Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶರಣ ಸಂಸ್ಕೃತಿಯಿಂದ ಮಾತ್ರ ಜಗದೋದ್ಧಾರ : ಪ್ರೊ.ಎಸ್.ಎಂ. ಶೇಖ ಅಭಿಮತ


  ವಿಜಯಪುರ:-ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುವ ಆತ್ಮ ಪ್ರಜ್ಞೆಗೆ ಬಸವ ಪ್ರಜ್ಞೆ ಎನ್ನುವರು.ಇದು ವಚನ ಸಾಹಿತ್ಯದಲ್ಲಿ ಅಮೂಲ್ಯ ನಿಧಿಯಾಗಿ ಹರಡಿಕೊಂಡಿದೆ.ಈ ಸಂಪತ್ತಿನಿಂದ ಮನುಷ್ಯ ತನ್ನ ಬದುಕನ್ನು ಶ್ರೀಮಂತ ಗೊಳಿಸಿ- ಕೊಂಡು ಪುನೀತನಾಗಬೇಕೆಂದು ಪ್ರೊ.ಎಸ್ ಎಂ ಶೇಖ ಹೇಳಿದರು.
         ಅವರು ಜಿಲ್ಲಾ  ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ. ಅಮರಪ್ಪ ಕುರುಬರ ಅವರ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಅವರು ಬಸವಾದಿ ಶರಣರ ವಚನಗಳಲ್ಲಿ ವಚನಗಳ ಪ್ರಸ್ತುತತೆ ಎಂಬ ವಿಷಯ ಕುರಿತು ವಿದ್ವತ್ಪೂರ್ಣವಾಗಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ವಿ. ಸಿ. ನಾಗಠಾಣ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಮಾಡುವಲ್ಲಿ ತಾಯಿತಂದೆಯರ ಪಾತ್ರ ಹೆಚ್ಚಿರುತ್ತದೆ ಎಂದು ಹೇಳಿದರು.
  ಡಾ. ವಿ. ಡಿ. ಐಹೊಳ್ಳಿಯವರು ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾಸೋಹಿಗಳಾದ ನಾರಾಯಣಪ್ಪ ಕುರುಬರ ಅವರು ಮಾತನಾಡಿ ಹೆತ್ತವರ ಸ್ಮರಣೆಯನ್ನು ಮಾಡಲು ಅವಕಾಶ ನೀಡಿದ ಶರಣಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಮ. ಗು. ಯಾದವಾಡ ವಂದಿಸಿದರು. ಸಭೆಯಲ್ಲಿ ಬಿ. ಎಂ. ಪಾಟೀಲ್, ಬಿ. ಟಿ. ಈಶ್ವರಗೊಂಡ ,ಜಗದೀಶ್ ಪಟ್ಟಣಶೆಟ್ಟಿ, ಎಸ್. ವೈ. ಗದಗ ಬಸವರಾಜ ಪಟ್ಟಣಶೆಟ್ಟಿ, ದೇವೇಂದ್ರ ಡಂಬಳ,ಎಸ್ ಬಿ ದೊಡಮನಿ , ಲಕ್ಷ್ಮಿ ಕುರುಬರ, ಶಕುಂತಲಾ ಮೋಸಲಗಿ,ಕಮಲಾ ಮುರಾಳ,ಎಲ್.ಪಿ.ಬಿರಾದಾರ, ಮಾಧವ ಗುಡಿ,ಅಶೋಕ ಹಂಚಲಿ,ಶ್ರೀಮತಿ ಚೋಳಕೆ,ಬಿ.ಸಿ.ಸಾರವಾಡ,ಬಸವರಾಜ ಗೋಟ್ಯಾಳ,ಆರ್,ಎಸ್, ಬಿರಾದಾರ ಶಿವಪ್ಪ ಶಿವಣಗಿ ಸುಭಾಸ ಬೆಟಗೇರಿ ಹಾಗೂ ಯರಗಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು.
          

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತ್ಯಾಗದ ಪ್ರತೀಕವೇ ಬಕ್ರೀದ್ಶಾಸಕರ ಬಗ್ಗೆ ಜಿತೇಂದ್ರ ಕಾಂಬಳೆ ಅವರು ನಾಲಿಗೆ ಹರಿ ಬಿಟ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದು ಸರಿಯಲ್ಲ : ಪ್ರಶಾಂತ ಕಾಳೆಭೂತಾನ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರ್ಚನಾ ಅಥಣಿ ಭಾಗಿ"ನಿಶ್ಚಿತ ಗುರಿಯೊಂದಿಗೆ ಅಧ್ಯಯನ ಮಾಡಿದಲ್ಲಿ ಯಶಸ್ಸು ದೊರೆಯಲು ಸಾಧ್ಯವಿದೆ" ಗರ್ಭ ಕಂಠದ ಕ್ಯಾನ್ಸರ್ ತಡೆಯುವಲ್ಲಿ ಹೆಚ್.ಪಿ.ವಿ ಲಸಿಕೆ ಪೂರಕವಾಗಿದೆ : ಬೆವನೂರಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ಎಲ್ಲ ಸಿದ್ದತೆ ಕೈಗೊಳ್ಳಿ : ಬಿರದಾರಮೇ ೩೧ರಂದು ತ್ರಿವೇಣಿ ಸಂಗಮದ ಭೃಹತ್ ಆರತಿ ಕಾರ್‍ಯಕ್ರಮ : ದತ್ತಾತ್ರೆಯ ಶಿಂತ್ರೆ ಪೋಷಕರೂ ತಮ್ಮ ಜವಾಬ್ದಾರಿ ಅರಿಯಬೇಕು: ಪ್ರೀತಿ ಕಾಮಕರವಿವಿಧ ಫಲಾನುಭವಿಗಳಿಗೆ ಸಲಕರಣೆಗಳ ವಿತರಣೆ ಶರಣ ಸಂಸ್ಕೃತಿಯಿಂದ ಮಾತ್ರ ಜಗದೋದ್ಧಾರ : ಪ್ರೊ.ಎಸ್.ಎಂ. ಶೇಖ ಅಭಿಮತ