Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದುಶ್ಚಟ ನಿಗ್ರಹಿಸಲು ಧರ್ಮವೊಂದೇ ಸೂಕ್ತ ಮಾರ್ಗ: ಈಶ್ವರ ಶಿಲ್ಲೇದಾರ


ಬೈಲಹೊಂಗಲ-ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ದುಶ್ಚಟ ಅಡ್ಡಿಯಾಗಿರುವುದನ್ನು ನಾವೆಲ್ಲರೂ ಕಾಣಬಹುದಾಗಿದೆ. ಇದರಿಂದ ಹೊರಬರಬೇಕಿದ್ದಲ್ಲಿ ಧರ್ಮವೊಂದೇ ಸೂಕ್ತ ಮಾರ್ಗವೆಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಮುಖ ಹಾಗೂ  ಪತ್ರಕರ್ತ ಈಶ್ವರ ಶಿಲ್ಲೇದಾರ ಹೇಳಿದರು.

  ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕುಲಕರ್ಣಿ ಗಲ್ಲಿಯಲ್ಲಿ ಇತ್ತೀಚಿಗೆ ನಿರ್ಮಾಣಗೊಂಡಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ದೀಪಗಳನ್ನು ಹಚ್ಚಿ ಬಾಳು ಬೆಳಗಿಸುವಂತಹ ಸಂಸ್ಕೃತಿ ನಮ್ಮದಾಗಿದ್ದು,ದುಶ್ಚಟಗಳೆoಬ ಪಿಡುಗು ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅಡ್ಡಿಯಾಗಿರುವುದು ದುರದೃಷ್ಟಕರ ಸಂಗತಿ.

ಮುಂಬರುವ ಪೀಳಿಗೆಗೆ ಪಾಶ್ಚಿಮಾತ್ಯರ ಮತ್ತಿಗೆ ಬಲಿಯಾಗಿಸದೆ ನಮ್ಮ ಅರ್ಥಪೂರ್ಣ ಆಚರಣೆಗಳ ಅಮೃತವನ್ನು ಉಣಬಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

  ಪತ್ರಕರ್ತ ರವಿ ಹುಲಕುಂದ ಮಾತನಾಡಿ ಜಿಲ್ಲೆಯ ಪತ್ರಿಕಾ ಬಳಗದ ಸಹಕಾರದಿಂದಾಗಿ ಉನ್ನತ ಸ್ಥಾನ ಲಭಿಸಿದ್ದು, ಅಧಿಕಾರದ ಅವಧಿಯಲ್ಲಿ ಪತ್ರಕರ್ತರ ನ್ಯಾಯಯುತ ಹಕ್ಕಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

   ಸಾನಿಧ್ಯ ವಹಿಸಿದ್ದ ವೇ.ಮೂ. ವಿರೇಶ್ ನಂದಳ್ಳಿಮಠ ಶಾಸ್ತ್ರಿಗಳು ಮಾತನಾಡಿ ನಾಡ ದೇವತೆ ಚಾಮುಂಡೇಶ್ವರಿ ಅಮ್ಮನವರ ಆರಾಧನೆಯಿಂದ ಸರ್ವ ಇಷ್ಟಾರ್ಥಗಳನ್ನು ಪಡೆದು ನೆಮ್ಮದಿ ಬದುಕು ತಮ್ಮದಾಗಿಸುವಂತೆ ಕರೆ ನೀಡಿದರು.

 ಇದೇ ವೇಳೆ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ದೀಪೋತ್ಸವ ನೆರವೇರಿಸಲಾಯಿತು.

  ಪ್ರಥಮ ವರ್ಷದ ದೀಪೋತ್ಸವದ ಪ್ರಯುಕ್ತ ಪತ್ರಕರ್ತರಾದ ಕುಮಾರ ರೇಶ್ಮಿ, ರವಿಕುಮಾರ ಹುಲಕುಂದ, ಶಿವು ಜೋಳದ ಅವರನ್ನು ಸನ್ಮಾನಿಸಲಾಯಿತು.

  ಉಳವಪ್ಪ ಶಿಲ್ಲೇದಾರ,ಮಹಾಂತೇಶ ಅಂಬಡಗಟ್ಟಿ,ಸಂಗಮೇಶ ಹುಲಗನ್ನವರ,ರಾಮು ರಜಪೂತ, ಕಲ್ಮೇಶ ದೇಮಕ್ಕನವರ,ಸಿದ್ದು ಶಿರವಂತಿ, ಮಂಜು ಒರ್ಕಿ, ಆನಂದ ಮರಡಿ, ಸುರೇಶ ಹೋಟಿ, ಮಂಜುನಾಥ್ ಹಂಪಿಹೊಳಿ,ಸಾಹಿಲ್ ಪಕಾಲಿ, ಪ್ರವೀಣ್ ವ್ಯಾಪಾರಿ ಸೇರಿದಂತೆ ಭಕ್ತರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ