ವಿಜಯಪುರ:-ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುವ ಆತ್ಮ ಪ್ರಜ್ಞೆಗೆ ಬಸವ ಪ್ರಜ್ಞೆ ಎನ್ನುವರು.ಇದು ವಚನ ಸಾಹಿತ್ಯದಲ್ಲಿ ಅಮೂಲ್ಯ ನಿಧಿಯಾಗಿ ಹರಡಿಕೊಂಡಿದೆ.ಈ ಸಂಪತ್ತಿನಿಂದ ಮನುಷ್ಯ ತನ್ನ ಬದುಕನ್ನು ಶ್ರೀಮಂತ ಗೊಳಿಸಿ- ಕೊಂಡು ಪುನೀತನಾಗಬೇಕೆಂದು ಪ್ರೊ.ಎಸ್ ಎಂ ಶೇಖ ಹೇಳಿದರು.
ಅವರು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ. ಅಮರಪ್ಪ ಕುರುಬರ ಅವರ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಅವರು ಬಸವಾದಿ ಶರಣರ ವಚನಗಳಲ್ಲಿ ವಚನಗಳ ಪ್ರಸ್ತುತತೆ ಎಂಬ ವಿಷಯ ಕುರಿತು ವಿದ್ವತ್ಪೂರ್ಣವಾಗಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ವಿ. ಸಿ. ನಾಗಠಾಣ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಮಾಡುವಲ್ಲಿ ತಾಯಿತಂದೆಯರ ಪಾತ್ರ ಹೆಚ್ಚಿರುತ್ತದೆ ಎಂದು ಹೇಳಿದರು.
ಡಾ. ವಿ. ಡಿ. ಐಹೊಳ್ಳಿಯವರು ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾಸೋಹಿಗಳಾದ ನಾರಾಯಣಪ್ಪ ಕುರುಬರ ಅವರು ಮಾತನಾಡಿ ಹೆತ್ತವರ ಸ್ಮರಣೆಯನ್ನು ಮಾಡಲು ಅವಕಾಶ ನೀಡಿದ ಶರಣಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಮ. ಗು. ಯಾದವಾಡ ವಂದಿಸಿದರು. ಸಭೆಯಲ್ಲಿ ಬಿ. ಎಂ. ಪಾಟೀಲ್, ಬಿ. ಟಿ. ಈಶ್ವರಗೊಂಡ ,ಜಗದೀಶ್ ಪಟ್ಟಣಶೆಟ್ಟಿ, ಎಸ್. ವೈ. ಗದಗ ಬಸವರಾಜ ಪಟ್ಟಣಶೆಟ್ಟಿ, ದೇವೇಂದ್ರ ಡಂಬಳ,ಎಸ್ ಬಿ ದೊಡಮನಿ , ಲಕ್ಷ್ಮಿ ಕುರುಬರ, ಶಕುಂತಲಾ ಮೋಸಲಗಿ,ಕಮಲಾ ಮುರಾಳ,ಎಲ್.ಪಿ.ಬಿರಾದಾರ, ಮಾಧವ ಗುಡಿ,ಅಶೋಕ ಹಂಚಲಿ,ಶ್ರೀಮತಿ ಚೋಳಕೆ,ಬಿ.ಸಿ.ಸಾರವಾಡ,ಬಸವರಾಜ ಗೋಟ್ಯಾಳ,ಆರ್,ಎಸ್, ಬಿರಾದಾರ ಶಿವಪ್ಪ ಶಿವಣಗಿ ಸುಭಾಸ ಬೆಟಗೇರಿ ಹಾಗೂ ಯರಗಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು.
