ಬಳ್ಳಾರಿ,ಜೂ.೨೧: ಯೋಗವು ದೈಹಿಕ, ಮಾನಸಿಕ ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಜೀವನಶೈಲಿಯೊಂದಿಗೆ, ಇಂದಿನ ವೇಗದ ಜೀವನದಲ್ಲಿ ಒತ್ತಡ ಮತ್ತು ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿ ಯೋಗ ಅಭ್ಯಾಸವು ಅತ್ಯಂತ ಅಗತ್ಯವಾಗಿದೆ ಎಂದು ಮುಖ್ಯಅತಿಥಿ ಪೋಲಾ ರಾಧಾಕೃಷ್ಣ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಯೋಗಶ್ರೀ ಅಯ್ಯಂಗಾರ್ ಕೇಂದ್ರವು ನಗರದಲ್ಲಿ ೧೨ ವರ್ಷಗಳಿಂದ ಸತತವಾಗಿಜನರಲ್ಲಿಅಯ್ಯಂಗಾರ್ ಯೋಗಭೋಧಿಸುತ್ತದ್ದು, ಸರಿಯಾದಕ್ರಮದಲ್ಲಿಹೇಳಿಕೊಡುವುದಲ್ಲದೆ, ಬಳ್ಳಾರಿಜನತೆಯಲ್ಲಿಜಾಗೃತಿಯನ್ನುಮೂಡಿಸುತಿದ್ದಾರೆ. ಇಂದಿನ ಒತ್ತಡದ ಜೀವನಶೈಲಿ ಕುಟುಂಬದಲ್ಲಿನ ಸಾಮರಸ್ಯತೆ ಬೆಳೆಸಲು, ಮಕ್ಕಳಲ್ಲಿದೈಹಿಕಮತ್ತುಮಾನಸಿಕಆರೋಗ್ಯವನ್ನುಕಾಪಾಡಿಕೊಳ್ಳಲು ಈ ಜಾಗೃತಿಯಬೆಳೆಯಲುಅತ್ಯಂತಅವಶ್ಯವಾಗಿದೆಎAದುತಿಳಿಸಿದರು.
ಮುಖ್ಯ ಅತಿಥಿಗಳಾದ ಡಾ. ರವಿಶಂಕರ್ ರವರು ಮಾತನಾಡಿ, ಯೋಗದ ವೈಜ್ಞಾನಿಕ ಮಹತ್ವ, ಯೋಗ ಮತ್ತು ಪ್ರಾಣಾಯಾಮವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಮೊಬೈಲ್ ಮತ್ತು ಅತಿಯಾದ ತಂತ್ರಜ್ಞಾನ ಬಳಕೆಯಿಂದ ದೂರವಿದ್ದು,ಶರೀರದಲ್ಲಿರೋಗನಿರೋಧಕಶಕ್ತಿಯನ್ನುಹೆಚ್ಚಿಸಲುಮನೆಯಿಂದಹೊರಗೆಬAದುಸರಿಯಾದಗುರುಗಳಮಾರ್ಗದರ್ಶನದಲ್ಲಿಅಭ್ಯಾಸವನ್ನುಕೈಗೊAಡುರೋಗಗಳುಬರದೆಇರಲುಮುAಜಾಗ್ರತೆಯನ್ನುವಹಿಸಲುಯೋಗಅತ್ಯAತಸಹಾಯಗುತ್ತದೆ. ಎಲ್ಲರಿಗೂಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿ,ಯೋಗವು ಜೀವನದ ಒಂದು ಶಿಸ್ತು ಎಂಬ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರದ ಗುರುಗಳಾದ ವಿರೂಪಾಕ್ಷಡಾಣಿ ರವರು ಮಾತನಾಡುತ್ತಾ, ಬಳ್ಳಾರಿಯಲ್ಲಿರುವ ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರವು ಯೋಗ ಶಿಕ್ಷಣ ಮತ್ತು ಸರಿಯಾದಯೋಗಾಭ್ಯಾಸಕ್ರಮವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಮತ್ತು ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯೋಗದ ಶಿಸ್ತಿನ ತರಬೇತಿ ನೀಡಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಈ ಕೇಂದ್ರವು ಸಹಕಾರಿಯಾಗಿದೆ ಎಂದು ವೇದಿಕೆಗೆ ವಿವರಿಸಿದರು.ಕನ್ನಡದವರೇಆದಯೋಗಭೀಷ್ಮ, ಆಧುನಿಕಯೋಗದಪಿತಾಮಹರೆನಿಸಿದಪದ್ಮವಿಭೂಷಣಗೂರೂಜಿ ಬಿ.ಕೆ.ಎಸ್.ಅಯ್ಯಂಗಾರ್ ಯೋಗಪದ್ಧತಿಯೂಜಗತ್ತಿನಾದ್ಯಂತಜನಪ್ರಿಯವಾಗಿದೆ. ಪರಿಕರಗಳನ್ನುಬಳಸಿಸುಲಭವಾಗಿಸರಿಯಾದಕ್ರಮದಲ್ಲಿಹೇಗೆಅಭ್ಯಾಸಿಸಬಹುದುಎಂದುಪ್ರಾತ್ಯಕ್ಷಿಕೆಯನ್ನುತೋರಿಸಿದರು.
ವಿದ್ಯಾರ್ಥಿಗಳು ತಮ್ಮ ಯೋಗ ದಿನಾಚರಣೆಯ ಅನುಭವಗಳನ್ನು ಹಂಚಿಕೊAಡು, ಯೋಗಾಸನಗಳು ಮತ್ತು ಪ್ರಾಣಾಯಾಮದ ಮೂಲಕ ತಮ್ಮ ದೇಹ ಮತ್ತು ಮನಸ್ಸಿನಲ್ಲಿ ಕಂಡ ಬದಲಾವಣೆಗಳನ್ನು ವಿವರಿಸಿದರು. ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚಿದಂತೆ ಮತ್ತು ಮನಸ್ಸಿಗೆ ಶಾಂತಿ ದೊರೆತಂತೆ ತಮ್ಮ ಅನುಭವಗಳನ್ನು ಹರ್ಷದಿಂದ ವ್ಯಕ್ತಪಡಿಸುತ್ತಾ, ಇಂತಹ ಕಾರ್ಯಕ್ರಮಗಳು ತಮಗೆ ಆರೋಗ್ಯಕರ ಜೀವನದ ಮಹತ್ವವನ್ನು ತಿಳಿಸಿವೆ ಎಂದು ವಿದ್ಯಾರ್ಥಿಗಳು ಹೇಳಿದರು.