Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 10 ಹೇಮರಡ್ಡಿ ಮಲ್ಲಮ್ಮ ಜಯಂತಿ ವೀರಶೈವ ಲಿಂಗಾಯತ ರಡ್ಡಿ ಸಂಘ ಪುನರ್ಚನೆ






ಬಳ್ಳಾರಿ, ಏ.16: ಬರುವ ಮೇ 10 ರಂದು ನಗರದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಭಕ್ತಿಭಾವ, ಸಡಗರ ಸಂಭ್ರಮದಿಂದ ಆಚರಿಸಲು ವೀರಶೈವ ಲಿಂಗಾಯತ ರಡ್ಡಿ ಸಂಘ ನಿರ್ಧರಿಸಿದೆ.

ನಗರದ ಬಸವ ಭವನದಲ್ಲಿ ನಿನ್ನೆ ಸಂಜೆ ಸಭೆ ಸೇರಿದ ಸಂಘದ ಸದಸ್ಯರು, ಮುಖಂಡರು, ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಕಳೆದ ವರ್ಷದಂತೆ ಜಿಲ್ಲಾಡಳಿತದ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ಚರ್ಚಿಸಿದರು.

ಈ ಕುರಿತಂತೆ ಜಿಲ್ಲಾಡಳಿತ ಕರೆಯುವ ಪೂರ್ವ ಸಿದ್ದತಾ ಸಭೆಯಲ್ಲಿ. ಮಲ್ಲಮ್ಮ ಜಯಂತಿ ಸಮಾರಂಭವನ್ನು ನಗರದ ಬಸವ ಭವದಲ್ಲಿ ಅಂದು ಸಂಜೆ ಹಮ್ಮಿಕೊಳ್ಳೋಣ. ಅದಕ್ಕೂ ಮುನ್ನ ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ದುರ್ಗಮ್ಮ ದೇವಸ್ಥಾನದಿಂದ ಬಸವ ಭವನದ ವರೆಗೆ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಹಳ್ಳಿಗಳಿಗೆ ತೆರಳಿ ರಡ್ಡಿ ಸಮುದಾಯದ ಜನತೆ ಜಯಂತಿ ಕಾರ್ಯಕ್ರಮಕ್ಕೆ ಬರುವಂತೆ ಕರಪತ್ರ ನೀಡಿ ಆಹ್ವಾನಿಸಲು. ಸಮಾರಂಭದ ನಂತರ ಪ್ರಸಾದ ವ್ಯವಸ್ಥೆ ಮಾಡಲು ತೀರ್ಮಾನಿಸಿತು.

ಉಳಿಸಂತೆ ಉಪನ್ಯಾಸ, ಸನ್ಮಾನ ಮೊದಲಾದವುಗಳ ಬಗ್ಗೆ ಜಿಲ್ಲಾಡಳಿತ ಕರೆಯುವ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಣಯಿಸಲಾಯ್ತು.

ಇದೇ ವೇಳೆ ವೀರಶೈವ ಲಿಂಗಾಯತ ರಡ್ಡಿ ಸಂಘವನ್ನು ಪುನರ್ವರಚಿಸಲು ನಿರ್ಧರಿಸಿ. ಹಳಬರು ಮತ್ತು ಹೊಸಬರನ್ನು ಒಳಗೊಂಡ ಈ ಮುಂದಿನ. 21 ಹೆಸರುಗಳನ್ನು ಅಂತಿಮಗೊಳಿಸಲಾಯ್ತು. ಡಾ ಎಸ್.ಜೆ.ವಿ.ಮಹಿಪಾಲ್, ಎನ್.ಅಯ್ಯಪ್ಪ, ಜೆ.ಎಸ್.ನೇಪಾಕ್ಷಪ್ಪ, ರವಿರಾಜಶೇಖರ ರಡ್ಡಿ, ಜೋಳದರಾಶಿ ಬಸವರಾಜ್, ಟಿ.ವಿರುಪಾಕ್ಷಗೌಡ, ಸಂಗನಕಲ್ಲು ಯುಧಿಷ್ಟರ, ಬಿ.ರವೀಂದ್ರನಾಥ, ಕೆರೆನಳ್ಳಿ ಚಂದ್ರಶೇಖರ, ಅಭಿನಂದನ್ ಪಾಟೀಲ್, ಎನ್ ಚಂದ್ರಶೇಖರ ಯರಂಗಳಿ, ಡಾ.ಭಾಗ್ಯಲಕ್ಷ್ಮಿ, ಟಿ.ಎಂ.ಜಡೇಶ, ಮಿಂಚೇರಿ ನರೇಂದ್ರಬಾಬು, ಸಂಜೀವರಾಯನಕೋಟೆ ಸೋಮನಗೌಡ, ಕೆ.ನಂದೀಶ್ ಕುಮಾರ್, ಬಣಾಪುರ ನಾಗರಾಜ, ಜೆ.ಬಿ.ಸುಮಂಗಳ, ಗೋನಾಳ್ ಮುರಹರಗೌಡ, ಹೆಚ್.ಮಹಾಬಲೇಶ್ವರಗೌಡ, ಹೆಚ್.ವೀರಭದ್ರಗೌಡ ಇವರನ್ನು ಅಂತಿಮಗೊಳಿಸಿದ್ದು. ಇವರಲ್ಲಿ ಪದಾಧಿಕಾರಿಗಳನ್ನು ಕೆಲ ದಿನಗಳಲ್ಲಿ ಆಯ್ಕೆ ಮಾಡಲು ಸೂಚಿಸಿದೆ.

ಇನ್ನು ಮಹಿಳಾ, ಘಟಕ, ಬಳ್ಳಾರಿ ತಾಲೂಕು ಘಟಕ, ಯುವ ಘಟಕಗಳನ್ನು ರಚಿಸುವ ಬಗ್ಗೆಯೂ ಚರ್ಚಿಸಲಾಯ್ತು. ಸಭೆಯಲ್ಲಿ ರಡ್ಡಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.







Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*