Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ: ಮಹಾಲಿಂಗೇಶ್ವರ ಶ್ರೀಗಳು

ಮಹಾಲಿಂಗಪುರ:ಭಾರತದ ೧೨ ಜ್ಯೋತಿಲಿಂಗಗಳಲ್ಲಿ ಪ್ರಭಾವಿ ಜ್ಯೋತಿಲಿಂಗ ಇರುವ ಸುಕ್ಷೇತ್ರ ಶ್ರೀಶೈಲಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಂಬಿ ಮಲ್ಲಯ್ಯ ಮಂಗಳವಾರ ಮುಂಜಾನೆ ಪ್ರಯಾಣ ಬೆಳೆಸಿದ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿತಗೊಂಡ ಮಲ್ಲಯ್ಯನ ಜೊತೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರನ್ನಬೆಳಗಲಿ ರಸ್ತೆಯಲ್ಲಿರುವ ಅಗಸಿ ಬಾಗಿಲವರೆಗೆ ಸಕಲ ಭಕ್ತವೃಂದ ಹಾಗೂ ವಾದ್ಯಮೇಳಗಳೊಂದಿಗೆ ಕಾಲ್ನಡಿಗೆಯಲ್ಲಿಯೇ ಆಗಮಿಸಿದರು.
ಬೀಳ್ಕೊಡುವ ಮಾರ್ಗದುದ್ದಕ್ಕೂ ಸಾಲಾಗಿ ನಿಂತ ಮುತ್ತೈದೆಯರು ಕೊಡದಿಂದ ನೀರು ಸುರಿದು ಆಶಿರ್ವಾದ ಪಡೆದರು.ಅಗಸಿ ಬಾಗಿಲ ಹತ್ತಿರ ಮಲ್ಲಯ್ಯನಿಗೆ ಮಂಗಳಾರತಿ ಮಾಡಲಾಯಿತು .ಶ್ರೀ ಮಠದ ಹೋರಿ ಮಹಾಲಿಂಗ ಕೂಡಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.ಇದು ಸತತ ೧೧ ವರ್ಷಗಳಿಂದ ಸದ್ಭಕ್ತರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀ ಗುರು ಮಹಾಲಿಂಗೇಶ್ವರರ ಪಾದ ಸ್ಪರ್ಮಶದಿಂದ ಮಹಾಲಿಂಗಪುರ ಸರ್ಮ ಧರ್ಮಗಳ ನಡುವೆ ಬ್ರಾತ್ವತ್ಯ ಹೊಂದಿದ ಪಟ್ಟಣವಾಗಿದೆ. ರಾಜ್ಯದಲ್ಲಿಯೇ ಭಾವ್ಯಕ್ಯತೆಯ ನಗರವೆಂದು
ಪ್ರಸಿದ್ಧಿಯಾಗಿದೆ.ಮನುಕುಲಕ್ಕೆ ಇಂತಹ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾಲಿಂಗೇಶ್ವರರು ನೆಲೆಸಿದ ನಾಡಿನಲ್ಲಿ ವಾಸಿಸುವವರು ಭಾಗ್ಯವಂತರು.ಮಹಾಲಿಂಗೇಶ್ವರರಲ್ಲಿ ಶುದ್ಧ ನಿರ್ಮಲ ಭಕ್ತಿ ತೋರಿದರೆ ಎಲ್ಲ ರೀತಿಯ ಮನೋಭಿಲಾಷೆಗಳು ನೆರವೇರುತ್ತವೆ.

ಶ್ರೀಶೈಲದ ಜ್ಯೋತಿಲಿಂಗದಲ್ಲಿ ಶಿವ-ಪಾವರ್ತಿ ನೆಲೆಸಿದ್ದಾರೆಂಬ ಪ್ರತೀತಿ ಇದೆ.ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವದರಿಂದ ಸುಖ,ಸಂಪತ್ತು ವೃದ್ಧಿಸುತ್ತದೆ.ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ ಎಂದು ಹೇಳಿ ಶ್ರೀಶೈಲ ಯಾತ್ರಿಗಳಿಗೆ ಶುಭ ಕೋರಿ ಬೀಳ್ಕೊಟ್ಟರು. ನೆರೆದಿದ್ದ ಸಾವಿರಾರು ಜನ ಭಕ್ತರ ನಡುವೆ ಮಲ್ಲಯ್ಯ ಪ್ರಯಾಣ ಬೆಳೆಸಿದ.  ಮಾರ್ಗಮಧ್ಯ ಯಾತ್ರಿಕರಿಗೆ ಅನೇಕರು ತಿಂಡಿ, ಚಹಾ, ಬಿಸ್ಕತ್ ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.ಮಹಾಲಿಂಗಪುರ ಔಷಧ ವ್ಯಾಪಾರಸ್ಥರ ಸಂಘದಿಂದ ಪ್ರಥಮ ಚಿಕಿತ್ಸೆಗಾಗಿ ಉಚಿತ ಔಷಧ ವಿತರಿಸಲಾಯಿತು.

ಸಿದ್ದಯ್ಯ ಸ್ವಾಮಿಗಳು,ಶ್ರೀಶೈಲ ಸ್ವಾಮಿಗಳು,ವಿಶ್ವನಾಥ ಮಠ ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ