ಬಳ್ಳಾರಿ. ಜು. 06 : ನಗರದ ಗಾಂಧಿನಗರದಲ್ಲಿರುವ 9ನೇ ಕ್ರಾಸ್ ಕಪ್ಪುಗಲ್ ರೋಡ್, ಚಿದಂಬರ ರಾವ್ ಇವರ ಮನೆಯಲ್ಲಿ ಒಂದು ತಿಂಗಳ ಕಾಲ ಗಾಂಧಾರಿ ವಿದ್ಯೆಯ ತರಬೇತಿಯನ್ನು ನಡೆಸಲಾಯಿತು. ಸಂಡೂರಿನ ಗಾಂಧಾರಿ ವಿದ್ಯೆ ಗುರುಗಳಾದ ಉಮಾ ಗಡಿಗಿ ಅವರು ಮಕ್ಕಳಿಗೆ ದೀಕ್ಷೆಯನ್ನು ಕೊಟ್ಟು ಕಲಿಸಲು ಶುರು ಮಾಡಿದರು. ನಂತರ ನಮ್ಮ ಸಿಕೆ ಪ್ರಕಾಶ್ ಹಾಗೂ ಚಿದಂಬರಾವ್ ಇವರು ಸತತವಾಗಿ ಮಕ್ಕಳಿಗೆ ಅಭ್ಯಾಸ ಮಾಡಿಸಿ ಇಂದು ಕಾರ್ಯಕ್ರಮ ಬಸವನ ಕುಂಟೆಯಲ್ಲಿರುವ ಬಸವಣ್ಣನ ಗುಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಉದ್ಘಾಟಕರಾಗಿ ಡಾ. ಫಣೀಂದ್ರ ಆಯುಷ್ ಡಿಪಾರ್ಟ್ಮೆಂಟ್ ಬಳ್ಳಾರಿ ಹಾಗೂ ಹೊಸಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸಂಜಯ್ ಸ್ವಾಮಿ ಸಂಡೂರ್ ಇಂಟರ್ನ್ಯಾಷನಲ್ ಯೋಗಪಟು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲಾ ಗಣ್ಯರು ದೀಪ ಹಚ್ಚುವುದರ ಮೂಲಕ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು qqqà.
ಕಾರ್ಯಕ್ರಮದ ವಿಶೇಷತೆ ಏನು ಅಂದರೆ ಗಾಂಧಾರಿ ವಿದ್ಯೆ ಕಲಿತ ಮಕ್ಕಳು ತಮ್ಮ ತಂದೆ ತಾಯಿ ಅವರ ಪಾದಪೂಜೆಯನ್ನು ಮಾಡುವ ವಿಧಾನ ಹಾಗೂ ಶ್ರೀ ಕಾಶಿ ವಿಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸಲಾಯಿತು. ಮಕ್ಕಳೆಲ್ಲರೂ ಅವರ ತಂದೆ ತಾಯಿಗೆ ಅದ್ದೂರಿಯಾಗಿ ಪಾದಪೂಜೆಯನ್ನು ಮಾಡಿದರು ಅವರ ಆಶೀರ್ವಾದ ಪಡೆದರು ನಂತರ ಗಣ್ಯರಿಗೆ ಸನ್ಮಾನಿಸಲಾಯಿತು ಹಾಗೆ ಗಾಂಧಾರಿ ವಿದ್ಯಾ ಪ್ರದರ್ಶನ ಕೂಡ ಮಕ್ಕಳೆಲ್ಲರೂ ತುಂಬಾ ಅಚ್ಚುಕಟ್ಟಾಗಿ ಮಾಡಿದರು ವೇದಿಕೆಯ ಗಣ್ಯರು ಈ ವಿದ್ಯೆಯ ಬಗ್ಗೆ ವಿವರವಾಗಿ ಮಾತಾಡಿ ಎಲ್ಲರ ಗಮನ ಸೆಳೆದರು ನಂತರ ಈ ಎಲ್ಲಾ ಕಾರ್ಯಕ್ರಮ ನಮ್ಮ ಶ್ರೀಮತಿ ವನುಜಾಕ್ಷಿ ಮೇಡಂ ಹೊರಗಿನ ದೋಣಿ ಶಿಕ್ಷಕಿಯವರು ಇವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ನಡೆಸಿಕೊಟ್ಟರು ಹಾಗೆ ಚಿದಂಬರರಾವ್ ಹಾಗೂ ಸಿ ಕೆ ಪ್ರಕಾಶ್ ವಂದನಾರ್ಪಣೆ ನೆರವೇರಿಸಿ ಕೊಟ್ಟರು ಹಾಗೆ ಗಣ್ಯ ಮಾನ್ಯರಿಗೆ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.