Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಸಾಹಿತ್ಯ ಭವನದಲ್ಲಿ ಜರುಗಿದ ರಂಗಸಂಪದದ ಮಾಧ್ಯಮ ಗೋಷ್ಠಿ

ಬೆಳಗಾವಿ ೨೪- ಇದೇ ದಿ. ೨೪ ಮಂಗಳವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ರಂಗಸಂಪದವರು ಮಾಧ್ಯಮ ಗೋಷ್ಠಿಯನ್ನು ಕರೆದಿದ್ದರು. ’ರಂಗಸಖ ಪ್ರಶಸ್ತಿ -೨೦೨೬’ ಪ್ರಶಸ್ತಿ ಪ್ರಧಾನ ಮತ್ತು ಇದೇ ದಿ. ೨೭ ಶುಕ್ರವಾರದಿಂದ ದಿ.೨೯ ರವಿವಾರದ ವರೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಚೈತ್ರ ನಾಟಕೋತ್ಸವ ಕುರಿತಂತೆ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಮಾತನಾಡಿದರು.
ರಂಗಸಂಪದ ಇದೊಂದು ಹವ್ಯಾಸಿ ಕಲಾವಿದರ ಸಂಘ. ಈ ತಂಡವು ೪೭ ವರ್ಷಗಳ ಇತಿಹಾಸವನ್ನು ಹೊಂದಿದೆ. ಗಡಿ ಭಾಗವಾದ ಬೆಳಗಾವಿಯಯಲ್ಲಿ ಹಲವಾರು ಭಾಷಾ ಸಂಕಷ್ಟಗಳ ಮಧ್ಯೆಯೂ ಅಪ್ಪಟ ಕನ್ನಡ ನಾಟಕಗಳ ತಂಡವಾಗಿ ಉಳಿದುಕೊಂಡು ಬಂದಿದೆ. ಪ್ರತಿ ವರ್ಷವೂ ಹತ್ತರಿಂದ ಹನ್ನೆರಡು ನಾಟಕಗಳನ್ನು ಸದಸ್ಯರಿಗೆ ನೀಡುತ್ತಲಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲಿಯೂ ಈ ತಂಡದ ನಾಟಕಗಳು ಪ್ರದರ್ಶನಗೊಂಡಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಟಕೋತ್ಸವಗಳನ್ನು ರಂಗಸಂಪದ ಹಮ್ಮಿಕೊಂಡಿದೆ. ಈಗ ಹನ್ನೊಂದು ವರ್ಷಗಳಿಂದ ರಂಗಸಂಪದದ ಅಧ್ಯಕ್ಷರಾಗಿ ಡಾ. ಅರವಿಂದ ಕುಲಕರ್ಣಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ದಿ. ೨೭ ಶುಕ್ರವಾರ ಸಾಯಂಕಾಲ ೫-೩೦ ಕ್ಕೆ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಲೇಖಕರಾದ ಡಾ. ಸರಜು ಕಾಟ್ಕರ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಭಾರತೀಯ ಜೀವವಿಮಾ ನಿಗಮದ ಬೆಳಗಾವಿ ವಿಭಾಗದ ಹಿರಿಯ ಅಧಿಆರಿಗಳಾದ ಬಿ. ಪಿ. ರವಿ ಆಗಮಿಸಲಿದ್ದಾರೆ. ಭಾರತೀಯ ಜೀವವಿಮಾ ನಿಗಮದ ಮಾರುಕಟ್ಟೆ ವಿಭಾಗದ ಹರಿನಾಥ, ಶ್ರೀಪತಿ ಮಂಜನಬೈಲು ಉಪಸ್ಥಿತರಿರುತ್ತಾರೆ. ರಂಗಭೂಮಿ ಕಲಾವಿದ, ನಿರ್ದೇಶಕ ವಿನಯ ಕುಲಕರ್ಣಿಯವರಿಗೆ ರಂಗಸಖ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ರಾಜೇಂದ್ರ ಸೈಬಣ್ಣವರ ಮತ್ತು ದೇವಪ್ಪ ನಾಯಕ ಅವರನ್ನು ಗೌರವಿಸಲಾಗುವುದು. ಬೆಂಗಳೂರಿನ ಕಾಜಾಣ ತಂಡದವರಿಂದ ಪುರಾಣದಲ್ಲಿ ಬಾಲವ್ಯಕ್ತಿತ್ವದ ದ್ರುವ, ಶಂಕರಾಚಾರ್ಯರು, ಪ್ರಹ್ಲಾದ, ಅಷ್ಟವರ್ಕ ಮತ್ತು ನಚಿಕೇತ ಪೌರಾಣಿಕ ಪಾತ್ರಗಳ ಕುರಿತಾದ ’ಪಂಚಗವ್ಯ’ ಏಕವ್ಯಕ್ತಿ ಪ್ರದರ್ಶನ ನಡೆಯುವುದು. ಡಾ. ಎಸ್. ಎಲ್. ಎನ್. ಸ್ವಾಮಿ ನಿರ್ದೇಶವಿದೆ ಎಂದು ಡಾ. ಕುಲಕರ್ಣಿ ಹೇಳಿದರು.
ದಿ. ೨೮ ಶನಿವಾರ ಸಾಯಂಕಾಲ ೬-೩೦ ಕ್ಕೆ ರಂಗಸಂಪದ ತಂಡದವರಿಂದ ಭಾನುಮತಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ಪತ್ರರ್ತರಾದ ಎಲ್. ಎಸ್. ಶಾಸ್ತ್ರಿ ರಚಿಸಿದ್ದು ಡಾ. ಅರವಿಂದ ಕುಲಕರ್ಣಿಯವರು ನಿರ್ದೇಶಿಸಿದ್ದಾರೆ.
ದಿ. ೨೯ ರವಿವಾರ ಸಾಯಂಕಾಲ ೬ ಕ್ಕೆ ಹನಿಗವಿ ಎಚ್. ಡುಂಡಿರಾಜ್ ರೊಂದಿಗೆ ಸಂವಾದ ಕಾರ್ಯಕ್ರಮವಿದ್ದು ಶ್ರೀಪತಿ ಮಂಜನಬೈಲು ನಡೆಯಿಸಿಕೊಡುತ್ತಾರೆ. ನಂತರ ರಂಗಸಂಪದ ತಂಡದವರಿಂದಲೇ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಹಾಸ್ಯನಾಟಕ ಪುಕ್ಕಟೆ ಸಲಹೆ ಪ್ರದರ್ಶನಗೊಳ್ಳಲಿದೆ. ಎಚ್. ಡುಂಡಿರಾಜ ಅವರ ರಚನೆಯಾಗಿದ್ದು ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿದೆ. ಈ ಚೈತ್ರ ನಾಟಕೋತ್ಸವಕ್ಕೆ ಭಾರತೀಯ ಜೀವ ವಿಮಾ ನಿಗಮವು ಪ್ರಾಯೋಜಕತ್ವವನ್ನು ನೀಡುತ್ತಿದೆ.
ಕೊನೆಯಲ್ಲಿ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ನಾಟಕಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾರಸಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು, ರಂಗಭೂಮಿಯನ್ನು ಉಳಿಸಬೇಕು, ಬೆಳೆಸಬೇಕಂದು ವಿನಂತಿಸಿಕೊಂಡರು
-೦-೦-೦-
ಫೋಟೋ: (ಎಡದಿಂದ ಬಲಕ್ಕೆ) ಚಿದಾನಂದ ವಾಳ್ಕೆ, ರಾಮಚಂದ್ರ ಕಟ್ಟಿ, ಡಾ. ಅರವಿಂದ ಕುಲಕರ್ಣಿ (ಅಧ್ಯಕ್ಷರು), ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ,

 

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ