ಧಾರವಾಡ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪರ ಮತ ಚಲಾಯಿಸದ ವಿಪಕ್ಷಗಳ ಮಹಿಳಾ ವಿರೋಧಿ ನಡೆ ಖಂಡಿಸಿ, ಧಾರವಾಡದ ವಿವೇಕಾನಂದ ವೃತ್ತದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಫೋಟೋ ಸುಟ್ಟು ಕರ್ನಾಟಕ ಶಿವಸೇನೆ ಮುಖಂಡರು ಪ್ರತಿಭಟನೆ ಮಾಡಿದರು.
ಶಿವಸೇನಾ ರಾಜ್ಯ ವಕ್ತಾರ ಎಸ್. ಭಾಸ್ಕರನ್ ಪ್ರತಿಭಟನೆಯಲ್ಲಿ ಮಾತನಾಡಿ, ಸುಮಾರು 70 ವರ್ಷದಿಂದ ಮಹಿಳೆಯರಿಗೆ 33% ಮೀಸಲಾತಿ ಶಾಸಕಾಂಗದಲ್ಲಿ ನೀಡಬೇಕಾದದ್ದು, ಪ್ರಜಾಪ್ರಭುತ್ವದ ಆಶಯವಾಗಿದೆ.. ಅದಕ್ಕೆ ಪೂರಕವಾಗಿ NDA ಕೇಂದ್ರ ಸರ್ಕಾರ ಬಿಲ್ ಲೋಕಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೇಸ್,ತೃಣಮೂಲ ಕಾಂಗ್ರೇಸ್, DMK ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸಿ ಮತ ಚಲಾಯಿಸಿದ್ದು ಮಹಿಳೆಯರ ಹಕ್ಕುಗಳಿಗೆ ದ್ರೋಹ ಬಗೆದಿವೆ.
ಈ ಹಿನ್ನೆಲೆಯಲ್ಲಿ ದೇಶದ ಜನಸಂಖ್ಯೆ ಅರ್ಧ ಭಾಗವಿರುವ ಮಹಿಳಾ ಶಕ್ತಿಗೆ ಅವಮಾನವಾಗಿದ್ದು, ತಕ್ಷಣವೇ ಕ್ಷಮೆ ಕೇಳಿ ಬಿಲ್ ಗೆ ಬೆಂಬಲಿಸಲು ಆಗೃಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ಮಾತನಾಡಿ, ಈ ದ್ರೋಹಕ್ಕೆ ಬರುವ ಚುನಾವಣೆಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲು ಕರೆ ನೀಡಿದರು. ಕೇವಲ 2000 ರೂ ಹಾಗೂ ಫ್ರಿ ಬಸ್ ಗೆ ಮಾತ್ರ ಇವರ ಮಹಿಳಾ ಪ್ರೀತಿ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಆರತಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ಸಾವಂತ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಜೋಶಿ, ನಗರ ಅಧ್ಯಕ್ಷ ನವೀನ್ ರಾಠಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಚಾಣಕ್ಯ, ನಗರ ಉಪಾಧ್ಯಕ್ಷ ಅಕ್ಷಯ ಕದಂ, ಮಹಿಳಾ ಉಪಾಧ್ಯಕ್ಷ ಶ್ರೀಮತಿ ಹಡಪದ ಭಾಗವಹಿಸಿದ್ದರು.
ಶಿವಸೇನಾ ರಾಜ್ಯ ವಕ್ತಾರ ಎಸ್. ಭಾಸ್ಕರನ್ ಪ್ರತಿಭಟನೆಯಲ್ಲಿ ಮಾತನಾಡಿ, ಸುಮಾರು 70 ವರ್ಷದಿಂದ ಮಹಿಳೆಯರಿಗೆ 33% ಮೀಸಲಾತಿ ಶಾಸಕಾಂಗದಲ್ಲಿ ನೀಡಬೇಕಾದದ್ದು, ಪ್ರಜಾಪ್ರಭುತ್ವದ ಆಶಯವಾಗಿದೆ.. ಅದಕ್ಕೆ ಪೂರಕವಾಗಿ NDA ಕೇಂದ್ರ ಸರ್ಕಾರ ಬಿಲ್ ಲೋಕಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೇಸ್,ತೃಣಮೂಲ ಕಾಂಗ್ರೇಸ್, DMK ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸಿ ಮತ ಚಲಾಯಿಸಿದ್ದು ಮಹಿಳೆಯರ ಹಕ್ಕುಗಳಿಗೆ ದ್ರೋಹ ಬಗೆದಿವೆ.
ಈ ಹಿನ್ನೆಲೆಯಲ್ಲಿ ದೇಶದ ಜನಸಂಖ್ಯೆ ಅರ್ಧ ಭಾಗವಿರುವ ಮಹಿಳಾ ಶಕ್ತಿಗೆ ಅವಮಾನವಾಗಿದ್ದು, ತಕ್ಷಣವೇ ಕ್ಷಮೆ ಕೇಳಿ ಬಿಲ್ ಗೆ ಬೆಂಬಲಿಸಲು ಆಗೃಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ಮಾತನಾಡಿ, ಈ ದ್ರೋಹಕ್ಕೆ ಬರುವ ಚುನಾವಣೆಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲು ಕರೆ ನೀಡಿದರು. ಕೇವಲ 2000 ರೂ ಹಾಗೂ ಫ್ರಿ ಬಸ್ ಗೆ ಮಾತ್ರ ಇವರ ಮಹಿಳಾ ಪ್ರೀತಿ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಆರತಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ಸಾವಂತ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಜೋಶಿ, ನಗರ ಅಧ್ಯಕ್ಷ ನವೀನ್ ರಾಠಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಚಾಣಕ್ಯ, ನಗರ ಉಪಾಧ್ಯಕ್ಷ ಅಕ್ಷಯ ಕದಂ, ಮಹಿಳಾ ಉಪಾಧ್ಯಕ್ಷ ಶ್ರೀಮತಿ ಹಡಪದ ಭಾಗವಹಿಸಿದ್ದರು.
