Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆಯಿಂದ ಪಂಚವಟಿಯಲ್ಲಿ ಪ್ರವಚನ: ಜ.14ರವರೆಗೆ ಧಾರ್ಮಿಕ ಕಾರ್ಯಕ್ರಮ

ಬೈಲಹೊಂಗಲ: ಸಮೀಪದ ಸೊಗಲ ರಸ್ತೆ ಪಕ್ಕದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಇಂದಿನಿಂದ (ಜ.9) 14ರ ವರೆಗೆ ಸತತ ಆರು ದಿನಗಳ ಕಾಲ ಪ್ರವಚನ ಮತ್ತು ವಿವಿಧ ಧಾರ್ಮಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.

ಜ.9 ರಂದು ಸಂಜೆ 6ಕ್ಕೆ ಘಟಪ್ರಭಾ ಶ್ರೀ ಶಿವಕುಮಾಮಾರ ಶ್ರೀಗಳಿಂದ ''ಶಿವಪಥವನರಿದೊಡೆ ಗುರುಪಥವೆ ಮೊದಲು' ವಿಷಯ ಕುರಿತು ಪ್ರವಚನ ನಡೆಯಲಿದೆ. ಜ.10 ರಂದು ಸಂಜೆ 6ಕ್ಕೆ ಲಿಂಗವ ಪೂಜಿಸಿದೊಡೆ ಪರದಲ್ಲಿ ಸುಖ'' ವಿಷಯ ಕುರಿತು ಪ್ರವಚನ ನಡೆಯಲಿದೆ.

ಜ. 11 ರಂದು ಬೆಳಗ್ಗೆ 10.30ಕ್ಕೆ ಪಶು ಆಸ್ಪತ್ರೆ ವತಿಯಿಂದ ಜಾನುವಾರಗಳ ಆರೋಗ್ಯ ಶಿಬಿರ ಮಧ್ಯಾಹ್ನ 3ಕ್ಕೆ ಕಾರಿಮನಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಂಚವಟಿ ವರೆಗೆ ಸುತ್ತ ಮುತ್ತಲಿನ ಗ್ರಾಮಗಳ ಮಹಿಳೆಯರಿಂದ ಸಹಸ್ರ ಪೂರ್ಣ ಕುಂಭೋತ್ಸವ ಮೆರವಣಿಗೆ, ಸಂಜೆ 6ಕ್ಕೆ ಗೋ-ಪೂಜೆ, ಮಹಿಳಾ ಗೋಷ್ಠಿ, ಮಹಿಳೆಯರಿಗೆ ಉಡಿ ತುಂಬುವುದು, ಹೋವಿನ ಮಹತ್ವ ವಿಚಾರ ಸಂಕಿರಣ ಜ. 12 ರಂದು ಸಂಜೆ 6ಕ್ಕೆ ರೈತ ಹಾಗೂ ಕೃಷಿ ಬಗ್ಗೆ ವಿಚಾರ ಸಂಕಿರಣ ಗೋಷ್ಠಿ ನಡೆಯಲಿದೆ.

ಜ. 13 ರಂದು ಬೆಳಗ್ಗೆ 7ಕ್ಕೆ ಶಿವಗಣಪತಿ ಮಂದಿರದ ಮೂರ್ತಿಗಳಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಗ್ಗೆ 10.30ಕ್ಕೆ ಆಧುನಿಕ ಧರ್ಮದಲ್ಲಿ ಯುವಕರ ಪಾತ್ರ ಕುರಿತು ಯುವ ಸಮಾವೇಶ. ಸಂಜೆ 6ಕ್ಕೆ ಮಠ ಮತ್ತು ಸಮಾಜ, ಗುರು ಹಾಗೂ ಕರಸಂಜಾತರ ಸಮ್ಮಿಲನ ರಾತ್ರಿ 9ಕ್ಕೆ ಸಂಗೀತ ಸಂಭ್ರಮ ನಡೆಯಲಿದೆ.

ಜ.14 ರಂದು ಬೆಳಗ್ಗೆ 7ಕ್ಕೆ ಪಂಚವಟಿ ಸಂಕ್ರಾಂತಿ ಸಂಭ್ರಮ ನಂತರ ಅಭ್ಯಂಗ ಸ್ನಾನ, ವಿಶೇಷ ಪೂಜೆ, ಧ್ಯಾನ ಉಪದೇಶ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ.

ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಬೆಳಗಾವಿ ಗುರುಸಿದ್ದ ಶ್ರೀಗಳು, ಅಲಮಪ್ರಭು ಶ್ರೀಗಳು, ಚಿದಾನಂ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಜಡಿಸಿದ್ದೇಶ್ವರ ಶ್ರೀಗಳು, ಪಂಚಮ ಶಿವಲಿಂಗ ಶ್ರೀ ಗಳು, ವಪ್ಪತ್ತೇಶ್ವರ ಶ್ರೀಗಳು, ಚಿದಾನಂದ ಅವದೂತ ಶ್ರೀಗಳು, ಮಲ್ಲಿಕಾರ್ಜುನ ಶ್ರೀ ಗಳು, ಅಮರಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು.

ಮುನವಳ್ಳಿ ಶ್ರೀ ಮುರುಫೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೈಲಹೊಂಗಲ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸುವರು. ಪಂಚವಟಿ ಮುಖ್ಯ ವ್ಯವಸ್ಥಾಪಕ ಸಂತೋಷ ಹಿರೇಮಠ,ಧರ್ಮದರ್ಶಿಗಳಾದ ಅಶೋಕ ಶೆಟ್ಟರ್, ಎ.ಬಿ.ದೇಸಾಯಿ ನೇತೃತ್ವ ವಹಿಸುವರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ‌ಕರ, ಶಾಸಕ ಮಹಾಂತೇಶ ಕೌಜಲಗಿ, ಪಶುವೈದ್ಯ ಡಾ. ಎಂ.ಬಿ. ಸಜ್ಜನ ಸೇರಿದಂತೆ ನಾನಾ ಗಣ್ಯರು ಪಾಲ್ಗೊಳ್ಳಲಿರುವ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ