Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಕಾರಣಿಳಿಗೆ ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಗೊತ್ತಿಲ್ಲ: ವಿಜಯ ಕುಲಕರ್ಣಿ

ಮುನವಳ್ಳಿ,ಏಪ್ರಿಲ್ 17:ಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಜೋತೆ ಕಳಸಾ ಬಂಡೂರಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ ಮೊದಲು ಮಹಾದಾಯಿ ಎಂದರೇನು ಕಳಸಾ ಬಂಡೂರಿ ಯೋಜನೆ ಎಂದರೇನು ಎಂಬುದೇ ನಮ್ಮ ರಾಜಕಾರಣಿಳಿಗೆ ಗೊತ್ತಿಲ್ಲ ಸುಮ್ಮನೆ ಭರವಸೆ ನೀಡುತ್ತಾರೆ ಇದು ನಿಲ್ಲಬೇಕು ಇದರ ವಿರುದ್ದ ನಾವು ಚುನಾವಣೆಯಲ್ಲಿ ನೋಟಾ ಬಟನ್ ಒತ್ತುವ ಮೂಲಕ ಪ್ರತಿಭಟಿಸುತ್ತಾ ಬಂದಿದ್ದೇವೆ ಇನ್ನು ಮುಂದೆ ನಡೆಯುವ ಚುನಾವಣೆಯಲ್ಲಿ ನೋಟಾ ಬಟನ್ ಬದಲು ಬಾರುಕೋಲು ಚಿತ್ರವನ್ನು ಮತಯಂತ್ರದಲ್ಲಿ ಆಳವಡಿಸಬೇಕು ಬಾರಕೋಲು ಯಾವುದೇ ಜಾತಿ, ಮತ ಜನಾಂಗಕ್ಕೆ ಸೇರಿದ್ದಲ್ಲ ತಪ್ಪು ಮಾಡಿದವರಿಗೆ ಬಾರುಕೋಲಿನಿಂದ ಚಾಟಿ ಬೀಸುವುದು ವಾಡಿಕೆ ಹಾಗಯೆ ನಮಗೆ ಬೇಡವಾದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ದಿಸಿದ್ದರೆ ಅವರಿಗೆ ಬಾರುಕೋಲು ಬಟನ್ ಒತ್ತುವ ಮೂಲಕ ಚಾಟಿ ಬೀಸುತ್ತೇವೆ ಚುನಾವಣಾ ಆಯೋಗವು ಬಾರುಕೋಲು ಚಿತ್ರವನ್ನು ಮತಯಂತ್ರದಲ್ಲಿ ಆಳವಡಿಸಬೇಕೆಂದು ಒತ್ತಾಯಿಸುತ್ತೇವೆ ಈಗಾಗಲೇ ಈ ಕುರಿತು ಮನವಿ ಸಲ್ಲಿಸಲಾಗಿದೆ. ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ಮಹಾದಾಯಿ ಕಳಸಾ ಬಂಡೂರಿ ಯೋಜನೆಗಳು ನೆನಪಾಗುತ್ತವೆ ಚುಣಾವಣೆ ಮುಗಿದ ನಂತರ ಆ ವಿಷಯದ ಕುರಿತು ಚಕಾರ ಎತ್ತುವುದಿಲ್ಲ ಚುನಾವಣೆಗೆ ನಿಂತವರು ಮಹಾದಾಯಿ ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಸಭೆ ಸಮಾರಂಭಗಳಲ್ಲಿಹಾಗೂ ಚುನಾವಣೆ ಪ್ರಚಾರದಲ್ಲಿ ಹೇಳುತ್ತಿರುವುದು ನಿಲ್ಲಬೇಕು ಮೂಗಿಗೆ ತುಪ್ಪ ಒರೆಸುವ ಕೆಲಸ ಬಹಳ ವರ್ಷಗಳಿಂದ ಆಗುತ್ತಿದೆ ಈ ಅನ್ಯಾಯ ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ೨೪ ವರ್ಷಗಳಾದರೂ ಕಳಸಾ ಬಂಡೂರಿ ಮಲಪ್ರಭಾ ತಿರುವು ಯೋಜನೆ ಅನುಷ್ಠಾನವಾಗಿಲ್ಲ ೨೦೦೬ ರಲ್ಲಿ ಗುದ್ದಲಿ ಪೂಜೆ ಮಾಡಿ ೨೦೧೮ ನ್ಯಾಯಾಧಿಕರಣತೀರ್ಪು, ಕೇಂದ್ರದ ಕ್ಲಿಯರೆನ್ಸ್ ಗೆಜೆಟ್ ನೋಟಿಫಿಕೇಶನ್ ಹೊಸ ಡಿ.ಪಿ.ಆರ್ ಎಲ್ಲವೂ ಆಗಿದ್ದರೂ ಇನ್ನೂ ಯೋಜನೆ ಪೂರ್ಣಗೊಳ್ಳದಿರುವುದು ವಿಶಾದದ ಸಂಗತಿಯಾಗಿದೆ ಭೀಕರ ಬರಗಾಲದ ಈ ಸಂದರ್ಭದಲ್ಲಿ ಬೆಳೆ ಸರಿಯಾಗಿ ಬಂದಿಲ್ಲ ಅಂತರ್ಜಲ ಮಟ್ಟ ಕುಸಿದಿದೆ ಈಗ ಕಳಸಾ ಬಂಡೂರಿ ನದಿ ತಿರುವು ಯೋಜನೆ ಕಾಮಗಾರಿ ಪ್ರಾರಂಭಿಸಿ ರೈತರಿಗೆ ಆಸರೆಯಾಗಬೇಕು ಎಂದು ತಿಳಿಸಿದರು.
ಮಹಾದಾಯಿ ಮಲಪ್ರಭಾ ನದಿ ಜೊಡಣಾ ಹೋರಾಟ ಸಮಿತಿ ಸದಸ್ಯರಾದ ರವಿ ಹುರಳಿ, ಕಲ್ಲನಗೌಡ ಬಿಕ್ಕನಗೌಡ್ರ, ಫಿರೋಜ ಬಿಜಲಿಖಾನ, ಮಂಜುನಾಥ ಮೇಟಿ ಇತರರು ಉಪಸ್ಥಿತರಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ