Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯಿ ದುರ್ಗಾ ಮಾತೆ ಜನತೆಗೆ ಸಕಲವನ್ನೂ ಕರುಣಿಸಲಿ: ಸಹಜಾನಂದ ಶ್ರೀ

ಮಹಾಲಿಂಗಪುರ : ನಾಡಹಬ್ಬ ದಸರಾ ಉತ್ಸವದ ಸಂಭ್ರಮಕ್ಕೆ ನಗರ ಮಧುವನಗಿಂತಿಯಂತೆ ಸಿಂಗಾರಗೊಂಡು ಹಬ್ಬದ ಕಳೆ ಎದ್ದು ಕಾಣುತ್ತಿತ್ತು ಅದರಲ್ಲೂ ದುರ್ಗಾದೇವಿ ಮೆರವಣಿಗೆ ಚಾಲನೆ ನೀಡಿದ ಸಿದ್ದಾರೂಢ ಆಶ್ರಮದ ಪ ಪೂ ಶ್ರೀ ಸಹಜಾ ನಂದ ಸ್ವಾಮೀಜಿ ದೇವಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕರುಣಿಸಲಿ ಎಂದು ಹೇಳಿದರು.

ನಗರದಲ್ಲಿ ನಡೆಯುವ ದಸರಾ ಉತ್ಸವದ ಮೆರವಣಿಗೆ ಶ್ರೀ ಬನಶಂಕರಿದೇವಿ ದೇವಸ್ಥಾನ ಆಡಳಿತ ಮಂಡಳಿ ದೇವಾಂಗ ಹಟಗಾರ ಯುವಕ ಸಂಘ (ರಿ) ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ( ರಿ) ಮಹಾಲಿಂಗಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಹಯೋಗದಲ್ಲಿ ಶ್ರೀ ಸಿದ್ದಾರೂಢ ಆಶ್ರಮದಲ್ಲಿ ದೇವಿಯ ಬೆಳ್ಳಿ ಮೂರ್ತಿ ಮತ್ತು ನೂತನ ಶ್ರೀ ಚಕ್ರ ಮತ್ತು ನೂತನ ಕಳಸಗಳ ಪೂಜೆ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆ ಸಕಲ ಮಂಗಲ ವಾದ್ಯ ಮುತೈದೆಯರ ಆರತಿ, ಕುಂಭ ಮೇಳದೊಂದಿಗೆ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಸಾಗಿ ಬಂದು ದೇವಸ್ಥಾನ ತಲುಪಿದ ನಂತರ ಪೂಜೆ ಸಲ್ಲಿಸಿ ದೇವಿ ಮೂರ್ತಿ ವೇದಿಕೆ ಮೇಲೆ ಪ್ರತಿ?ಪನೆ ಮಾಡಲಾಯಿತು.

ಒಟ್ಟಿನಲ್ಲಿ ನೋಡುಗರಿಗೆ ಇದು ಮೈಸೂರ ದಸರಾ ತರ ಕಂಗೋಳಿಸುತ್ತಿತ್ತು.
ಈ ಬಾರಿ ದಸರಾ ಹತ್ತು ದಿನಗಳು ಬಂದಿದ್ದು ಒಂದು ವಿಶೇಷವಾಗಿದ್ದು ಮೈಂದರಗಿಯ ಮೃತ್ಯುಂಜಯ ಮಹಾಸ್ವಾಮಿಗಳು ದೇವಿ ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಅವರಿಗೆ ಹಣಮಂತ ಅಂಕದ ತಬಲಾ ಮತ್ತು ಶ್ರೀಕಾಂತ್ ನಾಯಿಕ ಹಾರ್ಮೋನಿಯಂ ಸಂಗೀತ ಸೇವೆ ನೀಡಲಿದ್ದಾರೆ.

ನೀಲಕಂಟೇಶ್ವರ ದೇವಸ್ಥಾನ : ನಗರದ ಕುರುಹಿನಶೆಟ್ಟಿ ಸಮುದಾಯ ನೀಲಕಂಟೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ಸಾಯಂಕಾಲ ೭ ಗಂಟೆಯಿಂದ ೯ ಗಂಟೆವರೆಗೆ ದೇವಿ ಪುರಾಣ ಮತ್ತು ಮಹಾಪ್ರಸಾದ ಜರುಗುವುದು ಭಕ್ತರು ದೇವಿ ಪುರಾಣ ಕೇಳಿ ದೇವಿ ಕೃಪೆಗೆ ಪಾತ್ರರಾಗಬೇಕು.

ಬಸವ ನಗರ : ನಗರ ಬಸವ ನಗರ ಬಡಾವಣೆಯಲ್ಲಿ ದೇವಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿ?ಪನೆ ಮಾಡಿದ್ದು ಅಲ್ಲೂ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರಗುವವು ಭಕ್ತಾದಿಗಳು ದೇವಿ ಕೃಪೆಗೆ ಪಾತ್ರರಾಗಬೇಕು.

ಲಕ್ಷ್ಮಿ ನಗರ : ಕೆಂಗೇರಿ ಮಡ್ಡಿಯಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ವಿಶೇಷ ಅಲಂಕೃತ ದೇವಿ ಮೂರ್ತಿ ಅತೀ ಸುಂದರವಾಗಿ ಕಂಗೊಳಿಸುತ್ತಿತ್ತು ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ವಿವಿಧ ಪೂಜೆಗಳು ಲಭ್ಯವಿದ್ದು ಭಕ್ತರು ಇದರ ಸದುಪಯೋಗ ಮಾಡಿಕೊಳ್ಳಬೇಕು.

ಸಿದ್ದು ಸವದಿ ಭೇಟಿ : ದೇವಿ ಮೂರ್ತಿಯ ಮೆರವಣಿಗೆ ಜವಳಿ ಬಜಾರ ತಲುಪಿದಾಗ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ದೇವಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಈ ಸಂಧರ್ಭದಲ್ಲಿ ನಗರದ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.ರವಿಗೌಡ ಪಾಟೀಲ, ಕೃಷಗೌಡ ಪಾಟೀಲ, ಮಲ್ಲಪ್ಪ ಭಾವಿಕಟ್ಟಿ,ಲಕ್ಕಪ್ಪ ಚಮಕೇರಿ, ಸಿದ್ದಪ್ಪ ನಿಂಬರಗಿ, ಶೇಖರ ಅಂಗಡಿ, ರವಿ ಕೌಜಲಗಿ, ಗುರುಪಾದ ಅಂಬಿ, ಶಿವಾನಂದ ಅಂಗಡಿ, ಗುರು ಬಾಡಗಿ,ಶಿವಲಿಂಗ ಟಿರ್ಕಿ, ರಮೆಶ ಭಾವಿಕಟ್ಟಿ, ಚಂದ್ರು ಗೊಂದಿ, ಮಹಾಲಿಂಗಪ್ಪ ಜಕ್ಕಣ್ಣವರ, ಮಹಾಲಿಂಗ ದಡೂತಿ, ಅಶೋಕ ಅಂಗಡಿ, ಮಂಜನಾಥ್ ಭಾವಿಕಟ್ಟಿ, ಬಿ ಡಿ ಸೋರಗಾಂವಿ ಪ್ರಕಾಶ್ ಬಾಡನವರ,ಬಿ.ಸಿ ಪೂಜಾರಿ ಸೇರಿದಂತೆ ನಗರದ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ