ಯರಗಟ್ಟಿ,ಜೂ,೧೫ : ಭಾರತೀಯ ಚುನಾವಣಾ ಆಯೋಗದ (ಇಸಿಆಯ್) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಆಯ್.ಆರ್) ಪ್ರಕ್ರಿಯೆಯ ಬಗ್ಗೆ ಭಾರತೀಯ ಜನತಾ ಪಕ್ಷವು ತನ್ನ ಮಂಡಲ ಮತ್ತು ಬೂತ್ ಮಟ್ಟದ ಘಟಕಗಳ ಮೂಲಕ ವ್ಯಾಪಕ ಜನಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.
ಸವದತ್ತಿ ಬಿಜೆಪಿ ಮಂಡಲಗಳಿಂದ ತಾಲೂಕಿನ ರೈನಾಪೂರ, ಕೊರಕೋಪ್ಪ, ಸೊಪ್ಪಡ್ಲ ಗ್ರಾಮದಲ್ಲಿ ಕೈಗೊಳ್ಳಲಾಗುವ ಜಾಗೃತಿ ಕಾರ್ಯಕ್ರಮಗಳ ಕೈಗೊಂಡಿದೆ ಎಂದು ಜಿಲ್ಲಾ ಕಾರ್ಯದರ್ಶಿ ಹಾಗೂ ಸವದತ್ತಿ ತಾಲೂಕಿನ ಎಸ್.ಆಯ್.ಆರ್. ಉಸ್ತುವಾರಿ ಮಂಜುನಾಥ ಪಮ್ಮಾರ ಹೇಳಿದರು.
ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಬೂತ್ ಮಟ್ಟದ ಜಾಗೃತಿ (ಬಿ.ಎಲ್.ಎ) ಬೂತ್ ಮಟ್ಟದ ಏಜೆಂಟರಿಗೆ ತರಬೇತಿ ನೀಡಿ, ಅವರು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರು ಸೇರ್ಪಡೆ ಮಾಡಲು ಮತ್ತು ಅನರ್ಹರ ಹೆಸರುಗಳನ್ನು ತೆಗೆದುಹಾಕಲು ಜಾಗೃತಿ ಮೂಡಿಸಲಾಗುತ್ತದೆ. ಅಕ್ರಮ ಮತದಾರರ ಪರಿಶೀಲನೆ ಮತ್ತು ಅಕ್ರಮ ವಿದೇಶಿಯರು ಅಥವಾ ನಕಲಿ ಮತದಾರರು ಪಟ್ಟಿಗೆ ಸೇರ್ಪಡೆಯಾಗುವುದನ್ನು ತಡೆಗಟ್ಟಿ, ಸ್ವಚ್ಛ ಮತದಾರರ ಪಟ್ಟಿಯನ್ನು ಹೊಂದುವುದರ ಮಹತ್ವವನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಹೇಳಿದರು.
ವಿರೋಧ ಪಕ್ಷಗಳು ಎಸ್.ಐ.ಆರ್ ಪ್ರಕ್ರಿಯೆಯ ಬಗ್ಗೆ ಸೃಷ್ಟಿಸುತ್ತಿರುವ ಗೊಂದಲ ಮತ್ತು ಸುಳ್ಳು ಮಾಹಿತಿಗಳಿಗೆ ವಾಸ್ತವಿಕ ಮಾಹಿತಿ ಹಾಗೂ ಅಂಕಿ-ಅಂಶಗಳ ಮೂಲಕ ಜನರಿಗೆ ಸ್ಪಷ್ಟನೆ ನೀಡಲಾಗಿದೆ ಎಂದರು.
ಈ ವೇಳೆ ಬಿಎಲ್ಓ ಈರಣ್ಣಾ ಚಂದರಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ನರಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಗೌಡಪ್ಪ ಸವದತ್ತಿ, ಮಾಜಿ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ದೇವರಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಸಯ್ಯ ಹಿರೇಮಠ, ಯರಗಟ್ಟಿ ಮಹಾಶಕ್ತಿ ಅಧ್ಯಕ್ಷ ಚೇತನ ಜಕಾತಿ, ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೊರಗಲ್ಲ, ಮಲ್ಲೇಶ್ವರ ಸುಳೇಬಾವಿ, ಈರಣ್ಣಾ ವೀರಶೆಟ್ಟಿ, ಮಹಾದೇವ ಮುರಗೋಡ, ಆನಂದ ಬಾಗೋಡಿ, ಗ್ರಾಪಂ ಮಾಜಿ ಸದಸ್ಯ ನಂದಗೋಪಾಲ ಕಡೆಮನಿ, ಸದಾನಂದ ಪಾಟೀಲ, ಮಹಾದೇವ ಯಡ್ರಾಂವಿ, ಭೀಮರಡ್ಡಿ ಸಿದ್ನಾಳ, ಮಲ್ಲಪ್ಪ ಹೂಗಾರ, ಮಂಜುನಾಥ ನೀಲಪ್ಪನವರ, ವಿಠ್ಠಲ ಬಂಟನೂರ, ಭೀಮಶಿ ಕಳ್ಳಿಗುದ್ದಿ, ಗಂಗಪ್ಪ ಶಿದ್ನಾಳ, ಲಕ್ಷ್ಮಣ ಬಾಗೋಡಿ, ಆರ್. ಆರ್. ಗಂಗರಡ್ಡಿ, ಪುಂಡಲೀಕ ಪೂಜೇರ, ಮೈತ್ರಾ ಹೊಂಗಲ, ಜಯಶ್ರೀ ಗಾಣಗಿ, ಯಶೋಧಾ ಕಾಶಪ್ಪನ್ನವರ, ಸಕ್ಕುಬಾಯಿ ಕುಂಬಾರ, ಚುಳಕಿ, ಮಹಾಂತೇಶ ಅಡಕಿ, ಶ್ರೀನಿವಾಸ ಕಡೇಮನಿ, ಬಸವರಾಜ ತೋರಣಗಟ್ಟಿ, ಉಮೇಶ ದಾಸರ, ವೆಂಕಣ್ಣ ಹುರಕನವರ ಮುತಾಂದ ಗಣ್ಯರು ಯುವಕರು ಇದ್ದರು.