Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಣಿತ ಕಲಿಕಾ ಆಂದೋಲನ : ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ

ಬೈಲಹೊಂಗಲ :  ತಾಲೂಕಿನ ಬೆಳವಡಿಯಲ್ಲಿ ಗಣಿತ ಕಲಿಕಾ ಆಂದೋಲನದ ಗ್ರಾಮ ಪಂಚಾಯಿತಿ ಮಟ್ಟದ ತಂಡದ ನಾಯಕರು ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಜರುಗಿತು.

ಬೈಲಹೊಂಗಲ ತಾಲೂಕಿನ ಬೆಳವಡಿಯ ಸಿ. ಆರ್. ಸಿ ಕೇಂದ್ರದಲ್ಲಿ ಬೆಳವಡಿ ಮತ್ತು ಬುಡರಕಟ್ಟಿ ಕ್ಲಸ್ಟರ್ ನ ಗ್ರಾಮ ಪಂಚಾಯಿತಿ ತಂಡದ ನಾಯಕರು ಮತ್ತು ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. ಈ ವೇಳೆ ಬೆಳವಡಿಯ ಸರ್ಕಾರಿ ಶಾಲೆಯ ಎಸ್. ಡಿ .ಎಂ.ಸಿ ಅಧ್ಯಕ್ಷರು ಉದ್ಘಾಟನೆ ಮಾಡಿ ಗಣಿತ ಕಲಿಕಾ ಆಂದೋಲನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಜಿಲ್ಲಾ ಸಂಯೋಜಕರಾದ ಹನುಮಂತ ಮಸಾಲಿ ಅವರು ಗಣಿತ ಕಲಿಕಾ ಆಂದೋಲನದ ಯೋಜನೆಯ ಉದ್ದೇಶದ ಕುರಿತು ತಂಡದ ನಾಯಕರಿಗೆ ಹಾಗೂ ಸ್ವಯಂ ಸೇವಕರಿಗೆ ಸವಿವರವಾಗಿ ಮಾಹಿತಿ ನೀಡಿ ತಮ್ಮ ಮನೆ, ಶಾಲೆ ,ಗ್ರಾಮದ ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಜವಾಬ್ದಾರಿಯ ಕಾಳಿಜಿಯ ಕುರಿತು ಪ್ರೇರೇಪಿಸಿ ಮಾತನಾಡಿದರು .ನಂತರ ಜಿಲ್ಲಾ ಸಂಯೋಜಕರಾದ ಶ್ರೀ ಸಂಗಮೇಶ ಬ್ಯಾಡಗಿ ಅವರು ತಂಡದ ನಾಯಕರು ಹಾಗೂ ಸ್ವಯಂಸೇವಕರ ಜವಾಬ್ದಾರಿ ಕುರಿತಾದ ಮಾರ್ಗಸೂಚಿ ನೀಡಿ ಗಣಿತ ಸ್ಪರ್ಧೆಯ ಕುರಿತು ಮತ್ತು ಶಾಲೆಗೆ ಸಹಕಾರ ನೀಡುವ ಕುರಿತು ವಿವರಣೆ ನೀಡಿದರು.

ತದನಂತರ ಕ್ಲಸ್ಟರ್ ಸಂಯೋಜಕರಾದ ಗಿರಿಗೌಡ್ ಪಾಟೀಲ್ ಮತ್ತು ವಾಸುದೇವ್ ಅವರು GKA 1.0 ಮತ್ತು 2.0 ಗಣಿತ ಕಿಟ್ ನ ಪರಿಚಯ ಮತ್ತು ಬಳಕೆಯ ಬಗ್ಗೆ ಪರಿಚಯ ಮಾಡಿದರು. ಅಂತಿಮದಲ್ಲಿ ಸ್ವಯಂಸೇವಕರು ಮತ್ತು ತಂಡದ ನಾಯಕರು ಗ್ರಾಮದ ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಅನುಭವವನ್ನು ಹಂಚಿಕೊಂಡರು . ಈ ತರಬೇತಿಯಲ್ಲಿ ಬೆಳವಡಿ ಮತ್ತು ಬುಡರಕಟ್ಟಿ ಕ್ಲಸ್ಟರ್ ನಿಂದ 43 ಜನ ತಂಡದ ನಾಯಕರು ಮತ್ತು ಸ್ವಯಂಸೇವಕರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಬೆಳವಡಿ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ಬಸಪ್ಪ ಪೂಜೇರಿ ,ಶೆಟ್ಟೆಪ್ಪ ಸತ್ತಿಗೇರಿ, ಸುರೇಶ ಹಡಪದ, ಸಂಗಯ್ಯ ಚಚಡಿ ಹಾಗೂ
ಬುಡರಕಟ್ಟಿ ಮತ್ತು ಬೆಳವಡಿ ಕ್ಲಸ್ಟರ್ ನ ತಂಡದ ನಾಯಕರು ಹಾಗೂ ಸ್ವಯಂಸೇವಕರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ