ಕಾಗವಾಡ,01 : ಇಂದು ಕಾಗವಾಡ ತಾಲೂಕ ಪಂಚಾಯತ್ ಸಭಾಭವನದಲ್ಲಿ ದಿನಾಂಕ 3 /9 /2026 ರಂದು ನಡೆಯಲಿರುವ ಬೃಹತ್ ಉಚಿತ ರಕ್ತದಾನ ಶಿಬಿರದ ಕುರಿತು ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜರಗಿಸಲಾಯಿತು, ಸದರಿ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ವೀರಣ್ಣ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚನ್ನಿ ಗ್ರಾಮಯ್ಯ, ಶಿಶು ಅಭಿವೃದ್ಧಿ ಅಧಿಕಾರಿಗಳು ಸಂಜೀವ್ ಕುಮಾರ್ ಸದಲ್ಗೆ ತಾಲೂಕಾ ಅರೋಗ್ಯ ಅಧಿಕಾರಿಗಳು ಡಾಕ್ಟರ್ ಬಸಗೌಡ ಕಾಗೆ ಮತ್ತು ಪಿಎಂ ಪೋಶನ್ ಅಭಿಯಾನ ಸಹಾಯಕ ನಿರ್ದೇಶಕರಾದ ಎಂ ವಿ ನಾಮ್ದಾರ್ ಿಆರ್ಸಿ ಶ್ರೀ ಪಾಂಡುರಂಗ ಮದಬಾವಿ, ಮೆಹಬೂಬ್ ಮುಜಾವರ್, ಅನ್ಸಾರಿ ಮುಂತಾದವರು ಹಾಜರಿದ್ದರು. ಸದರಿ ಸಭೆಯಲ್ಲಿ ರಕ್ತದಾನ ಶಿಬಿರದ ಕುರಿತು ಐನಾಪುರ್ ಗ್ರಾಮದ ಕೆ ಆರ್ ಎಸ್ ಸಭಾಭವನ ಪದವಿ ಪೂರ್ವ ಕಾಲೇಜ್ ಇಲ್ಲಿ ದಿನಾಂಕ 03.09.2026 ರಂದು ಬೆಳಿಗ್ಗೆ 8:00 ಯಿಂದ ಸಾಯಂಕಾಲ 6:00 ವರೆಗೆ ಶಿಬಿರವು ಜರುಗಲಿದ್ದು ಸದರಿ ಶಿಬಿರಕ್ಕೆ 18 ವರ್ಷ ಮೇಲ್ಪಟ್ಟು ಮತ್ತು 55 ವರ್ಷ ಒಳಗಿನ ಎಲ್ಲಾ ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದರಿ ಶಿಬಿರವನ್ನು ಯಶಸ್ವಿಗೊಳಿಸಲು ಕರೆಕೊಡಲಾಯಿತು.