Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನತಾ ಬಜಾರ್ ನೂತನ ಅಧ್ಯಕ್ಷೆಯಾಗಿ ಮೈತ್ರಿ ಪಲ್ಲೇದ ಅವಿರೋಧ ಆಯ್ಕೆ

 

ಬಳ್ಳಾರಿ, ಏ.೩೦.. ಬಳ್ಳಾರಿ ಜನತಾ ಬಜಾರ್ (ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ)ದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಮೈತ್ರಿ ಪಲ್ಲೇದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕೆ.ಎ. ವೇಮಣ್ಣ ಅವರ ರಾಜೀನಾಮೆಯಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಮೈತ್ರಿ ಪಲ್ಲೇದ ಅವರ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ಅವರ ನಾಮಪತ್ರಕ್ಕೆ ಜಿ. ನೀಲಕಂಠಪ್ಪ ಸೂಚಕರಾಗಿ ಹಾಗೂ ಶ್ರೀಮತಿ ನಸೀಮಾಬೇಗಂ ಅನುಮೋದಕರಾಗಿ ಸಹಿ ಹಾಕಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕೆ.ಎ. ವೇಮಣ್ಣ, ಉಪಾಧ್ಯಕ್ಷ ಎಸ್. ಮುಜಾಹಿದ್ ಅಲಿ, ವೆಂಕಟೇಶ್ ಹೆಗಡೆ, ನಸೀಮಾಬೇಗಂ, ಪಿ. ದಾನರೆಡ್ಡಿ, ವಿ. ಪ್ರದೀಪರೆಡ್ಡಿ, ಕೆ. ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್, ಕೆ.ಎಂ. ಕೇದಾರನಾಥ, ಜಿ. ನೀಲಕಂಠಪ್ಪ, ಕೋರಿ ಚನ್ನಬಸಪ್ಪ (ಪುಟ್ಟ), ಎಂ. ನರೇಶ್ ಕುಮಾರ್, ಕೆ. ವೆಂಕಟಸ್ವಾಮಿ, ಕಾತ್ಯಾಯಿನಿ ಮರಿದೇವಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪರಿಣಿತ ಸದಸ್ಯರಾದ ಎಚ್.ಎಂ. ಮಹೇಂದ್ರ ಕುಮಾರ್, ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ, ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಬಾಬು, ಜಾನೆಕುಂಟೆ ಬಸವರಾಜ್ (ಕುಮ್ಮಿ), ಪಲ್ಲೇದ ಪ್ರಭುಲಿಂಗ, ಕೋರಿ ವಿರುಪಾಕ್ಷಪ್ಪ, ಗಂಗಾವತಿ ವೀರೇಶ್, ಮುಂಡಾಸದ ಮಲ್ಲಿಕಾರ್ಜುನ, ಬಾಡದ ಬದರಿನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚುನಾವಣಾ ಅಧಿಕಾರಿಯಾಗಿ ಜನತಾ ಬಜಾರ್ ಪ್ರಧಾನ ವ್ಯವಸ್ಥಾಪಕರಾದ ರಾಮು ಅವರು ಕಾರ್ಯನಿರ್ವಹಿಸಿದರು.
ಗಮನಾರ್ಹವಾಗಿ, ಮೈತ್ರಿ ಪಲ್ಲೇದ ಅವರು ಜನತಾ ಬಜಾರ್ ಇತಿಹಾಸದಲ್ಲಿ ಎರಡನೇ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್‌ ಮ್ಯಾನೇಜ್‌ಮೆಂಟ್ ಸ್ವಾಯತ್ತ ವಿಶ್ವವಿದ್ಯಾಲಯ ಆರಂಭಿಸಲು ನಿರ್ಧಾರಹಾಲುಮತದ ಗುರು ರೇವಣಸಿದ್ಧರು ಚಾರಿತ್ರಿಕ ಶರಣರು : ತೋಂಟದ ಸಿದ್ಧರಾಮ ಮಹಾಸ್ವಾಮಿಗಳು*ನಾರಿ ಶಕ್ತಿ ವಂದನಾ ಅಧಿನಿಯಮ ! ಕಾಂಗ್ರೆಸ್ ಹಾಗು ಅದರ ಮಿತ್ರ ಪಕ್ಷಗಳ ವಿರುದ್ದ  ಪ್ರತಿಭಟನೆಯ ಪೂರ್ವಭಾವಿ ಸಭೆ*ಶ್ರೀ ವೆಂಕಟೇಶ್ ಬಡಿಗೇರವರ ಸಂಪಾದಿತ ಕವನ ಸಂಕಲನ "ಕಲ್ಲುತೇರಿನ ಕುಸುರಿ" ದ್ವಿತೀಯ ಮುದ್ರಣ ಲೋಕಾರ್ಪಣೆವಿಜಯಪುರ ಜಿಲ್ಲೆಯ ೧೬೩೬೭.೮೩ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆ ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತುಮಕ್ಕಳು ಮಾದಕ ವ್ಯಸನಕ್ಕೆ ತುತ್ತಗದಂತೆ ಜಾಗೃತಿ ವಹಿಸಿ: ಸಿಂಧೂ ಅಂಗಡಿಬಳ್ಳಾರಿ ಲಿಡ್‌ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕುಡಿತಿನಿ ರೈತರ ಬಂಧನ ಖಂಡನೆ : ಬೇಡಿಕೆ ಈಡೇರಿಸಲು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಗ್ರಹಮೇ 15ರಂದು ‘ಶಿಖಂಡಿ’ ಕನ್ನಡ ಚಿತ್ರ ರಾಜ್ಯಾದ್ಯಂತ ಬಿಡುಗಡೆಜನತಾ ಬಜಾರ್ ನೂತನ ಅಧ್ಯಕ್ಷೆಯಾಗಿ ಮೈತ್ರಿ ಪಲ್ಲೇದ ಅವಿರೋಧ ಆಯ್ಕೆ