ಹೊಸಪೇಟೆ: ಹಳೆಯದಾದ ಹಾಗು ನಗರಸಭೆ ಮುಂದೆ ಇದ್ದ ನಗರಸಭೆ ಮಳಿಗೆಗಳ ತೆರವು ಕಾರ್ಯಚರಣೆ ಸೋಮವಾರದಿಂದ ಆರಂಭವಾಯಿತು. ತೆರವು ಮಾಡಲು ನೋಟಿಸ್ ನೀಡಿ ಸಮಯಾವಕಾಶ ಕೊಟ್ಟಿದ್ದರೂ ಬಾಡಿಗೆ ನೀಡದೆ ಮಳಿಗೆ ಗಳ ಭಾಡಿಗೆ ದಾರರು ಖಾಲಿ ಮಾಡದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎನ್ನಲಾಗಿದೆ.
ನಗರಸಭೆಗೆ ಸೇರಿದ ಈ ಮಳಿಗೆಗಳು ತೀರಾ ಹಳೆಯದಾಗಿದ್ದು, ಅಪಾಯದ ಸ್ಥಿತಿ ತಲುಪಿದ್ದವು. ಹೀಗಾಗಿ ಮಳಿಗೆ ಬಾಡಿಗೆ ದಾರರಿಗೆ ಮುಂಚಿತವಾಗಿ ನೋಟಿಸ್ ನೀಡಿ, ಸ್ವಯಂಪ್ರೇರಣೆಯಿಂದ ತೆರವುಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಕೆಲವರು ಸ್ವಯಂಪ್ರೇರಿತವಾಗಿ ಮಳಿಗೆಗಳನ್ನು ತೆರವುಗೊಳಿಸಿಕೊಂಡಿದ್ದರು.ಎರಡು ಮಳಿಗೆ ಯವರು ನ್ಯಾಯಾಲಯದಿಂದ ತಡೆ ತಂದಿದ್ದಾರೆ
ಉಳಿದ ಮಳಿಗೆಗಳನ್ನು ಇಂದು ಜೆಸಿಬಿ ಹಾಗೂ ಇತರೆ ಯಂತ್ರಗಳನ್ನು ಬಳಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು .ಕಾರ್ಯಾಚರಣೆ ವೇಳೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ನಗರದ ಸೌಂದರ್ಯೀಕರಣ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ತೆರವುಗೊಳಿಸಿದ ಸ್ಥಳದಲ್ಲಿ ನೂತನ ಯೋಜನೆ ಕೈಗೆತ್ತಿಕೊಳ್ಳುವ ಕುರಿತು ಯೋಜನೆ ಸಿದ್ದವಾಗಿದೆ .