ್ಡ ಬಂದರೆ,ಮನೆಯ ಮುಂದೆ ನಾಯಿ ಕಾಗೆ ಇವೆಲ್ಲ ಬೊಗಳಿದರೆ, ಅಪಶಕುನ, ಆಪತ್ತು ಕಾದಿದೆ ಎಂದು ತಿಳಿದುಕೊಳ್ಳುವ ಮನುಷ್ಯನ ಬುದ್ದಿಗೆ ಏನು ಹೇಳಬೇಕು, ತಮ್ಮ ಆಹಾರಗಳನ್ನು ಅರಸಿಕೊಂಡು ಈ ಪರಿಸರದಲ್ಲಿ ಓಡಾಡುವ ಪ್ರಾಣಿಗಳು, ಇಂದಿನ ವಿಜ್ಞಾನ ಮುಂದೆ ಇದ್ದ ಯುಗದಲ್ಲಿ ಅವುಗಳ ಬದುಕು ನಮ್ಮ ಹಾಗೆ ಇದೆಯಲ್ಲ ಎಂದು ತಿಳಿಯುವ
ಮನಸ್ಥಿತಿ ನಮ್ಮ ಮಕ್ಕಳಿಂದ ಪಾಲಕರು,ಸಮಾಜ ತಿಳಿದುಕೊಳ್ಳಬೇಕಾಗಿದೆ.

ರೈತ ಭೂಮಿಯನ್ನು ನೇಗಿಲು ಹೊಡೆಯುವ ಸಮಯದಲ್ಲಿ ಪಕ್ಷಿ, ಪ್ರಾಣಿಗಳು ಜೋರಾಗಿ ಕಿರುಚುತ್ತಾವೆ, ಏಕೆಂದರೆ, ಅವುಗಳು ಭೂಮಿಯ ಮೇಲೆ ತಮ್ಮ ಸಂತತಿಯನ್ನು ಹೊಲದಲ್ಲಿರುವ ಮೊಟ್ಟೆ, ಮರಿಗಳ ರಕ್ಷಣೆಗಾಗಿ ಹಾತೊರೆಯುವ ಆತಂಕಕ್ಕೆ ಒಳಗಾಗುತ್ತವೆ.ಅದನ್ನು ಅಪಾರ್ಥ ಮಾಡಿಕೊಳ್ಳಬಾರದು.ಇತ್ತೀಚಿನ ದಿನಗಳಲ್ಲಿ ನಗರವಾಸಿಗಳು ಹೆಚ್ಚು ದುಷ್ಟರ ಮೂಢನಂಬಿಕೆಗೆ ಒಳಗಾಗುತ್ತಾರೆ.ಇಂಥಹ ಪವಾಡಗಳನ್ನು ಹೊರಗೆ ಉದ್ದೇಶವೇ ಪವಾಡ ರಹಸ್ಯದ ಮಹತ್ವ ಎಂದು ತಮ್ಮ ಪವಾಡ ರಹಸ್ಯ ಪ್ರಯೋಗಗಳನ್ನು ನಿಂಬೆಹಣ್ಣು ಮಾಯ ಗೊಂಬೆ ಸೂಜಿ ಚುಚ್ಚುವುದು, ಟೆಂಗಿನಕಾಯಿಯಲ್ಲಿ ಹೂಗಳನ್ನು ಬರಿಸುವದು, ನಿಂಬೆಹಣ್ಣಿನನಲ್ಲಿ ರಕ್ತ ಬರಿಸುವುದು ಇತ್ಯಾದಿ ದೃಶ್ಯಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ, ರವೀಂದ್ರ.ಕಂಬಾರ ವಹಿಸಿದ್ದರು.ಎಸ್.ಎಸ್. ಉದಪುಡಿ, ಎಂ.ಆರ್. ಕುಲಕರ್ಣಿ,ಪಿ.ಕೆ.ಪವಾರ, ಎಂ. ಎಸ್.ಕಲ್ಯಾಣಿ, ಎಂ.ವಿ. ಹೊಸೂರ, ಎಂ.ಎಸ್. ಮೇಗಾಡಿ, ಶ್ರೀಶೈಲ ಕಾಡದೇವರ, ಅಮಿತ ತಳಗೇರಿ, ಶೇಖರ ಬಾಗೇವಾಡಿ, ರೇಣುಕಾ ಗಾಣಿಗೇರ ಗುರುವೃಂದ ಗುರು, ಮಾತೆಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಬಿ.ಪಿ ಚೋಪಡೆ ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ