ಬಳ್ಳಾರಿ, ಏಪ್ರಿಲ್ 25.: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಖ್ಯಾತ ಲೇಖಕರಾದ ಸಿದ್ದರಾಮ ಕಲ್ಮಠ ಅವರ ಸಾಹಿತ್ಯ ಸಾಧನೆ ಮತ್ತು ಸೌಹಾರ್ದ ಸಂದೇಶಕ್ಕಾಗಿ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ವತಿಯಿಂದ ಮಂಡ್ಯದಲ್ಲಿ ಗೌರವ ಸನ್ಮಾನ ಮಾಡಲಾಯಿತು.
ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಸೌಹಾರ್ದಸಿರಿ ಸಾಧಕರಿಗೆ ಗೌರವ ಸನ್ಮಾನ’ ಕಾರ್ಯಕ್ರಮದಲ್ಲಿ ಕಲ್ಮಠರನ್ನು ಸನ್ಮಾನಿಸಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ನಿವೃತ್ತ ನ್ಯಾಯಾಧೀಶ ನಬಿ ರಸೂಲ್ ಮಮದಾಪುರ, ಝಾಕೀರ್ ಹುಸೇನ್ ಉಚ್ಚಿಲ, ಮುಖ್ತಾರ್ ಅಹ್ಮದ್, ಮುಷ್ತಾಕ್ ಹೆನ್ನಾಬೈಲು, ಅನುಪಮ ಮಾಸಪತ್ರಿಕೆಯ ಸಂಪಾದಕಿ ಎಂ. ಶೆಹನಾಜ್, ಅನೀಸ್ ಪಾಷಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಟೆಲಿಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಡಾ. ಮಹಮ್ಮದ್ ಶಫಿ ಮುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು.