ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿನ ಆರಾಧ್ಯದೇವ ಶ್ರೀ ವೀರಭದ್ರದೇವರ ಜಾತ್ರೋತ್ಸವವು ಗ್ರಾಮದ ಸಂಪ್ರದಾಯದಂತೆ ಮಂಗಳವಾರದಂದು (ಇಂದು) ವಿಜೃಂಭಣೆಯಿಂದ ನೇರವೇರಿತು.
ಈ ನಿಮಿತ್ಯ ನಸುಕಿನ ಜಾವ ೫ ಗಂಟೆಗೆ ಶ್ರೀ ವೀರಭದ್ರ ದೇವರ ಶೀಲಾಮೂರ್ತಿಗೆ ಭಕ್ತರಿಂದ ರುದ್ರಾಭಿ?ಕ ನೆರವೇರಿತು. ಬಳಿಕ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭದ್ರ ದೇವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸಂಬಾಳ ವಾದ್ಯ ಮೇಳದೊಂದಿಗೆ ಜರುಗಿತು. ಬಳಿಕ ಈ ಮೆರವಣಿಗೆಯೂ ಊರ ಹೊರಗಿನ ಪಾದಗಟ್ಟಿ ತಲುಪಿದ ಬಳಿಕ ಪಾದಗಟ್ಟಿ ಪೂಜೆ ಮಹಾ ಮಂಗಳಾರತಿ ನೆರವೇರಿತು. ನಂತರ ಈ ಮೆರವಣಿಗೆಯು ಭಕ್ತರ ಜೈಕಾರದೊಂದಿಗೆ ಮರಳಿ ಮೂಲ ದೇವಸ್ಥಾನ ತಲುಪಿದ ಕೂಡಲೇ ಅಗ್ನಿ ಪ್ರವೇಶ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಸೀರಾ ಅನ್ನ ಪ್ರಸಾದ ವಿತರಣೆ ನಡೆಯಿತು.
ಇದಕ್ಕೂ ಮುನ್ನ ಸೋಮವಾರದಂದು ದೇವಸ್ಥಾನದ ಮುಂಭಾಗದಲ್ಲಿ ಅಗ್ನಿ ಪ್ರಜ್ವಲನ ಕಾರ್ಯಕ್ರಮ, ಮದ್ದು ಸುಡುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಇದಲ್ಲದೆ ಶುಕ್ರವಾರದಂದು ಶ್ರೀ ವೀರಭದ್ರ ದೇವರಿಗೆ ಕಾಸಿ ಕಟ್ಟುವ ಕಾರ್ಯಕ್ರಮ ಪೂಜಾ ಕೈಕರ್ಯದೊಂದಿಗೆ ನೇರವೇರಿತು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರ ವಾಗ್ಮೋರೆ ಹಾಗೂ ಭೀಮರಾಯ ನಾಗರಳ್ಳಿ ಅನ್ನ ಪ್ರಸಾದ ಸೇವೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾದೇವ ವಾಲಿಕಾರ ಹಾಗೂ ಈರಣ್ಣ ಮುಜಗೊಂಡ ವಸ್ತ್ರ ಸೇವೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರಾದ ಮುರಗಯ್ಯ ಹಿರೇಮಠ, ಸಿದ್ದು ಹಿರೇಮಠ, ಮಾಂತಯ್ಯ ಹಿರೇಮಠ, ಈರಯ್ಯ ಹಿರೇಮಠ, ಸೋಮನಾಥ ಹಿರೇಮಠ, ಭಕ್ತರಾದ ಗೌರಿಶಂಕರ ಬಾಬುಳಗಿ, ರಾಜಶೇಖರ ಕಾರಾಜಣಗಿ, ನಾಗನಾಥ ಬಿರಾದಾರ, ನಾಗನಾಥ ಮುಜಗೊಂಡ, ಬಸವರಾಜ ಲಾಳಸೇರಿ, ಭೀಮರಾಯ ಗೋಡಿಹಾಳ, ಬಿ.ಎಂ. ಲಾಳಸೇರಿ ವಿಠ್ಠಲ ಚೋರಗಿ, ದತ್ತು ಮುಜಗೊಂಡ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.
