Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಹಕಾರ ರಂಗದಲ್ಲಿ ಠೇವಣಿದಾರರ ವಿಶ್ವಾಸ ಉಳಿಸಿಕೊಳ್ಳುವದು ಮುಖ್ಯ:ಶಾಸಕ ಲಕ್ಷ್ಮಣ ಸವದಿ

ಕಾಗವಾಡ:ಸಹಕಾರ ರಂಗ ಬೆಳೆಯಬೇಕಾದರೆ ಠೇವಣಿದಾರರ ವಿಶ್ವಾಸಗಳಿಸಿಕೊಳ್ಳುವದು ಮುಖ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ,ಹಾಲಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.


ಅವರು ಶುಕ್ರವಾರ ದಿ.08 ರಂದು ಕಾಗವಾಡ ತಾಲ್ಲೂಕಿನ ಕೆಂಪವಾಡ ಗ್ರಾಮದಲ್ಲಿ ಸಂಗಮನಾಥ ಅರ್ಬನ್ ಸೌಹಾರ್ದ್ ಸಹಕಾರಿ ಸಂಘ ನಿ.ಅಥಣಿ ಕೆಂಪವಾಡ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ,ಸಹಕಾರಿ ಬ್ಯಾಂಕ್ ಗಳು ಬೆಳವಣಿಗೆಯಾಗಬೇಕಾದರೆ ಠೇವಣಿದಾರ ಇಟ್ಟ ಭರವಸೆ ಉಳಿಸಿಕೊಳ್ಳುವದರ ಜೊತೆಗೆ ಸಾಲ ತೆಗೆದುಕೊಳ್ಳುವವರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಆತನ ಆದಾಯ ಯಾವುದರ ಅವಲಂಬಿತವಾಗಿದ್ದಾರೆ ಅವರು ಯಾವ ವಿಧದಲ್ಲಿ ಸಾಲ ತುಂಬಲು ಅರ್ಹರು ಎಂಬುದನ್ನು ಗಮನದಲ್ಲಿರಿಸಿದರೆ ಮಾತ್ರ ಸಹಕಾರಿ ಬ್ಯಾಂಕಗಳು ದಿವಾಳಿಯಾಗುವದನ್ನು ತಪ್ಪಿಸಬಹುದಾಗಿದೆ.ಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕೆಂದರು.


ಇದೆ ವೇಳೆ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಪರಪ್ಪ ಸವದಿ ಮಾತನಾಡಿ,ಸಂಗಮನಾಥ ಬ್ಯಾಂಕ್ ಉನ್ನತಿಗಾಗಿ ಎಲ್ಲ ಗ್ರಾಮಸ್ಥರು,ರೈತರು ಸಹಕರಿಸಬೇಕು ಇದರ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ಆಡಳಿತ ವರ್ಗದವರು ಶ್ರಮಿಸಿದರೆ ಇನ್ನೂ ಹೆಚ್ಚಿನ ಶಾಖೆಗಳು ಪ್ರಾರಂಭವಾಗಲು ಸಾಧ್ಯವಿದೆ ಎಂದರು.


ಇದೆ ಸಂದರ್ಭದಲ್ಲಿ ಮರುಳಸಿದ್ದ ಮಹಾಸ್ವಾಮಿಗಳು,ಸಿದ್ದಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.


ಮಲ್ಲೇಶ ಪರಪ್ಪ ಸವದಿ ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದರು.


ಈ ವೇಳೆ ಮುಖ್ಯ ಅತಿಥಿ ಶಂಕರ ವಾಘಮೋಡೆ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನ್ನಪೂರ್ಣ ಶೆಮಡೆ,ರಾಮಗೌಡಾ ಗುಮತಾಜ,ಶಿವಾನಂದ ಗೊಲಭಾಂವಿ,ಮಹಾದೇವ ನಾಗನೂರ,ಶಶಿಕಾಂತ ಹುಲಕುಂದ,ಶ್ರೀನಿವಾಸ ಅಮ್ಮಲಜೇರಿ,ರಾಜು ತೇಲಿ,ಯಲ್ಲಪ್ಪ ಕಲಾಲ,ಸಿದ್ದಪ್ಪ ಮಹಿಷವಾಡಗಿ,ಮಧು ವಾಲಿಕಾರ,ರಮೇಶ ತೇಲಿ,ಕಲಗೌಡ ಪಾಟೀಲ್, ಬಬನ ಸಾವಂತ ಭೀಮಪ್ಪ ಭಂಡಗರ,ಅಪ್ಪಾಸಾಬ ಕಣವಾಡೆ,ಧರೆಪ್ಪ ಮಾಳಿ ಸೇರಿದಂತೆ ಅನೇಕರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ