Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮತ್ತು ವಿಗ್ರಹ ಪ್ರತಿಷ್ಠಾಪನೆ 







 ಬಳ್ಳಾರಿ ಮೇ 20: ನಗರದ  ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣವಾಗಿ 12 ವರ್ಷವಾಗಿರುವ ಸುಸಂದರ್ಭದಲ್ಲಿ ಬೆಂಗಳೂರಿನ ಶ್ರೀ ವಾಸವಿ ಪೀಠ  ಸ್ವಾಮಿಗಳಾದ ಶ್ರೀ ಸಚಿದಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ  ಶ್ರೀರಂಗಪಟ್ಟಣ ದಿಂದ  ಬಂದ  30 ಸ್ವಾಮಿಗಳು ಕುಂಭಾಭಿಷೇಕ

  ಬಹಳ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು .


 ದಿನಾಂಕ ಮೇ 17ರಂದು  ಸಂಜೆ ಬೆಂಗಳೂರಿನ ಶ್ರೀ ಲಲಿತ ಕಲಾ ನಾಟ್ಯಕಲ್ಪ ಅಕಾಡೆಮಿ ಇವರಿಂದ ಅಯ್ಯಪ್ಪ ಸ್ವಾಮಿ ಚರಿತೆಯನ್ನು ನೃತ್ಯ ರೂಪದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿಪ್ರದರ್ಶಿಸಲಾಯಿತು.  ಮತ್ತು ಮೇ 18ರಂದು  ಸಂಜೆ ನಮ್ಮ ಬಳ್ಳಾರಿಯ ಗಾಯಕಿಯಾದ ಪ್ರಕೃತಿ ರೆಡ್ಡಿ ಇವರಿಂದ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಮತ್ತು ಮೇ 19 ರಂದು  ಸೋಮವಾರ ದೇವಾಲಯದ ಪ್ರಾಂಗಣದಲ್ಲಿ ನವಗ್ರಹ ವಿಗ್ರಹಗಳ ಮತ್ತು ದೇವಿ ವಿಗ್ರಹ ಪ್ರತಿಷ್ಠಾಪನವನ್ನು ಮಾಡಲಾಯಿತು. ಇನ್ನುಮುಂದೆ ದೇವಾಲಯಕ್ಕೆ ಬರುವ ಭಕ್ತರಿಗೆಲ್ಲ ಒಂದೇ ಪ್ರಾಂಗಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ,. ಗಣಪತಿ,  ಕುಮಾರಸ್ವಾಮಿ ,ನವಗ್ರಹಗಳು ಮತ್ತು ದೇವಿಯ ದರ್ಶನವನ್ನು ಮಾಡಬಹುದಾಗಿದೆ.  ಮತ್ತು ಸಂಜೆ ಶ್ರೀ  ಅಯ್ಯಪ್ಪ ಸ್ವಾಮಿ ದೇವಾಲಯದ ಪಡಿ ಪೂಜೆಯನ್ನು ಶಬರಿಮಲೆ ಮೂಲ ಸ್ಥಾನ ಅರ್ಚಕರಾದ ಶ್ರೀ ಶ್ರೀರಂಗಂ ಶರಣ್ ಮೋಹನ್ ರವರಿಂದ ಶಬರಿಮಲೆಯಲ್ಲಿ ನಡೆಯುವ ರೀತಿಯಲ್ಲಿಯೇ ಮಾಡಲಾಯಿತು.  ಈ  ಕಾರ್ಯಕ್ರಮಕ್ಕೆ  ಕೇರಳದಿಂದ  ಚಂಡ  ವಾಧ್ಯ  ಕೂಡ ತರಿಸಲಾಯಿತು.ಹಾಗೆ 18 ವಿಧವಾದ ಪುಷ್ಪಗಳಿಂದ ವಿಶೇಷ ಪುಷ್ಪಾಭಿಷೇಕವನ್ನು ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ಬಹಳ ಸುಂದರವಾಗಿ ಭಕ್ತರ ಕಣ್ಣಿಗೆ ತೃಪ್ತಿಯಾಗುವ ರೀತಿಯಲ್ಲಿ ಮಾಡಲಾಯಿತು. ಈ ಮೂರು ದಿನದ ಕಾರ್ಯಕ್ರಮಗಳಿಗೆ ಬಂದ ಭಕ್ತರಿಗೆಲ್ಲ ದೇವರ ಪ್ರಸಾದವನ್ನು ಏರ್ಪಡಿಸಲಾಯಿತು ಎಂದು ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ನ ಚೆರ್ಮನ್ ರಾದ  ಜಯಪ್ರಕಾಶ್ ಜೆ.ಗುಪ್ತ ಅವರು ತಿಳಿಸಿದ್ದಾರೆ.


ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ  ಜಿ. ಸೋಮಶೇಖರ್ ರೆಡ್ಡಿ ರವರು, ಬುಡಾ ಚೇರ್ಮನ್ ಶ್ರೀ ಆಂಜನೇಯಲು,ಬುಡಾ ಮಾಜಿ ಚೇರ್ಮನ್ ರಾದ ಮಾರುತಿ ಪ್ರಸಾದ್ ಮತ್ತು ನಗರದ ಪಾಲಿಕೆ ಸದಸ್ಯರಾದ ಮುಂಡ್ಲುರ್ ಅನೂಪ್ ಕುಮಾರ್, ರಾಯದುರ್ಗ  ಮಾಜಿ  ಶಾಸಕರಾದ  ಕಾಪು ರಾಮಚಂದ್ರ ರೆಡ್ಡಿ ಮತ್ತು ನಗರದ ಪಾಲಿಕಿಯ ಸದಸ್ಯರು  ಹಾಗೂ ನಗರದ ಅನೇಕ ಗಣ್ಯರು, ಅಯ್ಯಪ್ಪ ಸ್ವಾಮಿಯ ಭಕ್ತರು ಹಾಗೂ ಬಳ್ಳಾರಿಯ ಗಡಿ ಭಾಗ, ಬೇರೆ ಊರುಗಳಿಂದ  ಬಂದ ಅಯ್ಯಪ್ಪ ಭಕ್ತರು, ಈ ಮೂರು ದಿನ ಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.









Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ