ಇಂಡಿ : ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಮತ್ತು ಬುದ್ಧ ಪೂರ್ಣಿಮಾ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು ಕಾರ್ಯಕ್ರಮವನ್ನು ಕಾರ್ಮಿಕರು ದೀಪಗಳನ್ನು ಬೆಳಗಿಸುವ ಮೂಲಕ ಬುದ್ಧ ಮತ್ತು ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಖಾಂತರ ಕಾರ್ಯಕ್ರಮ ಪ್ರಾರಂಭಿಸಲಾಯಿತು ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಮುಖಂಡರು ಕಾರ್ಮಿಕ ಭಾಂಧವರು ಭಾಗವಹಿಸಿದ್ದರು. ಕಾರ್ಮಿಕ ಮುಖಂಡರು ಆದ ಲಾಲಸಾಬ ನದಾಫ ರವರು ಕಾರ್ಮಿಕ ದಿನಾಚರಣೆ ಮಹತ್ವದ ಬಗ್ಗೆ ಹೇಳಿದರು ಕಾರ್ಮಿಕ ಮುಖಂಡರಾದ ಶ್ರೀಮತಿ ಶ್ರೀದೇವಿ ಕಾಶಿನಾಥ್ ಬಡಿಗೇರ್ ರವರು ಕಾರ್ಮಿಕರ ಸೌಲಭ್ಯ ಮತ್ತು ಯೋಜನೆ ಬಗ್ಗೆ ಹೇಳಿದರು ನಂತರ ಕಾರ್ಮಿಕ ನಿರೀಕ್ಷಕರಾದ
ಡಿ. ಎಮ್ .ದೇವರಮನಿ ಯವರು ಕಾರ್ಮಿಕರ ಹೋರಾಟ ಮತ್ತು ಕಾರ್ಮಿಕರ ದಿನಾಚರಣೆಯ ನಡೆದುಬಂದ ಹಾದಿ ಮತ್ತು ಇತಿಹಾಸದ ಕುರಿತು ವಿವರಿಸಿದರು ನಂತರ ಕಾರ್ಮಿಕ ನಿರೀಕ್ಷಕರ ಕಛೇರಿಯ ಸಿಬ್ಬಂದಿಯಾದ ಸುಭಾಷ್ ಚಂದ್ರ ಟೋನಿ ತಮ್ಮ ಅನಿಸಿಕೆ ಅಭಿಪ್ರಾಯಗಳೊಂದಿಗೆ ವಿರಾಮ ನೀಡಿದರು ಕಾರ್ಯಕ್ರಮದ ನಂತರ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ನೀಡಲಾಯಿತು ಅಲ್ಪ ಉಪಹಾರ ಮತ್ತು ಚಹಾ ದೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ ನೀಡಲಾಯಿತು. ಧನ್ಯವಾದಗಳು
