Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ವೈ ಎಂ ಸಿ ಕಾಲೇಜಿನಲ್ಲಿ  ಅಂತರಾಷ್ಟ್ರೀಯ ಪರಿಸರ ದಿನಾಚರಣೆ 

ಬಳ್ಳಾರಿ. ಜೂ. 06 : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಶುಕ್ರವಾರದಂದು  ಸಿವಿಲ್ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಪರಿಸರ ದಿನಾಚರಣೆ  ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಪದಾದಿಕಾರಿಗಳು ಮುಖ್ಯ ಅತಿಥಿಗಳಾಗಿ  ಹೊಸೂರು ಈಶ್ವರ ಗೌಡ್ ಮಾಜಿ ಅಧ್ಯಕ್ಷರು ಅಸೋಸಿಯೇಷನ್ ​​ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎ ಸಿ ಸಿ ಇ ಎ) ಬಳ್ಳಾರಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ  ಅರವಿಂದ ಪಾಟೀಲ್ ,ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ. ಹೆಚ್., ಉಪಪ್ರಾಂಶುಪಾಲರು ಡಾ.ಸವಿತಾ ಸೋನೋಳಿ, ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
 ಈ ಸಂದರ್ಭದಲ್ಲಿ ಹೊಸೂರು ಈಶ್ವರ ಗೌಡ್ ಮಾತನಾಡಿ, ವಿಶ್ವದಲ್ಲಿ ಲಕ್ಷಾಂತರ ಗ್ರಹಗಳು, ಗಲಾಕ್ಸಿಗಳು ಇದ್ದರೇ, ಭೂಮಿಯೋಂದೇ ಇದೆ, ಅದನ್ನು ಎಲ್ಲರು ಸೇರಿ ಉಳಿಸಿ, ಬೆಳಸಬೇಕು , ಈ ಪರಿಸರ ದಿನಾಚರಣೆಯ ಉದ್ದೇಶ ಮತ್ತು ಅದನ್ನು ಹೇಗೆ ಕಾಪಾಡಬೇಕೆಂದು,ಆಹಾರ ವ್ಯರ್ಥ, ನೀರಿನ ವ್ಯರ್ಥ, ಪರಿಸರಮಾಲಿನ್ಯ ನಿಯಂತ್ರಣ, ಕೀಟನಾಶಕಗಳ ಸೀಮಿತಗೋಳಿಸುವಿಕೆ ಮುಂತಾದ  ಉದಾಹರಣೆಗಳ ಮೂಲಕ  ವಿವರಿಸಿದರು. ಇದೇ ಸಂದರ್ಭದಲ್ಲಿ ಎಂಎಲ್ಸಿ  ವೈಎನ್ ಸತೀಶ್ ಫೌಂಡೇಶನ್ ಅವರ ಸಂಸ್ಥೆಯಿಂದ ವೇಸ್ಟ್ ಪೇಪರ್ ಗಳಿಂದ ರಿಸೈಕ್ಲಿಂಗ್ ಮಾಡಿ ಪೆನ್ಸಿಲ್ ತಯಾರಿಸಿದ ಸ್ಯಾಂಪಲ್ ಪೆನ್ಸಿಲ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ. ಹೆಚ್ ಮಾತನಾಡಿ ನಮ್ಮ ಸುತ್ತಮುತ್ತಲಿನ  ಪರಿಸರವು ಒಂದು ಅಮೂಲ್ಯ ರತ್ನವಿದ್ದಂತೆ, ಅದನ್ನ ಮುಂದಿನ ಪೀಳಿಗೆಗೆ, ಉಳಿಸಿ ಬೆಳಸುವುದು ನಮ್ಮೆಲ್ಲರ ಕರ್ತವ್ಯ, 2026 ರ ವಿಶ್ವ ಪರಿಸರ ದಿನದ ಪ್ರಮುಖ ಗಮನವು ಜಾಗತಿಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಕಾಡುಗಳು, ಸಾಗರಗಳು ಮತ್ತು ಜೌಗು ಪ್ರದೇಶಗಳಂತಹ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಪ್ರಕೃತಿ ಆಧಾರಿತ ಪರಿಹಾರಗಳನ್ನು ಬಳಸಿಕೊಳ್ಳುವುದನ್ನು ಒತ್ತಿಹೇಳುತ್ತದೆ.
 ಈ ಕಾರ್ಯಕ್ರಮದಲ್ಲಿ 
ವೀ.ವಿ.ಸಂಘದ ಪದಾಧಿಕಾರಿಗಳಾದ  ಡಾ. ಕಣೇಕಲ್ ಮಹಾಂತೇಶ್, ಅಧ್ಯಕ್ಷರು,  ಜಾನೆಕುಂಟೆ ಬಸವರಾಜ್ ಉಪಾಧ್ಯಕ್ಷರು, ವಿ.ವಿ. ಸಂಘ, ಮತ್ತು ಅಧ್ಯಕ್ಷರು, ಆರ್.ವೈ.ಎಂ.ಇ.ಸಿ, ಬಳ್ಳಾರಿ, ಡಾ. ಅರವಿಂದ್ ಪಟೇಲ್, ಕಾರ್ಯದರ್ಶಿ,  ಮೇಟಿ ಪಂಪನ ಗೌಡ ಸಹಾಯಕ ಕಾರ್ಯದರ್ಶಿ,  ಬೈಲುವದ್ದಿಗೇರಿ ಯೆರ್ರಿಸ್ವಾಮಿ ಖಜಾಂಚಿ, ಆರ್.ವೈ.ಎಂ.ಇ.ಸಿ. ಆಡಳಿತ ಮಂಡಳಿ ಸದಸ್ಯರು,  ಪ್ರಭು ಸ್ವಾಮಿ ಎಸ್.ಎಂ,  ಬಾಡದ ಪ್ರಕಾಶ್, ಎಲ್ಲರಿಗೂ ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ