ಬೀಳಗಿ,ಜೂ,೨೬ : ಬೀಳಗಿ ತಾಲೂಕಿನ ಶ್ರೀ ಬನಶಂಕರಿದೇವಿ ವಿದ್ಯಾ ಸಂಸ್ಥೆ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ಬಿ.ಎನ್.ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಅನಗವಾಡಿಯಲ್ಲಿ "ಪ್ರಜೆಗಳೇ ಪ್ರಭುಗಳಾಗುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೬-೨೭ನೇ ಸಾಲಿನ ಈ ಶಾಲಾ ಸಂಸತ್ತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಪದಕ ಪ್ರದಾನ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಖಜಾಂಚಿಯವರಾದ ವಿಕ್ರಮಕುಮಾರ ಖೋತರವರು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ಸುರೇಶ ಹವಾಲ್ದಾರವರು ವಿದ್ಯಾರ್ಥಿಗಳಿಗೆ ಶಾಲೆಯ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಸರ್ವಾಂಗೀಣ ಪ್ರಗತಿಯ ಕಡೆಗೆ ಗಮನ ಕೊಡುತ್ತಾ ತಮ್ಮ ಕೀರ್ತಿಯನ್ನು ಎಲ್ಲೆಡೆ ಪಸರಿಸಬೇಕೆಂದು ಮತ್ತು ಶಾಲಾ ಸಂಸತ್ತಿನ ಕಾರ್ಯದಕ್ಷತೆಯ ಮಹತ್ವವನ್ನು ತಿಳಿಸಿ, ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯವೆಂದು ವಿದ್ಯಾರ್ಥಿಗಳು ತಮ್ಮ ಬದುಕನ್ನು ಸಾರ್ಥಕಗೊಳಿಸಬೇಕೆಂದು ಶುಭ ಹಾರೈಸಿ, ಅಭಿನಂದನೆ ಕೋರಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಉಪನ್ಯಾಸಕರಾದ ಅನಿಲ ಕೋರಿಯವರು ಮಾತನಾಡುತ್ತಾ ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ಶಾಲೆಯ ನಿಯಮಗಳಿಗೆ ಬದ್ಧರಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕೆಂದು ಹೇಳಿದರು.
ಶಾಲೆಯ ಶಾಲಾ ನಾಯಕ ವಿದ್ಯಾರ್ಥಿ ಅಭ್ಯರ್ಥಿ ಶಿವಂ ಉಡೋಶಿ, ಉಪನಾಯಕ ವಿದ್ಯಾರ್ಥಿ ಅಭ್ಯರ್ಥಿ ವೈಭವ ಹಂಚಾಟೆ, ಸಾಂಸ್ಕೃತಿಕ ವಿಭಾಗಕ್ಕೆ ನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಕಲ್ಪಿತಾ ದೇಸಾಯಿ, ಉಪನಾಯಕ ವಿದ್ಯಾರ್ಥಿ ಅಭ್ಯರ್ಥಿ ಮನೋಜ ಮಾಳಗೊಂಡ, ಕ್ರೀಡಾ ವಿಭಾಗಕ್ಕೆ ನಾಯಕ ವಿದ್ಯಾರ್ಥಿ ಅಭ್ಯರ್ಥಿ ದಿಕ್ಷಿತ ರಾಠೋಡ, ಉಪನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಖುಷಿ ತೇಲಿ, ಪ್ರಾರ್ಥನಾ ಸಭೆ ವಿಭಾಗಕ್ಕೆ ನಾಯಕ ವಿದ್ಯಾರ್ಥಿ ಅಭ್ಯರ್ಥಿ ಮನೋಜ ಕೊಪ್ಪದ, ಉಪನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಸೌಮ್ಯ ಗಡದಾನ ಶಾಲೆಯ ಗುಪ್ತಾ ತಂಡದ ನಾಯಕ ಉಲ್ಲಾಸರೆಡ್ಡಿ ಕಣೆಕಲ್, ಉಪನಾಯಕ ವಿಶ್ವನಾಥ ಪತ್ತಾರ, ಮೌರ್ಯ ತಂಡದ ನಾಯಕ ಆಕಾಶ ವಾಲ್ಮೀಕಿ, ಉಪನಾಯಕಿ ಪ್ರತೀಕ್ಷಾ ಹೆರಕಲ್, ಕದಂಬ ತಂಡದ ನಾಯಕಿ ಸಾಕ್ಷಿ ಯಳಗಿ ಉಪನಾಯಕಿ ಸೃಷ್ಠಿ ಬೋರಡ್ಡಿ, ಚಾಲುಕ್ಯ ತಂಡದ ನಾಯಕ ಸಮರ್ಥ ನಾನಪ್ಪಗೋಳ, ಉಪನಾಯಕಿ ಆರಾಧ್ಯ ನಾಯಕ, ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಂದ ಶಾಲಾ ಸಂಸತ್ತಿನ ರಚನೆಯನ್ನು ಮಾಡಿ, ಶಾಲು ಹೊದಿಸಿ, ಪದಕ ನೀಡಿ, ಹಾರ್ದಿಕ ಅಭಿನಂದನೆಗಳನ್ನು ಕೋರಲಾಯಿತು.
ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಶಾಲೆಯ ಹಿರಿಯ ವಿಭಾಗದ ಸಂಯೋಜಕಿಯರಾದ ರಶ್ಮೀ ರಾವಳ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿನಿ ಸಮೃದ್ಧಿ ಹಂಚಿನಾಳ ಚುನಾವಣೆಯ ವರದಿಯನ್ನು ಮಂಡಿಸಿದಳು. ವಿದ್ಯಾರ್ಥಿನಿ ಐಶ್ವರ್ಯ ತೇವರ ಇವಳಿಂದ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿಲಾಯಿತು. ವರುಣ ದಳವಾಯಿ ಸ್ವಾಗತ, ನೇಹಾ ಮೋಕಾಶಿ ವಂದನಾರ್ಪಣೆ, ಕರುಣಾ ಗೌಡರ, ಮತ್ತು ಐಶ್ವರ್ಯ ಕಂದಗಲ್ ನಿರೂಪಣೆಯನ್ನು ನಿರ್ವಹಿಸಿದರು. ಶಾಲೆ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು.