LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿ

ಮುದ್ದೇಬಿಹಾಳ :   ಕೆರೆಗಳಿಗೆ ನೀರು ತುಂಬಿಸಲು ರೈತರು ಒತ್ತಾಯಿಸುತ್ತಿದ್ದರೂ ಆಡಳಿತ ಪಕ್ಷದ ಶಾಸಕರು ರೈತರ ಬಳಿ ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ನಾವು ನಾಲ್ಕೈದು ದಿನ ಕಾಯುತ್ತೇವೆ ನೀರು ಬಿಡದಿದ್ದರೆ ಹೋರಾಟದ ಮೂಲಕ ನೀರು ಬಿಡಿಸಿಕೊಳ್ಳುತ್ತೇವೆಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಎಚ್ಚರಿಸಿದರು.

ತಾಲ್ಲೂಕಿನ ಬಿದರಕುಂದಿ, ಢವಳಗಿ, ಬಸರಕೋಡ, ರೂಡಗಿ ಭಾಗದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿ ರೈತರೊಂದಿಗೆ ಸಮಾಲೋಚಿಸಿದ ಬಳಿಕ ರೂಢಗಿ ಗ್ರಾಮದ ವ್ಯಾಪ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿ ಇದೆ ಈ ಸರಕಾರ ಕಾಲುವೆಗಳಿಗೆ ನೀರು ಬಿಡಲು ಹಿಂದೇಟು ಹಾಕುತ್ತಿದೆ. ಉಸ್ತುವಾರಿ ಸಚಿವರನ್ನು ಕೇಳಲು ರೈತರು ಅವರಿದ್ದಲ್ಲಿಯೇ ಹೋಗಿ ನೀರು ಕಾಲುವೆಗಳಿಗೆ ಬಿಡಿ ಎಂದರೆ ನಿಮ್ಮ ಎಂ.ಎಲ್.ಎ ಅವರನ್ನು ಕೇಳುವಂತೆ ಹೇಳಲು ತಿಳಿಸಿ ಕಳಿಸುತ್ತಿದ್ದಾರೆ ನೀವು ಉಸ್ತುವಾರಿ ಮಂತ್ರಿಗಳಾಗಿದ್ದು ಯಾವ ಸಾರ್ಥಕತೆಗಾಗಿ  ಎಂದು ನಡಹಳ್ಳಿ ಪ್ರಶ್ನಿಸಿದರಲ್ಲದೇ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸುವುದಾಗಿ ಹೇಳಿದರು.

ಬಿದರಕುಂದಿಯ ರೈತ ಮಹಿಳೆ ನಂದಮ್ಮ ಕುರಿ ಮಾತನಾಡಿ, ನಾವು ಸೂರ್ಯಕಾಂತಿ ಬಿತ್ತಿದ್ದೇವೆ. ಆದರೆ ಬೆಳೆ ನಿರೀಕ್ಷೆ ಇಟ್ಟುಕೊಂಡಷ್ಟು ಬೆಳೆದಿಲ್ಲ ಮಳೆ ಆಗದ ಕಾರಣ ಬೆಳೆ ಹಾಳಾಗುತ್ತಿದೆ ಎಕರೆಗೆ ೨೫-೩೦ ಸಾವಿರದವರೆಗೆ ಖರ್ಚು ಮಾಡಿದ್ದು ತೊಂದರೆಯಲ್ಲಿದ್ದೇವೆ ಎಂದು ಹೇಳಿಕೊಂಡರು.

ತೊಗರಿ, ಹತ್ತಿ,ಸೂರ್ಯಕಾಂತಿ,ಸಜ್ಜೆ ಬೆಳೆಯನ್ನು ಮಾಜಿ ಶಾಸಕರು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಶ್ರೀಶೈಲ ದೊಡಮನಿ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸಂಗಮೇಶ ಹತ್ತಿ, ಸಂತೋಷ ಬಾದರಬಂಡಿ, ಬಸವರಾಜ ಹಿರೇಕುರಬರ, ರೈತರಾದ ಚನ್ನಬಸಪ್ಪಗೌಡ ಪಾಟೀಲ್, ಶಂಕ್ರಪ್ಪ ಸಜ್ಜನ್, ಬಾಪುಗೌಡ ಗರಸಂಗಿ, ಸೋಮಶೇಖರ ಸಜ್ಜನ, ಬಸಮ್ಮ ಮಂಕಣಿ ಸೇರಿದಂತೆ ಬಿದರಕುಂದಿ, ಬಸರಕೋಡ,ರೂಢಗಿ, ಢವಳಗಿ ಗ್ರಾಮದ ರೈತರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ ಪಾಲಿಕೆಗೆ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆಚಂದ್ರನ ಮೇಲಿನ ಶಾಶ್ವತ ಮಾನವ ನೆಲೆ ನಿರ್ಮಾಣಕ್ಕೆ ಇಸ್ರೋ ಜೊತೆ ಕೈಜೋಡಿಸಲು ಮುಂದಾದ ನಾಸಾ