Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜ ಸೇವಕ ಮಾನವೀಯ ಮೌಲ್ಯಗಳು ಪ್ರತಿಪಾದಕ ಲಿಂಗೈಕ್ಯ ಭೀಮಣ್ಣ ಖಂಡ್ರೆ : ಬಿ. ಪಂಚಾಕ್ಷರಪ್ಪ







ಬಳ್ಳಾರಿ20..: ಲೋಕ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಸಮಾಜ ಸೇವಕರಾಗಿ ಮಾನವೀಯತೆ ಮತ್ತು ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಸರಳತೆ ಸತ್ಯ ಮತ್ತು ನಿಷ್ಠೆ ಅತ್ಯುತ್ತಮ ಜನ ಪರ  ಕಾಳಿಜಿಯೊಂದಿಗೆ ಜನರೊಂದಿಗೆ ಬೆರೆತು ತಮ್ಮ ಜೀವನವನ್ನೆಲ್ಲ ಸಮಾಜದ ಹಿತಕ್ಕಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಅಗಲಿಕೆ ಇಡೀ ನಾಡಿಗೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ಬಿಟ್ಟುಹೋದ ಸಮಾಜ ಸೇವೆಯನ್ನು ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರಂತೆ ಸಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬಳ್ಳಾರಿ ಜಿಲ್ಲಾ ಅಧ್ಯಕ್ಷ  ಬಿ. ಪಂಚಾಕ್ಷರಪ್ಪ ನುಡಿ ನಮನ ಸಲ್ಲಿಸಿದರು.


ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ತಾತನವರ ಮಠದ ಪ್ರೌಢದೇವರಾಯ ಸಭಾ ಮಂಟಪದ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಲಿಂಗೈಕ್ಯ ಲೋಕ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷ ಡಾ. ಬೀಮಣ್ಣ ಖಂಡ್ರೆ ರವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


 ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರಯ್ಯ ಸ್ವಾಮಿ ಮಾತನಾಡಿ,  ಅಖಿಲ ಭಾರತ ವೀರಶೈವ ಮಹಾಸಭಾ ಪ್ರಮುಖ ಕೊಂಡಿಗಳಾದ ಎನ್. ತಿಪ್ಪಣ್ಣ, ಶ್ಯಾಮನೂರು ಶಿವಶಂಕರಪ್ಪ, ಮತ್ತು ಡಾ. ಭೀಮಣ್ಣ ಖಂಡ್ರೆ ಹೀಗೆ ಸಾಲು ಸಾಲು ಮಹನೀಯರು ನಮ್ಮನ್ನು ಅಗಲಿರುವುದು ಈ ನಾಡಿಗೆ ಸಮಾಜಕ್ಕೆ ದೊಡ್ಡ ಆಘಾತ ಮತ್ತು ನೋವಿನ ಸಂಗತಿ . ಸಮಾಜಕ್ಕೆ ತುಂಬಲಾರದ ಬಾರಿ ನಷ್ಟ. ಅವರಂತೆ ಸಮಾಜ ಒಟ್ಟಾಗಿ ಒಂದಾಗಿ ಹೋಗುವ ಸತ್ಸಂಪ್ರದಾಯ ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.


ರೈತ ಹೋರಾಟಗಾರ ಪುರುಷೋತ್ತಮ ಗೌಡ ಮಾತನಾಡಿ, ಶತಾಯುಷಿ ಲಿಂಗೈಕ್ಯ ಭೀಮಣ್ಣ ಖಂಡ್ರೆ ಯವರು ಸಮಾಜಕ್ಕೆ ಸೇವೆ ಸಲ್ಲಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.


ಕಸಾಪ  ನಿಕಟ ಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಗುರು ವಿರಕ್ತರನ್ನು ಒಂದುಗೂಡಿಸಿದ ಮೇರು ನಾಯಕರು.ನಮ್ಮ ಸಮಾಜದ ಏಳು ಬೀಳುಗಳನ್ನು ಕಷ್ಟ ನಿಷ್ಟೂರಗಳನ್ನು ದೌರ್ಬಲ್ಯಗಳನ್ನು ನಿಭಾಯಿಸುವ ಶಕ್ತಿ  ಅವರಲ್ಲಿತ್ತು.. ಈಗ ನಮ್ಮ ಸಮುದಾಯ ಈ ದೊಡ್ಡ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಒಗ್ಗಟ್ಟಾಗಿ ಹೋಗುವ ಕೆಲಸ ನಿರ್ವಹಿಸಬೇಕಾಗಿದೆ ಎಂದರು.


 ಸಮಾಜದ ಮುಖಂಡರಾದ ಕೋಳೂರು ಚಂದ್ರಶೇಖರ ಗೌಡ, ವಕೀಲ ಕಣೇಕಲ್ಎರಿಸ್ವಾಮಿ ಗೌಡ, ಎಚ್ ಕೆ.ಗೌರಿಶಂಕರ ಸ್ವಾಮಿ, ಕಾರ್ಯಕ್ರಮದಲ್ಲಿ ಮಹನೀಯರನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.


ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆಎಂ ಪುಟ್ಟರಾಜ, ಎಸ್ ಎಂ ನಾಗರಾಜ ಸ್ವಾಮಿ ಸಿರಿಗೇರಿ, ಡಿ ಅರುಣ್ ಕುಮಾರ್ ದಾಸಪುರ, ಮುಖಂಡರಾದ ಕೇಣಿ ಬಸವರಾಜ್, ಬಿಸ್ಲಳ್ಳಿ ಬಸವರಾಜ್, ಲಿಂಗರೆಡ್ಡಿ, ಮೌಲ್ಯ ಮಂಜುನಾಥ, ಜಾಲಿಹಾಳ್ ಶ್ರೀಧರ್, ಕೊಂಚಗೇರಿ ಮಂಜುನಾಥ, ವಿಕೆ ತಿಪ್ಪೇಶ್ ಗೌಡ ಕಪ್ಗಗಲ್, ದಿವಾಕರ ಗೌಡ, ಹಾಗೂ ಸಮಾಜದ ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ