ಮಹಾಲಿಂಗಪುರ,ಮೇ,೧೫ : ಕ್ರೀಡೆ ಯಾವುದೇ ಇರಲಿ ನಿತ್ಯ ಒಂದು ಗಂಟೆ ಸಮಯ ಮೈದಾನದಲ್ಲಿ ಆಟ ಆಡಿದರೆ ರೋಗಗಳು ದೂರ ಆಗುತ್ತವೆ. ಆಯುಷ್ಯ ಹೆಚ್ಚುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುತ್ತಾರೆ ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಹೇಳಿದರು.
ನಗರದ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಾಗಲಕೋಟ ಪ್ರಿಮಿಯರ ಲೀಗ್ ಮೊದಲ ಆವೃತ್ತಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಳುಗಳು ಕ್ರೀಡಾ ಸ್ಫೂರ್ತಿಯಿಂದ ಆಡಿ ಸೋಲು ಗೆಲವು ಮುಖ್ಯ ಅಲ್ಲ ಕ್ರೀಡಾ ಸ್ಫೂರ್ತಿ ಮುಖ್ಯ ಅದನ್ನು ಮೆರೆದರೆ ಗೆಲವು ಬಂದೇ ಬರುತ್ತದೆ.ಇಂದಿನ ಜಗತ್ತಿನಲ್ಲಿ ಕ್ರಿಕೆಟ್ ಅನ್ನುವುದು ಒಂದು ಧರ್ಮವಾಗಿ ಬೆಳೆಯುತ್ತಿದೆ ಸ್ಟಾರ್ ಆಟಗಾರರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಪ್ರತಿ ವರ್ಷ ಈ ಪಂದ್ಯಾವಳಿ ನಡೆಯಬೇಕು ಹೊಸ ಹೊಸ ಆಟಗಾರರು ಬೆಳಕಿಗೆ ಬರಲು ಇದು ಸಹಾಯಕವಾಗುತ್ತದೆ ಎಂದರು.
ಕ್ರೀಕೇಟ್ ಪಂದ್ಯಾವಳಿಯನ್ನು ರಿಬ್ಬನ್ ಕಟ ಮಾಡುವ ಮೂಲಕ ಉದ್ಘಾಟನೆ ಮಾಡಿದ ಕೆ ಪಿ ಸಿ ಸಿ ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕರು, ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ್ ಮಾತನಾಡಿ ಆಟವು ಇಂದು ವ್ಯಾಪಾರವಾಗಿ ಮಾರ್ಪಟ್ಟಿದ್ದು ದುರಂತವೇ ಸರಿ ನಮ್ಮನ್ನೇ ನಾವೇ ಮಾರಿಕೊಂಡು ಆಟ ಆಡುವ ಸ್ಥಿತಿ ಬಂದಿದೆ ಮುಂದಿನ ದಿನಮಾನಗಳಲ್ಲಿ ಈ ಆಟವು ನಶಿಸುವ ಅಪಾಯ ಈಗಲೇ ಗೋಚರಿಸುತ್ತಿದೆ. ಇಂದು ವಿಶ್ವದಾದ್ಯಂತ ಐ ಪಿ ಎಲ್ ಸೇರಿ ನೂರಾರು ಲೀಗಗಳು ಆರಂಭವಾಗಿವೆ ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಅಪಾಯ ಬಂದಿದೆ ಇಂದು ದೇಶ ಪ್ರತಿನಿಧಿಸಲು ಆಟಗಾರರ ಕೊರತೆ ಆಗುತ್ತಿದೆ ಇದು ಅಪಾಯಕಾರಿ ನಡೆ ಆಗಿದೆ ನಾನು ಕ್ರೀಡಾಳುಗಳೊಂದಿದೆ ಸದಾ ಇರುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಶೇಖರ ಅಂಗಡಿ, ಬಸವರಾಜ್ ರಾಯರ, ಪಾಪಾ ನಾಲಬಂಧ, ಸಚಿನ್ ಮೂರಗುಂಡಿ, ಅಶೋಕ್ ಅಂಗಡಿ, ಸೈಪಲಿ ಭಾಗವಾನ , ಜಬಿಯುಲ್ಲಾ ಮುಲ್ಲಾ, ಶಿವಾನಂದ ಸಣ್ಣಕ್ಕಿ, ತಾಹಿರ ಸೌದಾಗರ, ದುಂಡಪ್ಪ ಪಟ್ಟಣಶೆಟ್ಟಿ , ಇಮಾಮ್ ಅಂಬಿ, ,ಆಯಾಸ ಯಾದವಾಡ ರಾಜೇಂದ್ರ ನಾವಿ ಸೇರಿ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
