ಘಟಪ್ರಭಾ.ಇಂದಿನ ದಿನಮಾನಗಳಲ್ಲಿ ನಶಿಸುತ್ತಿರುವ ಭೂಮಿಯ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತುಕ್ಕಾನಟ್ಟಿ ಬರ್ಡ್ಸ್ ಕೆ ವಿ ಕೆ ಯ ಡಾಕ್ಟರ್ ಎನ್ ಆರ್ ಸಾಲೀಮಠ ಅವರು ಹೇಳಿದರು.
ಅವರು ಸಾವಳಗಿ ನಂದಗಾಂವ (ಮುತ್ನಾಳ) ಗ್ರಾಮದಲ್ಲಿ ಜೈ ಜವಾನ್ ಜೈ ಕಿಸಾನ್ ಕೃಷಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಬಾಪುರ ಖನಗಾಂವ ದವರು ಶ್ರೀ ಮಹಾಲಕ್ಷ್ಮಿ ಸಹಕಾರಿ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಮಾತನಾಡಿ ಯಾರಾದರೂ ನಮಗೆ ಸಣ್ಣ ಸಹಾಯ ಮಾಡಿದರೆ ನಾವು ಅವರಿಗೆ ಎಷ್ಟೋ ಬಾರಿ ಧನ್ಯವಾದಗಳನ್ನು ತಿಳಿಸುತ್ತೇವೆ ಜೀವನ ಪರ್ಯಂತ ನಮ್ಮನ್ನು ಸಂರಕ್ಷಣೆ ಮಾಡುವ ಭೂಮಿ ತಾಯಿಯ ಋಣ ಎಷ್ಟು ಮಾಡಿದರು ಕಡಿಮೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಈಶ್ವರ ಭಾಗೋಜಿಯವರು ಮಾತನಾಡಿ ಕೃಷಿ ಗ್ರಾಮೀಣ ಅಭಿವೃದ್ಧಿ ಜೊತೆಗೆ ವಿಧವೆಯರು ಅಂಗವಿಕಲರ, ದೀನ ದುರ್ಬಲರ ಕಲ್ಯಾಣ ಕ್ಕಾಗಿ ಶೃಮವಹಿಸುತ್ತಿದೆ ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಶಂಕರ ಕೋರೆ ವಿಜಯಕುಮಾರ್ ಮಗದುಮ್ ಮುಂತಾದವರು ಸಾವಯವ ಕೃಷಿ ಕುರಿತು ಮಾತನಾಡಿದರು.
ಅತಿಥಿಗಳಾಗಿ ನಂದಗಾಂವ ಮುತ್ನಾಳ ಗ್ರಾಮಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಹರ್ಷಾ ಸುಣಗಾರ, ಹಿರಿಯರಾದ ಮಲ್ಲಪ್ಪಾ
ಕಾಡಪ್ಪಾ ಮಗದುಮ, ಕಾಡಗೌಡಾ ಗೌಡರ ( ಪಾಟೀಲ), ಮುಂತಾದವರು ಹಾಜರಿದ್ದರು. ನ್ಯಾಯವಾದಿಗಳಾದ ಕೀರ್ತಿ ವಿಜಯಕುಮಾರ್ ಮಗದುಮ್, ಕಾರ್ಯಕ್ರಮ ನಿರೂಪಿಸಿದರೆ,
ಕಾರ್ಯದರ್ಶಿ ಶ್ರೀಮತಿ ಮಾಧವಿ ಪಾಟೀಲ ವಂದನಾರ್ಪಣೆ ಸಲ್ಲಿಸಿದರು
ಶ್ರೀಮತಿ ಶೋಭಾ ಈಶ್ವರ ಭಾಗೋಜಿ ಶೋಭಾ ಹುರಕಡ್ಲಿ ಹಾಗೂ ಸಾವಳಗಿ ನಂದಗಾಂವ ಮುತ್ನಾಳ ಖಾನಾಪುರ ಶಿವಾಪುರ ಗ್ರಾಮಗಳ ನಾಗರೀಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಔಟಿe ಚಿಣಣಚಿಛಿhmeಟಿಣ
? Sಛಿಚಿಟಿಟಿeಜ bಥಿ ಉmಚಿiಟ