Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗ ಸೃಷ್ಟಿಯ ಕಲಾವಿದರಿಂದ "ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ

ಬೆಳಗಾವಿ: ಇದೇ ದಿನಾಂಕ 10-5-2025 ರಂದು ಬೆಳಗಾವಿಯಲ್ಲಿ ಜರುಗಿದ "ಮಹಾಸಾಧ್ವಿ ಹೇಮರಡ್ದಿ ಮಲ್ಲಮ್ಮ ಜಯಂತ್ಯುತ್ಸವ" ಅಂಗವಾಗಿ ನಗರದ " ರಂಗ ಸೃಷ್ಟಿ" ಕಲಾವಿದರಿಂದ ಕನ್ನಡ ಭವನದಲ್ಲಿ " ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ " ನಾಟಕ ಪ್ರದರ್ಶನಗೊಂಡಿತು.


ಸುಮಾರು 600 ವಷ೯ಗಳ ಹಿಂದೆ ಕನಾ೯ಟಕ- ಆಂಧ್ರಪ್ರದೇಶ ಗಡಿಯಲ್ಲಿ ಆಗಿಹೋದ ಕಥೆಯನ್ನಾಧರಿಸಿ ನಲವಡಿ ನೀಲಕಂಠ ಶಾಸ್ತ್ರೀಯವರು ಬರೆದ ನಾಟಕದ ವಿಷಯವನ್ನು ಮೂಲವಾಗಿಟ್ಟು ಮಲ್ಲಮ್ಮನ ಮೈದುನ ಮಹಾಯೋಗಿ ವೇಮನರ ಚರಿತ್ರೆಯನ್ನು ಸಹ ಸಂಕ್ಷಿಪ್ತವಾಗಿ ಅಳವಡಿಸಿ ರಚಿಸಿದ ಈ ನಾಟಕದ ಲೇಖಕರು ಪ್ರೊ.ರಾಮಕೃಷ್ಣ ಮರಾಠೆಯವರು.ನಿರ್ದೇಶಕರು ಶ್ರೀ ಶಿರೀಶ ಜೋಶಿಯವರು ಹಾಗೂ ಪ್ರಾಯೋಜಕರು ಶ್ರೀ ರಮೇಶ ಜಂಗಲ.


ಸಹಕಾರ: ರಡ್ಡಿ ಸಂಘ ಮತ್ತು ಕನ್ನಡ ಭವನ. ಪಾತ್ರವಹಿಸಿದವರು:ಶಾರದಾ ಭೋಜ,ಶಾಂತಾ ಆಚಾರ್ಯ,ಶ್ರದ್ಧಾ ಪಾಟೀಲ, ಶರಣಗೌಡ ಪಾಟೀಲ, ವಿಶ್ವನಾಥ ದೇಸಾಯಿ,ಶರಣಯ್ಯ ಮಠಪತಿ,ಎ ಎಂ ಜಯಶ್ರೀ, ಜಯಶ್ರೀ ಕ್ಷೀರಸಾಗರ,ಶೋಭಾ ಬನಶಂಕರಿ,ರಮೇಶ ಜಂಗಲ, ಶಾಂತಾ ಜಂಗಲ, ಶೈಲಜಾ ಭಿಂಗೆ,ಲತಾ ಅರಕೇರಿ, ಪಿ ಜಿ ಕೆಂಪಣ್ಣವರ,ಜ್ಯೋತಿ ಬದಾಮಿ,ಗಂಗಾ ತಿಮ್ಮನಾಯಕರ,ಜಯಶೀಲಾ ಬ್ಯಾಕೋಡ,ಪುಷ್ಪಾ ಮರಡೂರ,ರಮೇಶ ಮಿಜಿ೯ಹಾಗೂ ಸುಕಲ್ಪ ಮಠಪತಿ.


ನಾಟ್ಯಭೂಷಣ ಏಣಗಿ ಬಾಳಪ್ಪನವರ ಸಂಗೀತ ನಿರ್ದೇಶನದಲ್ಲಿ ಮಂಜುಳಾಜೋಶಿ,ಮುದ್ದುಮೋಹನ,ಸುಭದ್ರಮ್ಮ ಮನಸೂರ,ಶಿವಾನಂದ ಪಾಟೀಲ ಅವರು ಹಿನ್ನೆಲೆ ಗಾಯನ ನೀಡಿರುತ್ತಾರೆ.ತಬಲಾ ವಾದಕ ರಾಗಿ ನಾರಾಯಣ ಗಣಾಚಾರಿ, ಬೆಳಕಿನ ವಿನ್ಯಾಸಕರಾಗಿ ಗುರು ಪೇಡ್ನೇಕರ,ನೃತ್ಯ ಸಂಯೋಜಕರಾಗಿ ಶಾಂತಾ ಆಚಾರ್ಯ, ರಂಗ ಸಜ್ಜಿಕೆಗಾರರಾಗಿ ಶರಣಗೌಡ ಪಾಟೀಲ ಕಾಯ೯ ನಿವ೯ಹಿಸಿದರು.ಸಂಗೀತ- ರಮೇಶ ಮಿಜಿ೯ ಹಾಗೂ ರಂಗ ನಿವ೯ಹಣೆ- ರಾಜಕುಮಾರ ಕುಂಬಾರ ಮಾಡಿದರು.


ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ.ಬಿ ಎಸ್ ಗವಿಮಠ, ಧಾರವಾಡ ಪೋಲೀಸ ಅಧೀಕ್ಷಕರಾದ ಶ್ರೀ ಎನ್ ವಿ ಬರಮನಿ ಯವರು ಆಗಮಿಸಿದ್ದರು.

ಕೊನೆಯಲ್ಲಿ ಎಲ್ಲರಿಗೂ ಭೋಜನ ಏಪಾ೯ಡು ಮಾಡಲಾಗಿತ್ತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ