ಬೆಂಗಳೂರು:13.. ಹರಿದಾಸ ಪರಂಪರೆಯ ದಾಸಶ್ರೇಷ್ಠರನ್ನು ಸದಾ ಸ್ಮರಿಸುತ್ತಾ ಸಜ್ಜನರಲ್ಲಿ ದೈವೀಕ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಬಿತ್ತುವ ಮೂಲಕ ಭವದ ಬದುಕಿಗೆ ಬೆಳಕು ನೀಡುತ್ತಿರುವ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಇದೇ ಮೇ ೩೧ ರಂದು ಭಾನುವಾರ ಶ್ರೀಮದ್ಭಗವದ್ಗೀತೆ ತಾತ್ಪರ್ಯ ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿಕೊಡಲಿದ್ದಾರೆ.
ಅಧಿಕ ಮಾಸದ ಪ್ರಯುಕ್ತ ಸೋಲದೇವನಹಳ್ಳಿ ಗೆಳೆಯರ ಬಳಗ ಮತ್ತು ಶ್ರೀ ವನಮಾಲಿ ವಿಷ್ಣು ಸಹಸ್ರನಾಮ ಮಂಡಳಿ ಈ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ ೮ ಗಂಟೆಯಿAದ ಹನ್ನೊಂದು ಬಾರಿ ಪಾರಾಯಣ ಮಾಡಿಸುವ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ ೧೨-೩೦ರಿಂದ ೧ ಗಂಟೆಯವರೆಗೆ ಮಹಾಮಂಗಳಾರತಿ ಜರುಗಲಿದೆ. ಕತ್ರಿಗುಪ್ಪೆಯ ಕೆ.ಎಸ್. ನರಸಿಂಹಸ್ವಾಮಿ ಉದ್ಯಾನವನ ರಸ್ತೆಯ ವಾಟರ್ ಟ್ಯಾಂಕ್ ನ ಶ್ರೀ ಕಲ್ಯಾಣ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತರು ಮೇ ೨೫ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸುಧೀಂದ್ರ ಬಿ.ಎನ್-೯೯೦೨೯ ೭೧೫೨೭, ವಾಸು-೯೨೪೩೦ ೨೬೭೨೩, ಶಾಮ ಪ್ರಸಾದ್-೭೬೭೬೯ ೯೨೫೨೫, ಟಿ.ಎಸ್.ನಾಗರಾಜರಾವ್-೯೪೪೮೯ ೯೩೧೫೦ ವೈ.ಆರ್.ಗೋಪಿನಾಥ್-೯೫೩೫೧ ೦೨೧೯೫ ಇವರನ್ನು ಸಂಪರ್ಕಿಸಬಹುದು.
