Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ಬಿ.ಆರ್ ಅಂಬೇಡ್ಕರ್ ಭವನ ದುರಸ್ತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಹುನಗುಂದ: ತಾಲೂಕಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ದುರಸ್ತಿಗೊಳಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಮನವಿ ಮಾಡಿದರೂ ಕೂಡಾ ಇಲ್ಲಿವರಿಗೆ ಗ್ರಾ.ಪಂ.ಅಧಿಕಾರಿಗಳು ಮರಸ್ತಿ ಕಾರ್ಯಕ್ಕೆ ಮುಂದಾಗದೇ ಇರೋದಕ್ಕೆ ಬುಧವಾರ ಮತ್ತೆ ಟಿ. ನಾರಾಯಣಗೌಡ ಬಣಪ ಕರ್ನಾಟಕ ರಕ್ಷಣಾ ವೇದಿಕೆ ಕಾರ್‍ಯಕರ್ತರು ಕೂಡಲಸಂಗಮ ಗ್ರಾಮ ಪಂಚಾಯತಿಯ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಪಿಡಿಓ ಆನಂದ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ : ರಮಜಾನ್ ನದಾಫ್ ಮಾತನಾಡಿ ಕೂಡಲಸಂಗಮದ ಪುನರ್ವಸತಿ ಕೇಂದ್ರದಲ್ಲಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭವನದ ಸಂಪೂರ್ಣ ಒಡೆದು ಹೋಗಿದ್ದು, ವೇದಿಕೆಯ ಮುಂಬಾಗದ ಮೆಟ್ಟಿಲುಗಳು ಮತ್ತು ವೇದಿಕೆಯ ಮುಂಭಾಗದ ಪರ್ಶಿಗಳು (ಬಂಡಿಗಳು) ಒಡೆದು ಹೋಗಿವೆ, ವಿದ್ಯುತ ಸರಬರಾಜು ಸಹ ಕಾರ್ಯನಿರ್ವಹಿಸುತ್ತಿಲ್ಲ, ಮಳೆಯಾದರೇ ಸಾಕು ಭವನದ ಛಾವಣಿಯು ಸೊರುತ್ತಿದೆ ಇವೆಲ್ಲವನ್ನೂ ಪುರಸ್ತಿಗೊಳಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಮನವಿ ಮಾಡಿದರೂ ಇಲ್ಲಿವರೆಗೆ ಮರಸ್ತಿ ಕಾರ್ಯಕ್ಕೆ ಕೈ ಹಾಕದೆ ಇರುವುದು ಕೇದಕರ ಸಂಗತಿಯಾಗಿದೆ. ೬೯ ಸಾವಿರ ಅನುದಾನದಲ್ಲಿ ಮರಸ್ತಿ ಕಾರ್ಯ ಕೈಗೊಳ್ಳುತ್ತೇವೆಂದು ಪಂಚಾಯತಿ ಅಧಿಕಾರಿಗಳು ಹೇಳಿದ್ದರೂ ಕೂಡಾ ಇನ್ನುವರೆಗೆ ಕೆಲಸ ಆರಂಭಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮರಸ್ತಿ ಕಾರ್ಯಕ್ಕೆ ಮುಂದಾಗುವರಿಗೂ
ನಮ್ಮ ಕರವೇ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಪಕ್ಕದಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ರಾಪಂ ಪಿಡಿಒ ಆನಂದ ಹಿರೇಮಠ ಮಾತನಾಡಿ ನಾವು ಹೇಳಿದಂತೆ ಸಧ್ಯ ೬೯ ಸಾವಿರ ಅನುದಾನದಲ್ಲಿ ಕಾರ್ಯವನ್ನು ಆರಂಭಿಸುತ್ತೇವೆ. ಸಂಪೂರ್ಣ ದುರಸ್ಥಿ ಕಾರ್ಯಕ್ಕೆ ಅನುದಾನದ ಕೊರತೆ ಇರೋದರಿಂದ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸುಮಾರು ಎರಡೂವರೆ ಲಕ್ಷ ಅನುದಾನದಲ್ಲಿ ಸಂಪೂರ್ಣ ದುರಸ್ಥಿ ಕಾರ್‍ಯ ಮಾಡುತ್ತೇವೆಂದು ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿ ಮನವಲಿಸಿದರು. ಸದ್ಯ ಪ್ರತಿಭಟನೆಯನ್ನು ಹಿಂಪಡಿಬೇಕೆಂದು ಮನವಿ ಮಾಡಿದಾಗ ಕರವೇ ಕಾರ್ಯಕರ್ತರು ಅವರ ಮನವಿಗೆ ಒಪ್ಪಿಕೊಂಡು ಪ್ರತಿಭಟನೆಯನ್ನು ಹಿಂಪಡೆದರು. ಇಲಕಲ್ ತಾಲೂಕ ಅಧ್ಯಕ್ಷ ಅಶೋಕ ಪೂಜಾರ, ಪ್ರಕಾ ಜಹೀರ ಸಂಗಮಕರ, ಹುಸೇನ್ ಸಂದಿಮನಿ, ಯುವ ಘಟಕದ ಅಧ್ಯಕ್ಷ ಪ್ರವೀಣ ವಾಲಿಕಾರ, ಗ್ರಾಮ ಘಟಕ ಅಧ್ಯಕ್ಷ ಮಂಜು ವಡ್ಡರ, ದಶರಥ ವಡ್ಡರ, ಶ್ರವಣ ಹಿರೇಮಠ, ಸದ್ದಾಂ ಕಲಾಲ್, ರವಿ ಕೊಪ್ಪದ, ಮುತ್ತು ದಾಸರ, ಪ್ರಮೋದ ಬಿರಾದಾರ, ಬರಮು ಬೆಳಗಲ್, ವಿನೋದ ಚಲವಾದಿ, ಸಂತೋಷ ಮೂಲಿಮನಿ, ಬಾಲು ಚಲವಾದಿ ಇದ್ದರು.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ