ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಆ.23 ರಂದು ಸಂಜೆ 6.00 ಗಂಟೆಗೆ ತಿಂಗಳ ನಾಲ್ಕನೆಯ ಭಾನುವಾರದ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ತಿಕೋಟಾದ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ‘ನಾವೇಕೆ ದುಃಖಿಗಳಾದೆವು?’ ಎಂಬ ವಿಷಯ ಕುರಿತು ಅನುಭಾವ ಹಂಚಿಕೊಳ್ಳಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ. ಮುಧೋಳ ತಾಲುಕಿನ ಮಾಲಾಪುರ ಗ್ರಾಮದ ಪೂರ್ಣಿಮಾ ಉಮೇಶಗೌಡಾ ಪಾಟೀಲ ಮಹಾಪ್ರಸಾದ ಸೇವೆ ನೆರವೇರಿಸುವರು ಎಂದು ತಿಳಿಸಿದ್ದಾರೆ.