ಯರಗಟ್ಟಿ,ಜೂ,೨೬: ಸಂಜೀವಿನಿ ಒಕ್ಕೂಟಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದು, ಮಹಿಳಾಸಬಲೀಕರಣ ಆಶಯ ಸಾಕಾರಗೊಳ್ಳುತ್ತದೆ ಎಂದು ಜಿಲ್ಲಾ ವ್ಯವಸ್ಥಾಪಕ ಕಿರಣ ಶೀಂದೆ ಹೇಳಿದರು.
ಸಮೀಪದ ತಲ್ಲೂರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ಮಹಿಳಾ ಸಂಜೀವಿನಿ ಒಕ್ಕೂಟ ಹಮ್ಮಿಕೊಂಡಿದ್ದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಕೌಶಲ ಅಭಿವೃದ್ಧಿಗೊಳಿಸಿ ಅವರನ್ನು ಆರ್ಥಿಕವಾಗಿ ಪ್ರಗತಿಶೀಲರನ್ನಾಗಿಸುವ ಸಲುವಾಗಿ ರಾಜ್ಯದೆಲ್ಲೆಡೆ ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಗಳಿವೆ ಎಂದರು.
ಪಿಡಿಒ ರಾಘವೇಂದ್ರಕುಮಾರ ಎಸ್,ಪಿ ಮಾತನಾಡಿ, ಮಹಿಳಾ ಸಂಜೀವಿನಿ ಒಕ್ಕೂಟದಿಂದ ಗ್ರಾಮೀಣ ಪ್ರದೇಶಗಳ ಜನರ ಜೀವನ ಮಟ್ಟ ಸುಧಾರಣೆ ಸಾಧ್ಯ ಎಂದರು.
ಒಕ್ಕೂಟದ ಅಧ್ಯಕ್ಷೆ ಕಸ್ತೂರಿ ಹೊಸೂರ ಅಧ್ಯಕ್ಷತೆ ವಹಿಸಿದ್ದರು, ಸವದತ್ತಿ ತಾಲೂಕ ವ್ಯವಸ್ಥಾಪಕ ಶ್ರೀಕಾಂತ ಹೊಳೆನ್ನವರ, ಪುಂಡಲೀಕ ಹಟ್ಟಿಹೋಳಿ, ಶ್ರೀಕಾಂತ ಪಾಟೀಲ, ಪವನ ಪೋಳ, ರೂಪಶ್ರೀ ಪಾಟೀಲ, ಬಸವರಾಜ ಪಟ್ಟಣಶಟ್ಟಿ, ಶಾಂತಾ ಹಿರೇಮಠ, ಸವಿತಾ ಬೆನಕಟ್ಟಿ, ಲಕ್ಷ್ಮಿ ಪಾಟೀಲ, ಹುಸೇನಬಿ ಕುದರಿ, ಪ್ರೇಮಾ ಹುಬ್ಬಳ್ಳಿ, ಯಶೋಧಾ ಕಾಶಪ್ಪನವರ, ಸುಜಾತಾ ಬೆನಕಟ್ಟಿ, ನಿರ್ಮಲಾ ಭಜಂತ್ರಿ, ಗೌರವ್ವ ಉಪ್ಪಾರ ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.