Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಯುವ ಕೃಷಿಗೆ ಆದ್ಯತೆ ನೀಡಿ : ಕಾಡಶಿದ್ದೇಶ್ವರ ಸ್ವಾಮೀಜಿ

ಯರಗಟ್ಟಿ: ಅತಿಯಾದ ಗೊಬ್ಬರ,ಕ್ರಿಮಿನಾಶಕ, ಔ?ದ ಬಳಿಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಬರಡು ಭೂಮಿಯಾಗಿ ಮಾರ್ಪಡಾಗುತ್ತದೆ ಪ್ರತಿಯೊಬ್ಬ ರೈತರೂ ಈ ಕುರಿತು ಜಾಗೃತರಾಗವುದು ಅಗತ್ಯವಿದೆ ಎಂದು ಕೆನೇರಿ ಮಠದ ಕಾಡಶಿದ್ಧೇಶ್ವರ ಸ್ವಾಮೀಜಿ ಹೇಳಿದರು,
ಸಮೀಪದ ರೈನಾಪೂರ ಗ್ರಾಮದ ಶ್ರದ್ಧಾನಂದ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಪಯಜ್ಞ ಮತ್ತು ವೇದಾಂತ ಮಹೋತ್ಸವವದ ಮೂರನೇಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಸಾಯನಿಕ ಗೊಬ್ಬರ ಬಳಿಸುವದರಿಂದ ಕ್ಯಾನ್ಸರ್, ರಕ್ತದ, ಒತ್ತಡ. ಸಕ್ಕರೆ, ಇನ್ನೂ ಅನೇಕ ಮಾರಣಾಂತಿಕ ಕಾಯಲೆಗಳು ಉಲ್ಬಣಗೊಳ್ಳುತ್ತವೆ, ರೈತ ಸಮುದಾಯ ಹೆಚ್ಚು ಸಾವಯುವ ಕೃಷಿ ಪದ್ದತಿ ಅನುಸರಿಸಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಮಾಣ ಸಾಧ್ಯವಿದೆ ಎಂದರು.
ಸಾವಯವ ಕೃಷಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು ಆರೋಗ್ಯಕರ, ರಾಸಾಯನಿಕ-ಮುಕ್ತ ಆಹಾರವನ್ನು ಒದಗಿಸುತ್ತದೆ. ಇದು ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಸುಸ್ಥಿರ ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಅತ್ಯಗತ್ಯ ಕೃಷಿ ಪದ್ಧತಿಯಾಗಿದೆ ಎಂದು ಹೇಳಿದರು.
ಈ ವೇಳೆ ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ರೈತರು ಕಬ್ಬು, ಗೋವಿನ ಜೋಳ, ಹತ್ತಿ ಮುಂತಾದ ವಾಣಿಜ್ಯ ಬೆಳಗಳಿಗೆ ಸಿಮೀತವಾಗದೆ; ಕೋಳಿ, ಕುರಿ. ಹೈನುಗಾರಿಕೆ, ಇಂತಹ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಆರ್ಥಕವಾಗಿ ಸಬಲರಾಗ ಸಾದ್ಯವಾಗುತ್ತದೆ ಎಂದರು
ಈ ವೇಳೆ ಗೊಡಗೇರಿ ಮಠದ ಮಲ್ಲಯ್ಯ ಸ್ವಾಮೀಜಿ, ಅಮಲಝರಿಮಠದ ಜ್ಞಾನಮಯಾನಂದ ಸ್ವಾಮೀಜಿ. ದಾಡಬಾಯಿ ಮಠದ ಮಲ್ಲಯ್ಯ ಸ್ವಾಮೀಜಿ, ರೈನಾಪೂರ ಮಠದ ಮಾತೋಶ್ರೀ ಪಾರ್ವತಿತಾಯಿ, ಮಾತೋಶ್ರೀ ಮುದ್ದಮ್ಮತಾಯಿ, ಶ್ರದ್ಧಾನಂದ ಮಠದ ಭೂ ದಾನಿಗಳಾದ ಭರಮಪ್ಪ ಜೋಗಿ, ಬಸಯ್ಯ ಹಿರೇಮಠ, ವಿರೂಪಾಕ್ಷ ಮಾಮನಿ, ಜಗದೀಶ ಕೌಜಗೇರಿ, ರಾಜೇಂದ್ರಗೌಡ ಪಾಟೀಲ, ವೆಣಕಟೇಶ ದೇವರಡ್ಡಿ, ಕೃಷ್ಣಮೂರ್ತಿ ತೋರಗಲ್ಲ, ಚಂದ್ರು ತೋರಣಕಟ್ಟಿ, ಪಕೀರಪ್ಪ ಕಾನನ್ನವರ, ವಿಠ್ಠಲ ಕಳ್ಳಿಗುದ್ದಿ, ಚಂದ್ರು ಅಳಗೋಡಿ, ಬಂಡಿವಡ್ಡರ, ವೆಂಕಣ್ಣ ಹುರಕ್ಕನ್ನವರ, ಗೋಪಾಲ ಕಡೆಮನಿ, ರಾಜು ಕಳ್ಳಿಗುದ್ದಿ, ಗೋವಿಂದ ಕಡೆಮನಿ, ಬಸಪ್ಪ ಶಿದ್ನಾಳ, ಶಂಕರ ಕಳ್ಳಿಗುದ್ದಿ, ಮಲ್ಲಪ್ಪ ಹೋಗಾರ, ಮಹಾಂತೇಶ ಅಡಕಿ, ಮಸಂಗಯ್ಯ ಕುಂಬಾರಗೇರಿಮಠ ಸೇರಿದಂತೆ ಅನೇಕರು ಇದ್ದರು,

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ