ರಾಯಬಾಗ: ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಮುಂದಿನ ಪೀಳಿಗೆಗೆ ಮಾದರಿಯಾಗಿಬೇಕೆಂದು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾರ್ವಜನಿಕ ಆಸ್ಪತ್ರೆಯ ಶೂಶ್ರೂಷಾಧಿಕಾರಿ, ಯುವ ಕವಿ ಶಿರೂರ ಶ್ರೀಶೈಲ ಇವರ ಪ್ರೀತಿ ಬಂಗಾರ ೫ ನೇ ಚುಟುಕು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಗೋಕಾವಿ ನಾಡಿನ ಹಿರಿಯ ಸಾಹಿತಿ ಈಶ್ವರ ಮಮದಾಪೂರ ಮಾತನಾಡಿ, ಚುಟುಕುಗಳು ಚಿಕ್ಕದಾದರೂ ಅದರ ಒಳಾರ್ಥ ಹಿರಿದಾಗಿರುತ್ತದೆ, ಶಿರೂರ ಶ್ರೀಶೈಲ ಅವರ ಚುಟುಕುಗಳಲ್ಲಿ ಹಾಸ್ಯ ಲಾಸ್ಯ, ವಿಡಂಬನೆ, ಸತಿಪತಿಗಳ ಸಂಬಂಧ, ಪ್ರೀತಿ ಪ್ರೇಮ, ಹೀಗೆ ಹಲವಾರ ಆಯಾಮಗಳಿಂದ ಕೂಡಿದ್ದು, ಓದುಗರಿಗೆ ಪ್ರೀಯ ಏನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಡಾ. ಕುಮಾರ ತಳವಾರ, ವಕೀಲ ಡಿ.ಎಚ್.ಯಲ್ಲಟ್ಟಿ, ಡಾ. ಪ್ರಶಾಂತ ಹೊತ್ತಗಿಮಠ, ಡಾ. ಎಸ್.ಎಮ್.ಪಾಟೀಲ, ಶಿವಾನಂದ ಬೆಳಕೂಡ, ತುಕಾರಾಮ ವಂಟಗೋಡಿ, ಪಿ.ಎಸ್. ನಾಯಿಕ, ರವೀಂದ್ರ ಪಾಟೀಲ, ಕುಮಾರ ಅವಳೆ, ಎಚ್.ಎ.ಭಜಂತ್ರಿ, ಗಣೇಶ ಕಾಂಬಳೆ, ದಿಲೀಪ ಕಾಂಬಳೆ, ಅಶೋಕ ಅಂಗಡಿ, ಅನೀಲ ಕೊರವಿ, ಸಾಗರ ಝೆಂಡೆನ್ನವರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷ, ಪದಾಧಿಕಾರಿಗಳು ಇದ್ದರು.
ಸಾಂಗಲಿಯ ಉಷಾಕಲಾ ಆಸ್ಪತ್ರೆ ಹಾಗೂ ಮಿರಜದ ಸೇವಾ ಸದನ ಆಸ್ಪತ್ರೆ ಹೃದಯ ರೋಗ ತಜ್ಞರು ಪಟ್ಟಣದ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದರು.