ಬೆಳಗಾವಿ; ರಂಗಸಂಪದ ಬೆಳಗಾವಿಯ ತಂಡದ ಎರಡು ದಿನಗಳ ರಂಗಾಭಿನಯ ಕಾರ್ಯಾಗಾರ ಇವತ್ತು ಶನಿವಾರ ದಿ 25 ರಂದು ಬೆಳಿಗ್ಗೆಯ 10.30 ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ಪ್ರಾರಂಭವಾಯಿತು.14 ಮಹಿಳಾ ಮತ್ತು 11 ಪುರುಷ ಆಸಕ್ತ ಕಲಾವಿದರು ಭಾಗವಹಿಸುತ್ತಿರುವ ಈ ಕಾರ್ಯಾಗಾರವನ್ನು ಮುಖ್ಯ ಅತಿಥಿಗಳಾದ ಡಾ.ಬಸವರಾಜ ಜಗಜಂಪಿ ಅವರು ಸಸಿಗೆ ನೀರುಣಿಸಿ ಮತ್ತು ದಮಡಿ ಬಾರಿಸುವ ಮೂಲಕ ಉದ್ಘಾಟಿಸಿದರು.
ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಕಾರ್ಯಾಗರದ ಪೂರ್ಣ ಸದುಪಯೋಗ ಪಡೆದುಕೊಳ್ಳಲು ಆಹ್ವಾನಿಸಿದರು..
ಸಂಪನ್ಮೂಲ ದಂಪತಿಗಳಾದ ಶ್ರೀಮತಿ ರಜನಿ ಮತ್ತು ಡಾ.ಪ್ರಕಾಶ ಗರುಡ ಅವರೂ ಸಹ ಸಸಿಗೆ ನೀರುಣಿಸಿ ದಮಡಿ ಬಾರಿಸುವ ಮೂಲಕ ಉದ್ಘಾಟಿಸಿದರು ಮತ್ತು ಕಲಾವಿದರಿಗೆ ಎರಡು ದಿನಗಳಲ್ಲಿ ಕಾರ್ಯಾಗಾರದಲ್ಲಿ ಪೂರ್ಣ ಸಹಭಾಗಿತ್ವ ಮಾಡಲು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿದ ಶ್ರೀ ಎಲ್ ಎಸ್ ಶಾಸ್ತ್ರೀ ಅವರು ಇಂತಹ ಅಪರೂಪದ ಕಾರ್ಯಾಗಾರ ಹಮ್ಮಿಕೊಂಡಿದ್ದಕ್ಕೆ ರಂಗಸಂಪದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಡಾ.ಅರವಿಂದ ಕುಲಕರ್ಣಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶ್ರೀಮತಿಗಳಾದ ವೀಣಾ ಹೆಗಡೆ ಮತ್ತು ಪದ್ಮಾ ಕುಲಕರ್ಣಿಯವರು ಅತಿಥಿಗಳ ಪರಿಚಯ ಮಾಡಿದರು. ಶ್ರೀ ಪ್ರಸಾದ ಕಾರಜೋಳ ವಂದಿಸಿದರು.ಶ್ರೀ ಶರಣಯ್ಯ ಮಠಪತಿ ನಿರೂಪಿಸಿದರು.ಶ್ರೀ ಚಿದಾನಂದ ವಾಳಕೆ , ಶ್ರೀ ರಾಮಚಂದ್ರ ಕಟ್ಟಿ ಮತ್ತು ಶ್ರೀ ಬಸವರಾಜ ಹುಣಶೀಕಟ್ಟಿ ಸಹಕರಿಸಿದರು.
