Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪುರಸಭೆಯಲ್ಲಿ ನುಲಿ ಚಂದಯ್ಯ ಜಯಂತಿ ಆಚರಣೆ ಸತ್ಯ ಶುದ್ಧ ಕಾಯಕ ಯೋಗಿ ನುಲಿ ಚಂದಯ್ಯನವರು : ಯಲ್ಲಣ್ಣಗೌಡ ಪಾಟೀಲ

ಮಹಾಲಿಂಗಪುರ : ಹನ್ನೆರಡನೆಯ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ಶರಣರ ಸುವರ್ಣ ಯುಗ ಶತ ಶತಮಾನಗಳಿಂದ ಉಳ್ಳವರ ಬಾಹುಗಳಲ್ಲಿ ಬಂಧಿಯಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಅವರಲ್ಲಿ ಸತ್ಯ ಶುದ್ಧ ಕಾಯಕ ಶರಣರಾಗಿದ್ದವರು ನುಲಿ ಚಂದಯ್ಯನವರು ಎಂದು ಪುರಸಭೆ ಅಧ್ಯಕ್ಷರಾದ ಯಲ್ಲನ್ನಗೌಡ ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಆಯೋಜಿಸಿದ ನುಲಿ ಚಂದಯ್ಯ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಉದ್ಘಾಟಸಿ ಮಾತನಾಡಿ ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಬಿದರಲ್ಲದೆ. ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯತ್ತಿ ಬದುಕುವಂತೆ ಮಾಡಿದರು.ವ್ಯಕ್ತಿಯ ಯೋಗ್ಯತೆ ಹುಟ್ಟಿನಿಂದ ನಿರ್ಧಾರವಾಗಬಾರದು ಅವನ ಗುಣಗಳಿಂದ ಮಾತ್ರ ನಿರ್ಧಾರಿತವಾಗಬೇಕು ಎಂದು ಶರಣರು ಬಯಸಿದರು. ಈ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕ್ರಾಂತಿಗೆ ನಿಸಂದೇಹವಾಗಿ ಬಸವಣ್ಣನೇ ನಾಯಕನಾದರೂ ಅವರೊಂದಿಗೆ ಕೈ ಜೋಡಿಸಿದ ಸಾವಿರಾರು ಶರಣ ಶರಣೆಯರು ತಮ್ಮ ಚಿಂತನೆ ಕಾಯಕಗಳ ಮೂಲಕ ಬಸವಣ್ಣನ ಸಮಗ್ರ ಕ್ರಾಂತಿಯಲ್ಲಿ ಸಹ ಭಾಗಿಗಳಾದರು. ಇಂತಹ ಶರಣರ ಪೈಕಿ ಸತ್ಯ ಶುದ್ಧ ಕಾಯಕಯೋಗಿ ನುಲಿ ಚಂದಯ್ಯನವರು ಒಬ್ಬರು.ಎಂದರು
ನಂತರ ಮಾತನಾಡಿದ ಪುರಸಭೆ ಮ್ಯಾನೇಜರ ಎಸ್.ಎನ್. ಪಾಟೀಲ ನುಲಿ ಚಂದಯ್ಯ ಕಾಯಕದ ಮೂಲಕವೇ ಆತ್ತ್ಮೋನ್ನತಿ ಕಂಡವರು ಅವರು ಒಮ್ಮೆ ಕೆರೆಯ ನೀರಲ್ಲಿ ಹುಲ್ಲು ಕೊಯುವಾಗ ಕೊರಳಲ್ಲಿದ್ದ ಇ?ಲಿಂಗ ಜಾರಿ ನೀರಲ್ಲಿ ಬಿದ್ದು ಹೋಯಿತು ಕಾಯಕದಲ್ಲಿ ಮೈಮರೆತ ಚಂದಯ್ಯ ಅದನ್ನು ಮೇಲೆತ್ತಿಕೊಳ್ಳಲಿಲ್ಲ. ಆದರೂ ಲಿಂಗವೇ ಅವರನ್ನು ಹಿಂಬಾಲಿಸಿತು ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಲಿಂಗದೇವ ಮತ್ತು ಚಂದಯ್ಯನವರ ನಡುವೆ ರಾಜಿ ಮಾಡಿಸಿದ ಮಡಿವಾಳ ಮಾಚಿದೇವರು, ಲಿಂಗವನ್ನು ಸ್ವೀಕರಿಸಲು ಸಲಹೆ ನೀಡುತ್ತಾರೆ.
ಆದರೆ ಚಂದಯ್ಯ ತಾನು ನುಲಿದ ಹಗ್ಗಗಳನ್ನು ಮಾರುವ ಕಾಯಕವನ್ನು ಲಿಂಗದೇವನಿಗೆ ವಹಿಸುತ್ತಾನೆ ಎಂದರು.
ಈ ಸಂದರ್ಭದಲ್ಲಿ ಗಣ್ಯರಾದ ವಿಜಯಕುಮಾರ ಪಾಟೀಲ, ಪಾಪಾ ನಾಲಬಂದ, ಹನಮಂತ ಬಜಂತ್ರಿ, ಚಿದಾನಂದ ಮಠಪತಿ, ಎಂ.ಎಂ ಮುಗಳಖೋಡ, ರವಿ ಬಜಂತ್ರಿ, ರಾಮಣ್ಣ ಹಟ್ಟಿ, ಬಾಬು ಬಜಂತ್ರಿ, ಮಾರುತಿ ದಳವಾಯಿ, ಮಹಾಂತೇಶ ಬಜಂತ್ರಿ, ಶಿವಾನಂದ ಚೌದರಿ, ಪ್ರಕಾಶ ಕಟಾಂವಿ, ಮಲೀಕ ಅಂಬಿ, ಸದಾಶಿವ ಕತ್ತಿ, ಮಹಾಲಿಂಗ ಬಜಂತ್ರಿ, ಪರಸು ಬಜಂತ್ರಿ, ರಾಮು ಮಾಂಗ,ಮಾನಿಂಗ ಮಾಂಗ, ಲಕ್ಷ್ಮೀ ಪರೀಟ ಸೇರಿದಂತೆ ಹಲವರು ಇದ್ದರು.
ಫೋಟೊ: ೧೧ ಎಂ.ಎಲ್.ಪಿ ೨
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ