ನೇಸರಗಿ. ಸಮೀಪದ ಮತ್ತಿಕೊಪ್ಪ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ವಿವಿದೊದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ 2 ನೇ ಅವಧಿಗೆ ಅಧ್ಯಕ್ಷರಾಗಿ ಮಹಾಂತೇಶ ಮೋಹರೆ ಹಾಗೂ ಉಪಾಧ್ಯಕ್ಷರಾಗಿ ಅಡಿವೆಪ್ಪ ಹೊಸಮನಿ ಇವರು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಇವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ಮೋಹರೆ, ಶಿವಾನಂದ ರಾಹುತ, ನಾಗಪ್ಪ ತುಮ್ಮರಗುದ್ದಿ, ಈರಪ್ಪ ಮೋಹರೆ, ದೇಯಪ್ಪ ದೇಯಣ್ಣವರ, ಯಲ್ಲಪ್ಪ ಮೋಹರೆ, ಶ್ರೀಮತಿ ಭಾರತಿ ಮೋಹರೆ, ಶ್ರೀಮತಿ ಶಾಂತವ್ವ ಬೈಲವಾಡ ಹಾಗೂ ಚುನಾವಣಾ ಅಧಿಕಾರಿಯಾಗಿ ಬಸವರಾಜ ಹಡಪದ, ಜಗದೀಶ ಹಿರೇಮಠ, ಗ್ರಾಮದ ಹಿರಿಯರಾದ ಸೋಮಪ್ಪ ದೇಯಣ್ಣವರ, ವಕೀಲರಾದ ಅಶೋಕ ಲೆಂಕೇನ್ನವರ, ಸೋಮಪ್ಪ ಬೈಲವಾಡ, ಈರಣ್ಣ ತುಮ್ಮರಗುದ್ದಿ ಸಂಘದ ಸದಸ್ಯರು, ರೈತರು, ಗ್ರಾಮದ ಹಿರಿಯರು, ಗ್ರಾಮಸ್ಥರು ಇದ್ದರು.