ಮೂಡಲಗಿ : ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಹೊಂದಿದ್ದ ಭಗೀರಥ ಮಹರ್ಷಿ ತಮ್ಮ ಪೂರ್ವಜರ ಮುಕ್ತಿಗಾಗಿ ರಾಜಸುಖವನ್ನೇ ತ್ಯಜಿಸಿದ ಮಹಾನ್ ಋಷಿ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಗುರುವಾರ ಪಟ್ಟಣದ ಹೊರವಲಯದಲ್ಲಿರುವ ಭಗೀರಥ ವೃತ್ತ (ಮೂಡಲಗಿ ಕ್ರಾಸ್)ದಲ್ಲಿರುವ ಮಹರ್ಷಿ ಭಗೀರಥ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಹರ್ಷಿ ಭಗೀರಥರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಬೆಳವಣಿಗೆಗೆ ಶ್ರಮಿಸುವಂತೆ ಅವರು ತಿಳಿಸಿದರು. ಭಗೀರಥ ಮಹಾರಾಜನು ಕಠಿಣ ತಪಸ್ಸಿನಿಂದ ತಮ್ಮ ಪೂರ್ವಜರ ಮುಕ್ತಿಗಾಗಿ ಸ್ವರ್ಗದಲ್ಲಿದ್ದ ಗಂಗಾ ನದಿಯನ್ನು ಭೂಮಿಗೆ ತಂದು ಅವರ ಆತ್ಮಕ್ಕೆ ಮುಕ್ತಿ ನೀಡಿದ ಮಹಾನ್ ಪುರು?ರಾಗಿದ್ದರು. ಇದಕ್ಕಾಗಿ ಹಿಮಾಲಯ ಪರ್ವತದಲ್ಲಿ ಕಠಿಣ ತಪಸ್ಸು ಮಾಡಿದ್ದರು. ಅದರ ಫಲವೇ ಗಂಗಾ ನದಿಯನ್ನು ಭೂಮಿಗೆ ತಂದ ಪುಣ್ಯವಂತನು ಭಗೀರಥರು ಎಂದು ಅವರು ಹೇಳಿದರು.
ಪ್ರತಿ ವ?ವೂ ಭಗೀರಥ ಮಹರ್ಷಿ, ಜಗಜ್ಯೋತಿ ಬಸವೇಶ್ವರರು, ಭಕ್ತ ಕನಕದಾಸರು, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಬಿ. ಆರ್. ಅಂಬೇಡ್ಕರ್ ಅವರಂತಹ ಮಹಾನ್ ಪುರು?ರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ.ಆದರೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಬೇಕಿದೆ. ಕೇವಲ ಜಯಂತಿ ಕಾರ್ಯಕ್ರಮಗಳಿಗೆ ಮೀಸಲಿಡದೇ ಪ್ರತಿ ದಿನವೂ ಮಹಾನ್ ವ್ಯಕ್ತಿಗಳನ್ನು ಸ್ಮರಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣದಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಶೈಲ ಬ್ಯಾಕೋಡ, ಸಮಾಜದ ಮುಖಂಡರಾದ ಈಶ್ವರ ಕಂಕಣವಾಡಿ, ಅಜ್ಜಪ್ಪ ಕಂಕಣವಾಡಿ, ಹಣಮಂತ ಪೂಜೇರಿ, ಮುತ್ತೆಪ್ಪ ಬಿರನಾಳ, ನ್ಯಾಯವಾದಿ ಲಕ್ಷ್ಮಣ ಅಡಿಹುಡಿ, ಅಲ್ಲಪ್ಪ ಕಂಕಣವಾಡಿ, ವೈ.ಆರ್.ಹಂದಿಗುಂದ, ಭರಮಣ್ಣ ಕಪ್ಪಲಗುದ್ದಿ, ಸುಭಾಸ ಗೋಡ್ಯಾಗೋಳ, ಪರಸಪ್ಪ ಉಪ್ಪಾರ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗನೂರ : ಪಟ್ಟಣದಲ್ಲಿ ಮಹರ್ಷಿ ಭಗೀರಥ ಮಹಾರಾಜರ ಜಯಂತಿಯನ್ನು ಭಗೀರಥ ಮಠದಲ್ಲಿ ಜರುಗಿತು. ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಗೌರವ ಅರ್ಪಿಸಿದರು.
ಸಮಾಜದ ಪ್ರಮುಖರಾದ ಚಂದ್ರು ಬೆಳಗಲಿ, ಅಲ್ಲಪ್ಪ ಗುಡೆನ್ನವರ, ಪರಸಪ್ಪ ಬಬಲಿ, ಸುಭಾಸ ಬೆಳಗಲಿ, ರಾಮಗೊಂಡ ಪಡದಲ್ಲಿ, ಅಲ್ಲಪ್ಪ ಗೋಟೂರ, ಚಂದ್ರು ಪಡದಲ್ಲಿ, ಅರ್ಬನ್ ಸೊಸೈಟಿ ಅಧ್ಯಕ್ಷ ಬಸವರಾಜ ತಡಸನವರ, ಭೀಮಗೌಡ ಹೊಸಮನಿ, ಪವಾಡೆಪ್ಪ ಗೋಟೂರ, ಮುತ್ತೆಪ್ಪ ಮುತ್ತೆನ್ನವರ, ಮಹಾದೇವ ನಾಯಿಕ, ಬಸು ಹಳಿಗೌಡರ, ಪ್ರವೀಣ ಜೋಕಿ, ರಾಮಚಂದ್ರ ಚಿಗಡೊಳ್ಳಿ, ಯಮನಪ್ಪ ಪಡದಲ್ಲಿ, ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.