ಅಥಣಿ: ಪೊಲೀಸ್ ಇಲಾಖೆಯ ವತಿಯಿಂದ ಅಥಣಿ ಪೋಲಿಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಬಕ್ರೀದ್ ಹಬ್ಬದ ನಿಮಿತ್ಯ ಸಾರ್ವಜನಿಕ ಶಾಂತಿ ಸಭೆ ನಡೆಸಲಾಯಿತು.
ಈ ವೇಳೆ ಅಥಣಿ ಡಿಎಸ್ಪಿ ಪ್ರಶಾಂತ ಮುನ್ನೋಳಿ ಮಾತನಾಡಿ, ಬಕ್ರೀದ್ ಹಬ್ಬವನ್ನು ಎಲ್ಲ ಸಮುದಾಯದವರು ಪರಸ್ಪರ ಸೌಹಾರ್ದತೆಯಿಂದ ಆಚರಿಸಬೇಕು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವುದು, ಸಂಚಾರಕ್ಕೆ ತೊಂದರೆಯಾಗುವಂತೆ ವರ್ತಿಸುವುದು ಕಾನೂನು ಪ್ರಕಾರ ಅಪರಾಧ ವದಂತಿ ಹಬ್ಬಿಸುವವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕೇಲವು ಕೀಡಗೇಡಿಗಳು ಗೋ ರಕ್ಷಕರ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಮಾಡಬಾರದು ಎಲ್ಲದಕ್ಕೂ ಕಾನೂನು ಇದೆ ಸರ್ಕಾದರ ನಿಯಮಗಳ ಬಗ್ಗೆ ಉಲ್ಲಂಗನೆಯಾದಲ್ಲಿ ತಮ್ಮ ಗಮನಕ್ಕೆ ಬಂದರೆ ತಾವು ನೈತಿಕ ಪೋಲಿಸ್ ಗಿರಿ ತೋರದೆ ಪೋಲಿಸರಿಗೆ ಮಾಹಿತಿ ನೀಡಬೇಕು ತಪ್ಪು ಕಂಡ ಬಂದರೆ ಪೋಲಿಸ್ ಇಲಾಖೆ ಅಂತವರ ವಿರುದ್ಧ ಕಠಿಣ ಕಾನೂನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು
ಇನ್ನೂ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ, ಹಬ್ಬದ ದಿನ ಪ್ರಮುಖ ಮಸೀದಿ, ಈದ್ಗಾ ಮೈದಾನ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಶಾಂತಿ ಕಾಪಾಡಬೇಕು ತುರ್ತು ಸಂದರ್ಭದಲ್ಲಿ 112 ಅಥವಾ ಠಾಣೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಮನವಿ ಮಾಡಿದರು ಸರ್ಕಾರದ ಮಾರ್ಗಸೂಚಿಯಂತೆ ಶಾಂತಿಯುತವಾಗಿ ಹಬ್ಬ ಆಚರಿಸುವುದಾಗಿ ಸಮುದಾಯದ ಮುಖಂಡರು ಭರವಸೆ ನೀಡಿದರು.
ನಂತರ ಮಾತನಾಡಿದ ಅಸ್ಲಮ ನಾಲಬಂದ,ಅಯಾಜ ಮಾಸ್ಟರ್, ಶಬ್ಬೀರ ಸಾತಬಚ್ಚೆ,ಮಂಜು ಹೊಳಿಕಟ್ಟಿ,ಶಿವಾನಂದ ಸೌದಾಗರ, ಮಾತನಾಡಿದರು
ಈ ಸಂದರ್ಭದಲ್ಲಿ ಅಸ್ಲಮ ನಾಲಬಂದ,ಅಯ್ಯಾಜ್ ಮಾಸ್ಟರ್ ಶಬ್ಬಿರ್ ಸಾತಬಚ್ಚೆ ಮುಂಜು ಹೋಳಿಕಟ್ಟಿ ಶಿವಾನಂದ ಸೌದಾಗರ,ಆಶೀಫ ತಾಂಬೋಳ್ಳಿ,ಸಲಾಂ ಕಲಿ,ರಿಯಾಜ ಸನದಿ,ಜುಬೇರ ನಾಲಬಂದ,ಸಯ್ಯದಮಿನ್ ಗದ್ಯಾಳ,ಸಯ್ಯದ ಗಡ್ಡೆಕರ,ಮಹಾದೇವ ಯಕ್ಕಂಚಿ ಸೇರಿದಂತೆ ಇನ್ನಿತಿತ ಮುಖಂಡರು ಉಪಸ್ಥಿತರಿದ್ದರು.
