ಬಳ್ಳಾರಿ: 11..ನಗರದ ಬಸವ ಭವನದಲ್ಲಿ ನಿನ್ನೆ ಸಂಜೆ ವೀರಶೈವ ಲಿಂಗಾಯತ ರೆಡ್ಡಿ ಸಮಾಜದಿಂದ ಹಮ್ಮಿಕೊಂಡಿದ್ದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ 604 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯ್ತು.
ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕಲಾಧಿಪತಿ ಡಾ.ಯಶವಂತ ಭೂಪಾಲ್. ಸಾಮಾಜಿಕ ಸೇವೆಗಾಗಿ ಸಂಗನಕಲ್ಲು ಬಸವರಾಜ್. ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಬಳ್ಳಾರಿ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಮಂಜುನಾಥ. ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಮಾಜಿ ಮೇಯರ್ ಪಾರ್ವತಿ ಇಂದುಶೇಖರ್.
ಸಾವಯವ ಕೃಷಿಗಾಗಿ ಸಿಂದವಾಳ ಕೇಶವರಡ್ಡಿ ಮತ್ತು
ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ನಡವಿ ವೀರಭದ್ರಗೌಡ ಅವರನ್ನು ಸಮಾಜದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಮುಖಂಡರಾದ ಉಡೇದ ಬಸವರಾಜ್,ಸಂಗನಕಲ್ಲು ಹಿಂಮತರಾಜ್, ಜಾನೆಕುಂಟೆ ನೇಪಾಕ್ಷಪ್ಪ, ನೆಲ್ಲುಡಿ ಅಯ್ಯಪ್ಪ, ಸುರೇಖ ಮಲ್ಲನಗೌಡ, ಡಾ.ರೇಣುಕಾ ಮಂಜುನಾಥ, ಡಾ.ಭಾಗ್ಯಲಕ್ಷ್ಮಿ, ಸುಮಂಗಳಮ್ಮ ಬಸವರಾಜ್, ಸುಮಾರೆಡ್ಡಿ ಮೊದಲಾದವರು ಸನ್ಮಾನಿಸಿ ಗೌರವಿಸಿದರು. ಡಾ.ಬಸವರಾಜ್ ಗದಗಿನ, ಮಿಂಚೇರಿ ನರೇಂದ್ರಬಾಬು, ಸನ್ಮಾನಿತರನ್ನು ಪರಿಚಯಿಸಿದರು.