Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಧ್ಯಾತ್ಮದಿಂದ ಮಾನಸಿಕ ನೆಮ್ಮದಿ :ಪಂ. ಪ್ರಮೊದಾಚಾರ್ಯ

ಹಸಿರು ಕ್ರಾಂತಿ ವರದಿ, ಜಮಖಂಡಿ; ಆಧ್ಯಾತ್ಮದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಸುಖಮಯ ಜೀವನಕ್ಕೆ ಆಧ್ಯಾತ್ಮ ಅತಿಅವಶ್ಯವಾಗಿದೆ. ನಿತ್ಯಜೀವನದ ಜಂಜಾಟ ದಿಂದ ಹೊರಬಂದು ಕೆಲ ಸಮಯ ಆಧ್ಯಾತ್ಮದತ್ತ ಒಲವು ತೊರಬೇಕು ಎಂದು ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಸಂಚಾಲಕ ಪಂ.ಪ್ರಮೊದಾಚಾರ್ಯ ಪೂಜಾರ ತಿಳಿಸಿದರು. ಭಾನುವಾರ ನಗರದ ದ್ವಾರಕಾನಾಥ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಲಯವು ಹರಿದಾಸರ ಹಾಗೂ ಅವರ ಕೃತಿಗಳ ಪರಿಚಯ ಮತ್ತು ಸಮಜಾದಲ್ಲಿ ಧಾರ್ಮಿಕ ಮನೊಭಾವನೆ ತುಂಬುವ ಕೆಲಸ ಮಾಡುತ್ತಿದೆ. ದೇಶ ವಿದೇಶಗಳ ಅನೇಕ ಜನ ಆಸ್ತಿಕರು ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿರುವದು ಸಂತಸದ ಸಂಗತಿಯಾಗಿದೆ. ಯಾವುದೇ ಬೇಧವಿಲ್ಲದೇ ಸ್ತ್ರೀ, ಪುರುಷರು ದಾಸ ಸಾಹಿತ್ಯದ ಅಧ್ಯಯನ ಮಾಡಬಹುದು ಎಂದು ಹೇಳಿದರು. ಪ್ರತಿ ವರ್ಷ ಸುಮಾರು 30ರಿಂದ 40 ಸಾವಿರ ಜನ ಪರೀಕ್ಷೆಗೆ ಕುಳಿತು ದಾಸ ಸಾಹಿತ್ಯದ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ ಎಂದುತಿಳಿಸಿದರು.

ಪಂ. ರಂಗಾಚಾರ್ಯ ಜೋಷಿ ಮಾತನಾಡಿ, ಸನಾತನ ಧರ್ಮದ ಅತ್ಯಮೂಲ್ಯ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತ, ವೇದಗಳು, ಉಪನಿಷತ್ತುಗಳ ಸಾರವನ್ನು ಹರಿದಾಸರು ತಮ್ಮ ಕೃತಿಗಳಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಾರೆ. ಅವುಗಳ ಅಧ್ಯಯನ, ಪಾರಾಯಣ ದಿಂದ ಧಾರ್ಮಿಕತೆ ಬೆಳೆದು, ನೆಮ್ಮದಿಗೂ ಕಾರಣವಾಗುತ್ತದೆ ಅದಕ್ಕಾಗಿಯೇ ಸೌರಭ ದಾಸ ಸಾಹಿತ್ಯವಿದ್ಯಾಲಯವನ್ನು ಉತ್ತರಾಧಿಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು ಸ್ಥಾಪಿಸಿದ್ದಾರೆ, ಕಳೆದ 9 ವರ್ಷಗಳಿಂದ ಧರ್ಮಜಾಗೃತಿಯ ಕೆಲಸ ನಡೆದಿದೆ ಎಂದು ಹೇಳಿದರು. ಉಡುಪಿಯ ಅಷ್ಟಮಠಾಧೀಶರು ಸೇರಿದಂತೆ ಉಳಿದೆಲ್ಲ ಮಾಧ್ವ ಮಠದ ಯತಿಗಳು ವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಉತ್ತೇಜನ ಪ್ರೊತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು. ಸುಜಯಿಂದ್ರಾಚಾರ್ಯ ಮನಗೂಳಿ ಮಾತನಾಡಿದರು. ಸನ್ಮಾನ- ಅಲಕನಂದಾ ಗೋ.ಹುಲ್ಯಾಲಕರ, ವಾದಿರಾಜ ಕುಲಕರ್ಣಿ,ಶಕುತಾಯಿ ಗಲಗಲಿ, ಶ್ರೀದೇವಿ ಕುಲಕರ್ಣಿ, ರಮಾವೈದ್ಯ ಅವರನ್ನು ಸನ್ಮಾನಿಸಲಾಯಿತು. ಸೌಮ್ಯಾ ನಾಮಣ್ಣವರ, ಲಕ್ಷ್ಮೀ ಕುಲಕರ್ಣಿ,ಅವರು ಗಮಕ ಕಾವ್ಯವಾಚನ ಮಾಡಿದರು. ಹುನ್ನೂರಿನ ಬಾಲಕಿಯರು ನೃತ್ಯ ಪ್ರದರ್ಶನ ಮಾಡಿದರು.

ಕಿರು ರೂಪಕ- ಪ್ರಸನ್ನವೆಂಕಟದಾಸರ ಕುರಿತು ಕಿರು ರೂಪಕವನ್ನು ಪ್ರದರ್ಶಿಸಲಾಯಿತು. ಮಂಗಲಾ ಕೊಡಗಲಿ ವೆಂಕಟದಾಸರಾಗಿ, ಅಣ್ಣನ ಪಾತ್ರದಲ್ಲಿ ಅಶ್ವಿನಿ ಟೊಣಪಿ, ಅತ್ತಿಗೆ ಪಾತ್ರದಲ್ಲಿ ರಮಾವೈದ್ಯ, ವೆಂಕಟೇಶನ ಪಾತ್ರದಲ್ಲಿ ಪ್ರಜ್ಞಾ ಹುಲ್ಯಾಳಕರ, ಕಾರಕೂನನ ಪಾತ್ರದಲ್ಲಿ ಸ್ನೇಹಾ ಕುಲಕರ್ಣಿ, ಅಭಿನಯಿಸಿದರು. ಅಕ್ಷರಾ ಕೊಡಗಲಿ ಹಾಗೂ ವಿದ್ಯಾಲಯದ ಸದಸ್ಯರು ಯಾತ್ರಿಕರ ಪಾತ್ರದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಅರ್ಚಕ ಅಚ್ಚುತರಾವ ಬಿಚಗತ್ತಿ, ರಾಜೇಂದ್ರ ಹುಲ್ಯಾಳಕರ ವೇದಿಕೆಯಲ್ಲಿದ್ದರು. ಪಲ್ಲವಿ ಕುಲಕರ್ಣಿ ಸ್ವಾಗತಕೊರಿದರು. ಕವಿತಾ ಕಪಿಲೇಶ್ವರ ಕಾರ್ಯಕ್ರಮ ನಿರೂಪಿಸಿದರು. ರಾಜಶ್ರೀ ಹುಲ್ಯಾಳಕರ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ