ಬಳ್ಳಾರಿ,ಜೂ.20.: ಎಐಯುಟಿಯುಸಿಗೆ ಸಂಯೋಜನೆಗೊAಡ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ, ೨ ತಿಂಗಳ ಬಾಕಿ ವೇತನ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಒತ್ತಾಯಿಸಿ, ಹಾಸ್ಟೆಲ್ ಕಾರ್ಮಿಕರ ಪ್ರತಿಭಟನೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದಪ್ಪರವರಿಗೆ ಮನವಿ ಸಲ್ಲಿಸಿ ಚರ್ಚಿಸಲಾಯಿತು.
ಬಾಕಿಯಿರುವ ೨ ತಿಂಗಳ ವೇತನ ೨ ದಿನದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ರಾಜ್ಯದಿಂದ ಅನುದಾನ ಬಿಡುಗಡೆ ತಡವಾಗಿ ಆಗಿದೆ, ಮುಂದಿನ ದಿನಗಳಲ್ಲಿ ತಿಂಗಳ ಮೊದಲ ವಾರದಲ್ಲಿ ವೇತನ ಬಿಡುಗಡೆಯಾಗುವಂತೆ ಕ್ರಮಕೈಗೊಳ್ಳಲಾಗುವುದು. ಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲು ಗುತ್ತಿದಾರರ ಜೊತೆ ಒಂದು ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ, ಸಂಘದ ಜಿಲ್ಲಾಧ್ಯಕ್ಷ ಪ್ರಮೋದ್ ಮಾತನಾಡುತ್ತಾ, "ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿನಿಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರು, ಕಾವಾಲುಗಾರರು ನಿರಂತರವಾಗಿ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸುವುದು, ಬಡಿಸುವುದು ಹಾಗೂ ಇನ್ನಿತರ ಅನೇಕ ಶ್ರಮದಾಯಕ ಕೆಲಸಗಳನ್ನು ಮಾಡುತಿದ್ದಾರೆ. ಇಷ್ಟೆಲ್ಲ ಶ್ರಮಿಸಿದರು ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಈ ಕಾರ್ಮಿಕರಿಗೆ ಏಪ್ರಿಲ್, ಮೇ ತಿಂಗಳ ವೇತನ ಬಾಕಿ ಇದೆ. ಇಲಾಖೆಯಿಂದ ಪ್ರತಿ ತಿಂಗಳು ೫ನೇ ತಾರೀಕಿನ ಒಳಗೆ ವೇತನ ನೀಡಬೇಕೆಂಬ ಆದೇಶ ಇದ್ದರೂ, ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ.
ಜೂನ್ ತಿಂಗಳು ಶೈಕ್ಷಣಿಕವಾಗಿ ಶಾಲೆ- ಕಾಲೇಜು ಪ್ರಾರಂಭವಾಗುವ ತಿಂಗಳು. ದುಬಾರಿ ಶಾಲಾ-ಕಾಲೇಜು ಶುಲ್ಕಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ವೆಚ್ಚ ಗಗನಕ್ಕೆರುತ್ತಿರುವ ಈ ದಿನಗಳಲ್ಲಿ, ದುಡಿದಿರುವ ಹಣ ೨-೩ ತಿಂಗಳು ಕೈಗೆ ಸೇರದೆ ಹೋದರೆ, ಜೀವನ ಹೇಗೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರು
ರಾಜ್ಯ ಸರ್ಕಾರವು ಮೇ ೨೨, ೨೦೨೬ ರಂದು ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಿ, ಆದೇಶ ಮಾಡಿದೆ. ಇದರೊಂದಿಗೆ ತುಟ್ಟಿಭತ್ಯಯನ್ನು ಸೇರಿಸಿ ಜಾರಿಗೊಳಿಸಲು ಸಂಘದಿAದ ಈಗಾಲೆ ಮನವಿ ಮಾಡಲಾಗಿದೆ. ಹಾಗಾಗಿ ಪರಿಷ್ಕೃತ ವೇತನ ಕೂಡ ಜಾರಿಯಾಗಬೇಕಿದೆ" ಎಂದರು
ಜಿಲ್ಲಾ ಕಾರ್ಯದರ್ಶಿ ಸುರೇಶ್ ಮಾತನಾಡುತ್ತಾ "ಇದಲ್ಲದೆ ಈಗಿರುವ ಏಜೆನ್ಸಿಯಿಂದ ಎಲ್ಲಾ ಕಾರ್ಮಿಕರಿಗೆ ಐ.ಡಿ ಕಾರ್ಡ್, ವೇತನ ಚೀಟಿ, ನೇಮಕಾತಿ ಆದೇಶ ಪತ್ರ, ಸಮವಸ್ತç, ಕೂಡಲೇ ನೀಡಲು ಕೂಡ ಕ್ರಮವಹಿಸಬೇಕಿದೆ" ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚೇತನ್, ಮುರಳಿ ಕೃಷ್ಣ, ಲಕ್ಷಿö್ಮÃದೇವಿ, ಪಾರ್ವತಿ, ಎರಪ್ಪ, ಸುಂದರ್, ರಾಮು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.