ಬಳ್ಳಾರಿ. ಜು. 13 : ಕೆಲಸದ ಒತ್ತಡ, ಆಹಾರ ಪದ್ಧತಿ ಹಾಗೂ ಚಟುವಟಿಕೆಗಳ ಕಾರಣ ಯುವಶಕ್ತಿಯಲ್ಲಿ ರೋಗ್ಯ ಹೆಚ್ಚಾಗುತ್ತಿದ್ದು, ಮಾಧ್ಯಮಗಳಗಳು ಆರೋಗ್ಯಕ್ಕೆ ಆದ್ಯತೆ ನೀಡಬೇಕು ರೋಗ ಬಂದಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ಮುಂಜಾಗ್ರತೆ ವಹಿಸುವುದು ಉತ್ತಮ ಮಾರ್ಗ ಎಂದು ಲೈಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್ ದ್ದಾರೆ.
ಅವರು ಶನಿವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರ'ವನ್ನು ಸ್ವತಹ ಬಿಪಿ ಯನ್ನು ಚೆಕ್ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಿಗೆ ದಿನಪೂರ್ತಿ ಕೆಲಸ ಮಾಡುವ ಅನಿವಾರ್ಯತೆ ಇರುವುದರಿಂದ ಅವರು ತಮ್ಮ ಆರೋಗ್ಯದ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ ಇದರಿಂದ ಅನಾರೋಗ್ಯದಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ, ನಿಮ್ಮ ಕೆಲಸದ ಒತ್ತಡದಲ್ಲಿಯೂ ಸಹ ದಿನದ ಅರ್ಧ ಗಂಟೆಯನ್ನು ನಿಮ್ಮ ವಯಕ್ತಿಕ ಆರೋಗ್ಯಕ್ಕಾಗಿ ಮೀಸಲಿಟ್ಟು ನಡಿಗೆ ಮತ್ತು ಯೋಗ ಆಸನವನ್ನು ರೂಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದುಈ ಸಂದರ್ಭದಲ್ಲಿ ಪತ್ರಕರ್ತರಿಗೆ ಒಂದು ಕಿವಿ ಮಾತು ಹೇಳಿದರು.
ಪತ್ರಕರ್ತರ ಸಂಘದಿಂದ ನಿಧಿಯನ್ನು ಸ್ಥಾಪಿಸಲಾಗಿದ್ದು ಅತ್ಯಂತ ಒಳ್ಳೆಯ ಕಾರ್ಯ ವೀರಭದ್ರಗೌಡರ ಈ ಕಾರ್ಯ ಶ್ಲಾಘನೀಯವಾದದ್ದು ಆ ನಿಧಿಗೆ ನಾನು ಸಹ ನನ್ನ ಕೈಲಾದ ದೇಣಿಗೆಯನ್ನು ನೀಡುವುದಾಗಿ 51,000ಗಳ ಚೆಕ್ಕನ್ನು ನೀಡಿದರು.
ತಮ್ಮ ಕೆಲಸದ ಒತ್ತಡದ ಮಧ್ಯಯೂ ಸಹ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ತಪ್ಪದೇ ಆರೋಗ್ಯ ತಪಾಸಣೆಗೆ ಒಳಗಾಗಬೇಕು ತನ್ಮೂಲಕ ಆರಂಭ ಹಂತದಲ್ಲಿ ಚಿಕಿತ್ಸೆಯಿಂದ ರೋಗಮುಕ್ತರಾಗಬಹುದು, ಎಲ್ಲಕ್ಕಿಂತ ಮಿಗಿಲಾಗಿ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಅತ್ಯಂತ ಜಾಣತನ ಎಂದು ತಿಳಿಸಿದರು.
ಯಾವುದೇ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಿಂತ ಮುಂಚೆ ವರದಿಯ ಸತ್ಯತೆಯನ್ನು ಅಥವಾ ಆರೋಪದ ನಿಜಾಂಶವನ್ನು ತಿಳಿದುಕೊಂಡು ವರದಿ ಮಾಡಬೇಕು ಯಾವುದೇ ಕಾರಣಕ್ಕೂ ಅಜಾಗ್ರತೆಯಿಂದ ಪೂರ್ವ ಗ್ರಹದಿಂದ ಸುದ್ದಿಯನ್ನು ಮಾಡಬಾರದು ಇದರಿಂದ ಪ್ರತಿಯೊಬ್ಬ ಪತ್ರಕರ್ತರು ವೃತ್ತಿಪರತೆಯನ್ನು ಕಾಯ್ದುಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎನ್. ಬಸಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಅರೋಗ್ಯ ವಾಗಿದ್ದರೆ ಸಮಾಜವೂ ಆರೋಗ್ಯದಿಂದ ಇರುತ್ತದೆ ರೋಗದ ಗುಣ ಲಕ್ಷಣಗಳನ್ನುಆರಂಭದಲ್ಲಿ ಕೊಂಡುಕೊಂಡಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಅಧ್ಯಕ್ಷ ಎನ್. ವೀರಭದ್ರಗೌಡ ಅವರು, ಸ್ವಾಗತಿಸಿ ಕರ ಕ್ಷೇಮಾಭಿವೃದ್ಧಿ ನಿಧಿ, ಪತ್ರಕರ್ತರ ಕಲ್ಯಾಣ ಗಳನ್ನು ವಿವರಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ಎಲ್ ಆರ್ ರಮೇಶ್ ಬಾಬು ಸೇರಿದಂತೆ ವಿವಿಧ ವಿಭಾಗದ ವೈದ್ಯರು ಟೆಕ್ನಿಷಿಯನ್ಗಳು, ನರ್ಸ್ ಗಳು ಮತ್ತು ಸಹಾಯಕರು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.