Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ ದೇಸಾಯಿ ಗ್ರಂಥದ ಲೋಕಾರ್ಪಣೆ ನಾಳೆ

ಜಮಖಂಡಿ;ನಗರದ ಹಿರಿಯ ನ್ಯಾಯವಾದಿ, ಸಾಹಿತಿ ಡಾ.ತಾತಾಸಾಹೇಬ ಬಾಂಗಿ ಅವರ ಸಂಶೋಧನಾ ಕೃತಿ ಸ್ವತಂತ್ಯ್ರ ಸೇನಾನಿ ಪದ್ಮಾವತಿ.ವಾಮನರಾವ ದೇಸಾಯಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನಗರದ ಬಸವ ಭವನದಲ್ಲಿ ಭಾನುವಾರ ದಿ,29 ರಂದು ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದಮುತ್ಯಾ ಅವರ ಸಾನಿಧ್ಯ ವಹಿಸುವರು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಸ್ವತಂತ್ಯ್ರಸೇನಾನಿ ಮೊಮ್ಮಗ ಮನೋಜ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಗೊಳಿಸುವರು. ಸಾಹಿತಿ ಡಾ.ವೈ.ಎಂ,ಯಾಕೊಳ್ಳಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಾಹಿತ್ಯ ಅಕಾಡಮಿ ಸದಸ್ಯ ಮಹಾದೇವ ಬಸರಕೋಡ, ಜಿಲ್ಲಾನೊಂದಣಿ ಅಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ, ನಿರ್ದೇಶಕ ಡಾ.ಎ.ಬಿ.ವಗ್ಗರ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಾಡು ಮಾಳಿ, ಶ್ರೀಶೈಲ ಮೊಟಗಿ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ದಾಮೋದರ ಹುಲ್ಯಾಳಕರ, ಡಾ ಪ್ರಕಾಶ ಹೊಸವಾಡ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಗ್ರಂಥದ ಲೇಖಕ ಡಾ.ತಾತಾಸಾಹೆಬ ಬಾಂಗಿ ಮಾತನಾಡಿ, ಇತಹಾಸದ ಪುಟದಲ್ಲಿ ಮುಂಚೋಣಿಯಲ್ಲಿರಬೇಲಾಗಿದ್ದ ಸ್ವತಂತ್ಯ್ರ ಸೇನಾನಿ ಪದ್ಮಾವತಿಬಾಯಿ ದೇಸಾಯಿ ಅವರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಮಾಡಿದ ಹೋರಾಟ ಸ್ವತಂತ್ಯ್ರ ಹೋರಾಟದಲ್ಲಿ ಧುಮುಕಿ ಜೈಲು ಶಿಕ್ಷೆ ಅನುಭವಿಸಿದ್ದರು, ಜಮಖಂಡಿ ಸಂಸ್ಥಾನದ ಏಕೈಕ ಮಹಿಳಾ ಸದಸ್ಯ (ಶಾಸಕಿ) ಯಾಗಿದ್ದರು. 1924ರಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1974ರಲ್ಲಿ ಇಂದಿರಾಗಾಂಧಿ ತಾಮ್ರಪತ್ರನೀಡಿ ಗೌರವಿಸಿ ದ್ದಾರೆ. ಜಮಖಂಡಿಯವರೇ ಆದ ಪದ್ಮಾವತಿ ದೇಸಾಯಿ ಅವರ ಕುರಿತಾದ ಸಂಶೋಧನಾ ಕೃತಿ ರಚಿಸಿದ್ದು ನಮ್ಮ ನಾಡಿಗೆ ಅವರ ಬಗ್ಗೆ ಪರಿಚಯಿಸುವದೇ ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಬಸವರಾಜ ನಾಗಮೋತಿ, ಪ್ರಾಚಾರ್ಯ ಮಹಂತೇಶ ನರಸನ ಗೌಡರ, ಶಿವಾನಂದ ಸಾತಿಹಾಳ, ಶ್ರೀಪಾದ ಹೊನವಾಡ, ಮುಂತಾದವರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ