Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರಕ್ಕೆ ಚಾಲನೆ ರಾಜೇಂದ್ರ ಪಾಟೀಲ, ಭಾಲಚಂದ್ರ ಜಾರಕಿಹೋಳಿ, ಅಣ್ಣಾಸಾಹೇಬ ಜೊಲ್ಲೆ ಭಾಗಿ

ಸಂಕೇಶ್ವರ: ತೀವ್ರ ಕುತೂಹಲ ಕೆರಳಿಸಿರುವ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುಣಾವಣೆಗೆ ಇಂದು ಸಂಕೇಶ್ವರದ ಶಂಕರಲಿಂಗ ಭವನದಲ್ಲಿ ಚಾಲನೆ ನೀಡಲಾಯಿತು.ಹೊಸ ಪ್ಯಾನಲ್ಲಿಗೆ ಅಪ್ಪಣ್ಣಗೌಡ ಪಾಟೀಲ ಸಹಕಾರ ಪ್ಯಾನೆಲ್ಲ ಎಂದು ಹೆಸರಿಡಲಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಂಚಾಲಕ ಶಶಿರಾಜ ಪಾಟೀಲ ಅವರು ಕಳೆದ ೩೦ ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ಜೊಲ್ಲೆ-ಜಾರಕಿಹೋಳಿ ನೇತೃತ್ವದಲ್ಲಿ ಕಳೆದ ೨ ತಿಂಗಳಿನಿಂದ ಮಾಡಲಾಗಿದೆ.ನಿರಂತರ ಜ್ಯೋತಿ ವಿದ್ಯುತ್ ಯೋಜನೆಯನ್ನು ಹುಕ್ಕೇರಿ ತಾಲೂಕಿನ ೬೮ ಹಳ್ಳಿಗಳಿಗೆ ಕೈಗೆತ್ತಿಕೊಳ್ಳಲಾಗಿದೆ.ರೈತರಿಗೆ ಅನುಕೂಲವಾಗಲು ಹೊಸ ಟಿ.ಸಿ ಗಳನ್ನು ಕೂಡ್ರಿಸಲಾಗುತ್ತಿದೆ. ವಿದ್ಯುತ್ ಸಹಕಾರಿ ಸಂಘದಲ್ಲಿ ಸುದೀರ್ಘ ಕಾಲದಿಂದಲೂ ಹಂಗಾಮಿಯಾಗಿ ಕೆಲಸ ಮಾಡುತಿದ್ದ ೧೨೪ ಜನರನ್ನು ಖಾಯಂಗೊಳಿಸಲಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಮಾತನಾಡಿ, ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಂಚಾಲಕರು ಬಂದು ನಮ್ಮ ಹತ್ತಿರ ನೆರವು ಕೇಳಿದಾಗ ಅವರ ಕಷ್ಟಕ್ಕೆ ನಾವು ಸ್ಪಂದಿಸಿದ್ದೆವೆ., .ಭಾರಿ ಪ್ರಮಾಣದ ಸಾಲದ ಭಾಧೆಯಿಂದ ನರಳುತಿದ್ದು ರೈತರಿಗೆ ಕಬ್ಬಿನ ಬಿಲ್ಲು ಹಾಗೂ ಕಾರ್ಮಿಕರಿಗೆ ವೇತನ ಕೊಡಲು ಆಗಾದಾದಾಗ ನಾವು ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಮ್ಮ ಬಿರೇಶ್ವರ ಸಹಕಾರಿ ಸಂಘದಿಂದ ೧೦೦ ಕೋಟಿ ರೂಪಾಯಿ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕಿನಿಂದ ೭೦ ಕೋಟಿ ರೂಪಾಯಿ ಸಾಲ ನೀಡಿದ್ದೆವೆ. ಆ ಸಕ್ಕರೆ ಕಾರ್ಖಾನೆಯಲ್ಲಿ ನಮ್ಮವರು ಯಾರನ್ನೂ ಸದಸ್ಯರನ್ನಾಗಿ ಮಾಡುವ ಇಚ್ಛೆ ಇಲ್ಲ. ಕೇವಲ ಅಪ್ಪಣ್ಣಗೌಡರು ಸ್ಥಾಪಿಸಿದ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಬಾರದು ಎಂಬ ಉದ್ದೇಶದಿಂದ ನಾವು ನೆರವು ನೀಡಿದ್ದೆವೆ ಎಂದು ಹೇಳಿದರು.
ಶಾಸಕ ಭಾಲಚಂದ್ರ ಜಾರಕಿಹೋಳಿ ಅವರು ಮಾತನಾಡಿ, ಕತ್ತಿ ಗುಂಪು ತಮ್ಮನ್ನು ಹಾಗೂ ಜೊಲ್ಲೆಯವರನ್ನು ಹೊರಗಿನವರೆಂದು ಅಪಪ್ರಚಾರ ಮಾಡುತ್ತಿದೆ.೨೦೧೫ ರಲ್ಲಿ ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಚುನಾವಣೆ ನಡೆದಾಗ ರಮೇಶ ಕತ್ತಿ ಅವರಿಗೆ ಕೇವಲ ಓರ್ವ ಸಂಚಾಲಕರ ಬೆಂಬಲ ಮಾತ್ರ ಇತ್ತು. ಅವರಿಗೆ ಓರ್ವ ಅನುಮೋದಕರು ಸಹಿತ ಸಿಕ್ಕಿರಲಿಲ್ಲ. ಆಗ ನಮ್ಮ ಕಡೆಗೆ ಬಂದ ರಮೇಶ ಕತ್ತಿ ಅವರನ್ನು ನಾವು ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಿದೆವು. ಆಗ ನಾವು ಅವರಿಗೆ ಬೇಕಾಗಿದ್ದೆವು. ಆದರೆ ಈಗ ನಾವು ಅವರಿಗೆ ಹೊರಗಿನವರಾಗಿದ್ದೆವೆ ಎಂದು ಹೇಳಿ, ಕಳೆದ ೩೦ ವರ್ಷಗಳಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಏಕಸಾಮ್ಯತ್ವ ನಡೆದಿದ್ದು ಜನರ ಅಭಿಲಾಶೆಗೆ ತಕ್ಕ ಕೆಲಸಗಳಾಗಿಲ್ಲ. ಅದರ ಬದಲಿಗೆ ನಾವು ಈಗ ಜನಪರವಾಗಿ ಕೆಲಸ ಮಾಡಲು ನಿರ್ಧರಿಸಿದ್ದು ತಾಲೂಕಿನ ಜನರು ಅದಕ್ಕೆ ಬೆಂಬಲ ನೀಡಬೇಕು ಎಂದರು.
ಸಮಾರಂಭದಲ್ಲಿ ಕತ್ತಿ ಗುಂಪಿನ ಜೊತೆಗೆ ಗುರುತಿಸಿಕೊಂಡಿದ್ದ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಿಯ ಸಹಕಾರಿ ಧುರೀಣರಾದ ಶ್ರೀಕಾಂತ ಹತನೂರಿ,ಶಂಕರರಾವ ಹೆಗಡೆ,ಕುನಾಲ ಪಾಟೀಲ, ಸಂಕೇಶ್ವರ ಪುರಸಭೆಯ ಸದಸ್ಯರಾದ ಸಂಜಯ ಶಿರಕೋಳಿ, ಅಮರ ನಲವಡೆ. ಅಜಿತ ಕರಜಗಿ ಅವರು ಜೊಲ್ಲೆ-ಜಾರಕಿಹೋಳಿ ಅವರ ಜೊತೆಗೆ ಗುರುತಿಸಿಕೊಂಡಿದ್ದು ಹೊಸ ರಾಜಕೀಯಕ್ಕೆ ನಾಂದಿಯಾದಂತಾಯಿತು. ರವೀಂದ್ರ ಹಿಡಕಲ್ ಸ್ವಾಗತಿಸಿದರು. ಕೊನೆಯಲ್ಲಿ ವಿನಯ ಸಾವಂತ ವಂದಿಸಿದರು.
ಪೊಟೊ- ೩೧ ಎಸಕೆವಿ ೧ಇಪಿ- ಸಂಕೇಶ್ವರದಲ್ಲಿ ಇಂದು ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುಣಾವಣೆಗೆ ಚಾಲನೆ ನೀಡಲಾಯಿತು.ಚಿತ್ರದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಭಾಲಚಂದ್ರ ಜಾರಕಿಹೋಳಿ, ರಾಜೇಂದ್ರ ಪಾಟೀಲ, ಶ್ರೀಕಾಂತ ಹತನೂರಿ, ಅಮರ ನಲವಡೆ, ಸಂಜಯ ಶಿರಕೋಳಿ ಮತ್ತಿತರರು ಇದ್ದಾರೆ.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ