ಯರಗಟ್ಟಿ,ಮೇ,೧೧ : ಪಟ್ಪಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು. ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪಶು ವೈದ್ಯಾಧಿಕಾರಿ ಎಂ. ವ್ಹಿ. ಪಾಟೀಲ, ಎಎಸ್ಐ ಬಿ. ಕೆ. ರಂಗಣ್ಣವರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸನವರ, ಪ.ಪಂ. ಸದಸ್ಯ ನಿಖಿಲ ಪಾಟೀಲ, ವಿಠ್ಠಲಗೌಡ ದೇವರಡ್ಡಿ, ಎಚ್. ಎಲ್. ವಜ್ರಮಟ್ಟಿ, ಎನ್. ಕೆ. ಹುಚ್ಚರಡ್ಡಿ, ಶಿವಾನಂದ ಮಿಕಲಿ, ಸಿದ್ದುಗೌಡ ದೇವರಡ್ಡಿ, ಸಿದ್ದಪ್ಪ ಮೆಟಗುಟ್ಟ, ವರುಣ ಮಿಕಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.