ಮೂಡಲಗಿ : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ನೀಡಿರುವ ಕರೆಯ ಮೇರೆಗೆ ಮೂಡಲಗಿ ಪಟ್ಟಣದ ಗಾಂಧಿ ಚೌಕಿನಲ್ಲಿರುವ ದೇಶದ ಸ್ವತಂತ್ರಕ್ಕಾಗಿ ದುಡಿದ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಹಾಗೂ ಸುತ್ತ ಮುತ್ತ ಸ್ವಚ್ಛಗೊಳಿಸಿಸುವ ಮೂಲಕ ಪೂಜೆ ಸಲ್ಲಿಸಲಾಯಿತು. ಇದೇ ಸಂಧರ್ಭದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿ ಮನೆಯಲ್ಲೂ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿ, ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ ಎಂದು ಪಣ ತೊಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ್, ಅರಭಾವಿ ಮಂಡಲ ಪದಾಧಿಕಾರಿಗಳಾದ ಪಾಂಡು ಮಹೇಂದ್ರಕರ, ಕೇದಾರಿ ಭಸ್ಮೆ, ಡಾ.ಬಸವರಾಜ ಪಾಲಬಾವಿ, ಚಂದ್ರಶೇಖರ್ ಪತ್ತಾರ್, ಮಲ್ಲು ಯಾದವಾಡ, ರಂಗಪ್ಪ ಕುಲಗೋಡ, ಮಹಾಲಿಂಗ ಒಂಟಗೋಡಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.