Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಅಭಿವೃದ್ಧಿಗೆ ಮಲ್ಲಾಪೂರ ಪಿಕೆಪಿಎಸ್ ಸಹಕಾರಿ: ಮುತ್ತಣ್ಣ ಹತ್ತರವಾಟ 

ಘಟಪ್ರಭಾ: ಕೆಲವು ವರ್ಷಗಳ  ಹಿಂದೆ ನಮ್ಮ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘ ದಿ. ಭೀಮಪ್ಪ ಹತ್ತರವಾಟ ಅವರ ಆಡಳಿತ ವೈಖರಿ  ಹಾಗೂ ಆಡಳಿತ ಮಂಡಳಿ ಸಹಕಾರ ಸಿಬ್ಬಂದಿಯ ಉನ್ನತ ಮಟ್ಟದ ಸೇವೆಯಿಂದ  ರೈತರ ವಡನಾಡಿ ಆಗಿ ನಮ್ಮ ಸಂಘ ಬೆಳೆದು ಬಂದಿದು, ಮುಂದೆಯೂ ರೈತರ ಸೇವೆಗೆ ನಮ್ಮ ಸಹಕಾರಿ ಸಂಘ ಸದಾ ಕಾರ್ಯನಿರತವಾಗಿ ಇರತ್ತೆ ಎಂದು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮಲ್ಲಾಪೂರ ಪಿ ಜಿ  ಇದರ ಅಧ್ಯಕ್ಷರಾದ ಮುತ್ತಣ್ಣ ಹತ್ತರವಾಟ ಹೇಳಿದರು.


   ಅವರು ಶನಿವಾರದಂದು  ಸಂಘದ 2024-25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.    ಕೆ ಆರ್  ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ ಮಾತನಾಡಿ  ಇಂದು ನಮ್ಮ ರೈತರಿಗೆ ಸಹಕಾರಿ ಎಲ್ಲ ಸೇವೆಗಳನ್ನು ನೀಡುತ್ತಿದ್ದು ಅದರ ಸದುಪಯೋಗ ಪಡೆಯಬೇಕೆಂದರು.


    ಸಭೆಯಲ್ಲಿ ಮಲ್ಲಾಪೂರ ಅರ್ಬನ್ ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಮಾತನಾಡಿ ಇಂದು ಈ ಮಟ್ಟಕ್ಕೆ ಸಹಕಾರಿ ಸಂಘ ಬೆಳೆದಿದ್ದು ನಮ್ಮ ಹೆಮ್ಮೆ ಎಂದರು. ಸಂಘದ  ಉಪಾಧ್ಯಕ್ಷ ಮಲ್ಲಪ್ಪ ಕಮತ, ಸದಸ್ಯ ಶಿವರಾಜ ಬಡಕುಂದ್ರಿ,ಕುಮಾರ ಹುಕ್ಕೇರಿ ಅನೇಕರು ಮಾತನಾಡಿದರು.


   ಸಂಘದ ಕಾರ್ಯನಿರ್ವಾಹಕ ಈರಪ್ಪ ಕಮತ ವರದಿ ವಾಚನ ಮಾಡಿ ಮಾತನಾಡಿ 1125 ಸದಸ್ಯರನ್ನು ಹೊಂದಿ, 7 ಕೋಟಿ ರೂ ಗಳ ಸಾಲ ನೀಡಿ, 11 ಕೋಟಿ ರೂ ಗಳ ದುಡಿಯುವ ಬಂಡವಾಳ ಹೊಂದಿ ಪ್ರಸಕ್ತ 2024-25 ನೇ ಸಾಲಿಗೆ 22. 2  ಲಕ್ಷ ರೂ. ಲಾಭ ಪಡೆದಿದೆ ಎಂದರು.


    ಈ ಸಭೆಯಲ್ಲಿ ಘಟಪ್ರಭಾ ಪಟ್ಟಣದ ಮುಖಂಡರಾದ ಗಂಗಾಧರ ಬಡಕುಂದ್ರಿ, ಸಿ ಎ ಕಾಡದವರ,ಅರವಿಂದ ಬಡಕುಂದ್ರಿ, ಸುಭಾಷ್ ಕಾಡದವರ, ಕೆಂಪಣ್ಣ ಕಾಡದವರ, ಮಲ್ಲಪ್ಪ ಬನ್ನನವರ,ವಿವೇಕಾನಂದ ಹುದ್ದಾರ,  ಸಂಘದ ಸದಸ್ಯರಾದ ಪರಮೇಶ್ವರ್ ತುಕ್ಕಾನಟ್ಟಿ, ಯಲ್ಲಪ್ಪ ಮಾಳ್ಯಗೋಳ, ಶ್ರೀಮತಿ ಗೌರವ್ವ  ಪಾಟೀಲ, ಸಂಗೀತಾ ಬಾಗೇವಾಡಿ, ಬಸಪ್ಪ ಹರಿಜನ, ಸುರೇಶ ಮುಸಲ್ಮಾರಿ, ಸುನೀತಾ ಕರೋಶಿ, ಎಸ್ ಎ ಪಾಟೀಲ  ಸೇರಿದಂತೆ ಸಂಘದ ಸದಸ್ಯರು, ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ಮುಖಂಡರು ಭಾಗವಹಿಸಿದ್ದರು.ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಅತೀ ಹೆಚ್ಚು ಅಂಕ ಪಡೆದ ರೈತರ ಮಕ್ಕಳನ್ನು ಸನ್ಮಾನಿಸಲಾಯಿತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ